Get Updates
Get notified of breaking news, exclusive insights, and must-see stories!

ಜಾತಿ ವ್ಯವಸ್ಥೆಯ ವಿರುದ್ಧ ಮತ್ತೆ ಸಮರ ಆರಂಭಿಸಿ: ಸಾವರ್ಕರ್ ಮೊಮ್ಮಗ

ಶಿವಮೊಗ್ಗ, ಅಕ್ಟೋಬರ್‌ 23: ಹಿಂದುತ್ವದ ಐಕಾನ್ ವಿ ಡಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ತಮ್ಮ ತಾತ ಪ್ರಾರಂಭಿಸಿದ ಜಾತಿ ವ್ಯವಸ್ಥೆಯ ವಿರುದ್ಧ ಸಮರವನ್ನು ಪುನಃ ಪ್ರಾರಂಭಿಸುವ ಅಗತ್ಯವಿದೆ ಎಂದು ಹೇಳಿದರು.

ಇಲ್ಲಿ ಆಯೋಜಿಸಿದ್ದ 'ಸಾವರ್ಕರ್ ಸಾಮ್ರಾಜ್ಯ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ನನ್ನ ತಾತ ಸಾವರ್ಕರ್ ಅವರು ದೇಶದಲ್ಲಿ ಜಾತಿ ಪದ್ಧತಿಯನ್ನು ತೊಡೆದುಹಾಕಲು ಬಯಸಿದ್ದರು. ಅವರು ಸಾಯುವವರೆಗೂ ಅದರ ವಿರುದ್ಧ ಹೋರಾಡಿದರು. ಸಾವರ್ಕರ್ ಅವರು ಜಾತಿ ಭೇದವಿಲ್ಲದೆ ಎಲ್ಲ ಹಿಂದೂಗಳನ್ನು ಒಗ್ಗೂಡಿಸಲು ಬಯಸಿದ್ದರು. ಜಾತಿ ವ್ಯವಸ್ಥೆಯ ವಿರುದ್ಧ ಸಮರವನ್ನು ಪುನರಾರಂಭಿಸಲು ಸಮಯ ಪಕ್ವವಾಗಿದೆ ಎಂದರು.

ಸ್ವಾತಂತ್ರ್ಯ ದಿನದಂದು ಶಿವಮೊಗ್ಗದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ''ಶಿವಮೊಗ್ಗ ಹಿಂದೂಗಳ ಶಕ್ತಿಯ ಕೇಂದ್ರವಾಗಿದೆ ಎಂದು ತಿಳಿಯದೆ ಕೆಲವರು ತಮ್ಮ ಬ್ಯಾನರ್ ಹಾಕುವುದನ್ನು ವಿರೋಧಿಸಿದರು. ಇದರ ಪರಿಣಾಮವಾಗಿ ಸಾವರ್ಕರ್ ಅವರ ಆದರ್ಶಗಳು ಕರ್ನಾಟಕದಾದ್ಯಂತ ಹರಡಿತು. ಹಿಂದೂಗಳನ್ನು ಒಗ್ಗೂಡಿಸುವುದು ಸಾವರ್ಕರ್ ಅವರ ಕನಸಾಗಿತ್ತು ಮತ್ತು ದೇಶವಿರೋಧಿ ಶಕ್ತಿಗಳು ಇನ್ನೂ ನಮ್ಮ ಸುತ್ತಲೂ ಇವೆ. ಅಂತಹ ಶಕ್ತಿಗಳ ವಿರುದ್ಧ ಹೋರಾಡಲು, ಸಾವರ್ಕರ್ ಅವರ ಹಿಂದುತ್ವದ ಮಂತ್ರವನ್ನು ಜನರಲ್ಲಿ ಹರಡಬೇಕು'' ಎಂದು ಸಾತ್ಯಕಿ ಹೇಳಿದರು.

Start war again against caste system: Savarkars grandson

ಕರ್ನಾಟಕ ದೇವಸ್ಥಾನ ಸಂವರ್ಧನ ಸಂಸ್ಧೆ ಸಂಯೋಜಕ ಮನೋಹರ ಮಾತಾಡ್ ಮಾತನಾಡಿ, 1857ರ ಭಾರತೀಯ ಬಂಡಾಯವನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದು ಭಾರತೀಯರಲ್ಲಿ ಆತ್ಮಸ್ಥೈರ್ಯ ತುಂಬಿದವರು ಸಾವರ್ಕರ್. ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದ ದಿನಗಳನ್ನು ಉಲ್ಲೇಖಿಸಿದ ಅವರು, ಬ್ರಿಟಿಷರು ಜೈಲಿನ ಕೈದಿಗಳನ್ನು ಗೋಮಾಂಸ ತಿನ್ನುವಂತೆ ಒತ್ತಾಯಿಸುವ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುತ್ತಿದ್ದಾರೆ. ಆದರೆ ಸಾವರ್ಕರ್ ಅವರಿಗೆ ಗಂಗಾಜಲ ಮತ್ತು ತುಳಸಿಯನ್ನು ಅರ್ಪಿಸುವ ಮೂಲಕ ಅವರನ್ನು ಹಿಂದೂಗಳಾಗಿ ಪರಿವರ್ತಿಸಿದರು ಎಂದರು.

''ಅಲ್ಲದೆ ಎಲ್ಲ ಜಾತಿಯ ಜನರಿಗಾಗಿ ಪತಿತ ಪಾವನ ಮಂದಿರ ಆರಂಭಿಸಿದರು. ಅಲ್ಲಿ ಇಂದಿಗೂ ದಲಿತರು ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೇರುವ ಪ್ರಸ್ತಾಪವನ್ನು ಸಾವರ್ಕರ್ ನಯವಾಗಿ ತಿರಸ್ಕರಿಸಿದ್ದರು ಮತ್ತು 1965 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಕಾಂಗ್ರೆಸ್ ಸೇರಿದರೆ ದೇಶದ್ರೋಹಿಯಾಗುತ್ತಿದ್ದರು'' ಎಂದು ಹೇಳಿದರು.

Start war again against caste system: Savarkars grandson

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ವಿ ಡಿ ಸಾವರ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈಶ್ವರಪ್ಪ ಮತ್ತು ಸಾತ್ಯಕಿ ಪುಷ್ಪನಮನ ಸಲ್ಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+