ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಆಮ್ ಆದ್ಮಿಗೆ ಗುದ್ದು ನೀಡಿದ ಕುಮಾರಸ್ವಾಮಿ

By Srinath
|
Google Oneindia Kannada News

ಶಿವಮೊಗ್ಗ, ಫೆ. 18: ದಿಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಲೋಕಸಭಾ ಚುನಾವಣೆಯತ್ತ ಗಮನ ನೆಟ್ಟಿರುವ ಅರವಿಂದ ಕೇಜ್ರಿವಾಲಾ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಜಾತ್ಯತೀತ ಜನತಾದಳದ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಮಟ್ಟಿಗೆ ಗುದ್ದು ನೀಡಿದ್ದಾರೆ.

'ಆಮ್ ಆದ್ಮಿ ಪಕ್ಷ ಕೇವಲ ಶೋಕಿಗಾಗಿ ಚುನಾವಣಾ ಆಖಾಡಕ್ಕೆ ಇಳಿದಿದೆಯೇ ಹೊರತು ಸಮಾಜದ ಉದ್ಧಾರ ಹಾಗೂ ರಾಜಕಾರಣಕ್ಕೆ ಅಲ್ಲ' ಎಂದು ಛೇಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿ, ಏನೂ ಸಾಧನೆ ಮಾಡದೆ ಪಲಾಯನಗೈದು ಮತ್ತೆ ಜನರ ಮೇಲೆ ಚುನಾವಣೆ ಹೊರೆಸುವ ಮೂಲಕ ಅರವಿಂದ ಕೇಜ್ರಿವಾಲಾ ಅವರು ರಾಜಕೀಯ ಅರಾಜಕತೆ ಸೃಷ್ಟಿಸಿದ್ದಾರೆ.

No effect of Aam Aadmi in Karnataka- JDS leader HD Kumaraswamy
ಮುಂದೆ, ಲೋಕಸಭಾ ಚುನಾವಣೆಗೆ ಕೇವಲ ಶೋಕಿಗಾಗಿ ಆಮ್ ಆದ್ಮಿಗಳು ಆಖಾಡಕ್ಕೆ ಇಳಿಯಲು ಮುಂದಾಗುತ್ತಿದ್ದಾರೆ ಎಂದು ಎಚ್ಡಿಕೆ ವ್ಯಂಗ್ಯವಾಡಿದ್ದಾರೆ. ಆಮ್ ಆದ್ಮಿ ಪಕ್ಷದ ನಿಜವಾದ ಬಣ್ಣ ಬಯಲಾಗಿದೆ. ರಾಜ್ಯದಲ್ಲಿ ಅದರ ಪ್ರಭಾವ ಇರುವುದಿಲ್ಲ ಎಂದು ಎಚ್ಡಿಕೆ ಅಭಿಪ್ರಾಯಪಟ್ಟರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಿಂದ 13 ಸ್ಥಾನ ಗೆಲ್ಲುವ ಗುರಿಯನ್ನು ಜೆಡಿಎಸ್ ಪಕ್ಷ ಹೊಂದಿದೆ. ಎಲ್ಲೆಡೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮತ್ತು ಒಬ್ಬರಿಗೊಬ್ಬರು ಕಾಲೆಳೆಯುವ ಪ್ರವೃತ್ತಿ ಮತ್ತು ಕೇವಲ ಘೋಷಣೆಗಳನ್ನು ಮಾಡಿಕೊಂಡು ಜನಪರ ಯೋಜನೆಗಳನ್ನು ನಿರ್ಲಕ್ಷ್ಯಿಸಿರುವ ಸಿದ್ದರಾಮಯ್ಯ ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಡಿಕೆ ಹೇಳಿದರು.

ನರೇಂದ್ರ ಮೋದಿ ರಾಜ್ಯಕ್ಕೆ ಬಂದಿದ್ದಾರೆ. ಬಿಜೆಪಿ ನಾಯಕರು ಮತ್ತೆ ಸಭ್ಯರೆಂಬ ಮುಖವಾಡ ತೊಟ್ಟು ಜನರ ಮುಂದೆ ಹೋಗಿದ್ದಾರೆ. ಅವರ ನಿಜಮುಖ ಈಗಾಗಲೇ ಗೊತ್ತಾಗಿದೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.

English summary
No effect of Aam Aadmi in Karnataka predicts JDS leader, ex CM HD Kumaraswamy. He criticised the AAP Chief Minister Arwind Kejriwal for not keeping his words. He also said that Congress and BJP will lose face in the State. He said that his party has an aim to win 13 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X