ತ್ಯಾವರೆಕೊಪ್ಪದಿಂದ ಗುಜರಾತ್‌ಗೆ ಹೊರಟ 6 ಚಿರತೆಗಳು

ಶಿವಮೊಗ್ಗ, ಅಕ್ಟೋಬರ್ 29 : ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ 12 ಚಿರತೆಗಳು ಗುಜರಾತ್ ಮತ್ತು ಬೆಂಗಳೂರಿಗೆ ಹೊರಟು ನಿಂತಿವೆ. ಈಗಾಗಲೇ ಸಕ್ರೆಬೈಲು ಆನೆ ಬಿಡಾರದ 5 ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.

ಸಿಂಹಧಾಮದಲ್ಲಿ 6 ಮರಿಗಳು ಸೇರಿದಂತೆ 26 ಚಿರತೆಗಳಿವೆ. ಇವುಗಳಲ್ಲಿ 6 ಚಿರತೆಯನ್ನು ಅಹಮದಾಬಾದ್‌ನ ಕಮಲಾ ನೆಹರೂ ಜೈವಿಕ ಉದ್ಯಾನ ಮತ್ತು ಅಷ್ಟೇ ಸಂಖ್ಯೆಯ ಚಿರತೆಗಳನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕಳುಹಿಸಲಾಗುತ್ತಿದೆ.

Karnataka can hand over 6 leopard to Gujarat

ಸಿಂಹಧಾಮದಿಂದ 18 ಚಿರತೆಗಳನ್ನು ಬೇರೆ ಕಡೆಗೆ ಹಸ್ತಾಂತರ ಮಾಡಲಾಗುತ್ತಿದೆ. ಆದರೆ, ಮೈಸೂರು ಸಮೀಪದ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಅಹಮದಾಬಾದ್‌ ಮತ್ತು ಬೆಂಗಳೂರಿಗೆ ಚಿರತೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ.

ಆನೆಗಳು ಉತ್ತರ ಪ್ರದೇಶಕ್ಕೆ : ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ 22 ಆನೆಗಳಿವೆ. ಇವುಗಳಲ್ಲಿ 5 ಆನೆಗಳನ್ನು ಉತ್ತರ ಪ್ರದೇಶಕ್ಕೆ ಕೊಡುಗೆಯಾಗಿ ನೀಡಲಾಗುತ್ತದೆ. ಉತ್ತರ ಪ್ರದೇಶದ ದುದ್ವಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಫಾರಿಗಾಗಿ ಈ ಆನೆಗಳನ್ನು ಕಳುಹಿಸಲಾಗುತ್ತಿದೆ.

ಪಾರ್ವತಿ, ಕಿರಣ (4), ಭಾಸ್ಕರ (5), ಅಮೃತಾ (13), ರಾಘವೇಂದ್ರ (30) ಆನೆಗಳನ್ನು ಕಳುಹಿಸಿ ಕೊಡಲಾಗುತ್ತದೆ. ಈ ಐದು ಆನೆಗಳಿಗೆ ಹೊಂದಿಕೊಳ್ಳಲು ಉತ್ತರ ಪ್ರದೇಶದ ಮಾವುತರು ಸಕ್ರೆಬೈಲಿಗೆ ಬಂದಿದ್ದು, ತರಬೇತಿ ಪಡೆಯುತ್ತಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಆನೆಗಳು ಉತ್ತರ ಪ್ರದೇಶಕ್ಕೆ ಹೊರಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+