ಅಯೋಧ್ಯೆಯಲ್ಲೇ ರಾಮಮಂದಿರದ ಪರ ಸುಪ್ರೀಂ ತೀರ್ಪು: ಈಶ್ವರಪ್ಪ ವಿಶ್ವಾಸ
Recommended Video

ಅಯೋಧ್ಯೆಯಲ್ಲೇ ರಾಮಮಂದಿರದ ಪರ ಸುಪ್ರೀಂ ತೀರ್ಪು: ಈಶ್ವರಪ್ಪ ವಿಶ್ವಾಸ | Oneindia Kannada
ಶಿವಮೊಗ್ಗ, ಸೆ.27: ಶ್ರೀರಾಮ ಜನಿಸಿದ ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಜನ್ಮಭೂಮಿ ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಬಿಜೆಪಿಯ ದಶಕಗಳ ಹೋರಾಟ, ಈ ಕುರಿತಂತೆ ಸುಪ್ರೀಂಕೋರ್ಟ್ ಶೀಘ್ರದಲ್ಲಿ ತೀರ್ಪು ನೀಡಲಿದ್ದು, ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣವಾಗುವಂತೆ ತೀರ್ಪು ಬರುವ ವಿಶ್ವಾಸವಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬುದು ರಾಮ ಭಕ್ತರ ಕನಸು ಇದಕ್ಕಾಗಿ ಲಕ್ಷಾಂತರ ರಾಮಭಕ್ತರು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ.

ಇದು ಹಿಂದು, ಮುಸ್ಲಿಂ ಅಥವಾ ಕ್ರೈಸ್ತ ಧರ್ಮ ಎಂಬ ಪ್ರಶ್ನೆಯಲ್ಲ ಭಾರತದಲ್ಲಿ ನೆಲೆಸಿರುವ ಎಲ್ಲಾ ಭಾರತೀಯರು ಹಿಂದುಗಳೇ ಆಗಿದ್ದಾರೆ, ಎಲ್ಲಾ ಹಿಂದುಗಳಿಗೆ ಶ್ರೀರಾಮನಲ್ಲಿ ಅಪಾರ ಭಕ್ತಿ ಇದೆ. ಭಕ್ತರ ಕನಸು ನನಸಾಗುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದರು.












Click it and Unblock the Notifications