ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಕವಿಶೈಲಕ್ಕೆ ಅಮಿತ್ ಶಾ ಭೇಟಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 26 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಷ್ಟ್ರಕವಿ ಕುವೆಂಪು ಅವರ ನಿವಾಸ ಕವಿಶೈಲಕ್ಕೆ ಸೋಮವಾರ ಭೇಟಿ ನೀಡಿದರು.

ಸೋಮವಾರ ಮಧ್ಯಾಹ್ನ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಸಮೀಪದ ಗಡಿಕಲ್ಲು ಎಂಬಲ್ಲಿನ ಹೆಲಿಪ್ಯಾಡ್‌ಗೆ ಅಮಿತ್ ಶಾ ಆಗಮಿಸಿದರು. ಮೊದಲು ರಾಷ್ಟ್ರಕವಿ ಕುವೆಂಪು ಅವರ ಸಮಾಧಿಗೆ ನಮಿಸಿ ನಂತರ ಕುವೆಂಪು ಅವರ ಮನೆಗೆ ತೆರಳಿದರು.

ಕುವೆಂಪು ಪದ್ಮವಿಭೂಷಣ ಪ್ರಶಸ್ತಿ ಪದಕ ಇನ್ನು ನೆನಪು ಮಾತ್ರಕುವೆಂಪು ಪದ್ಮವಿಭೂಷಣ ಪ್ರಶಸ್ತಿ ಪದಕ ಇನ್ನು ನೆನಪು ಮಾತ್ರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡ್ಡಿಯೂರಪ್ಪ, ಸಚಿವ ಅನಂತ ಕುಮಾರ್, ಆರಗ ಜ್ಞಾನೇಂದ್ರ, ಶಾಸಕ ಜೀವರಾಜ್, ಎಂಎಲ್‌ಸಿ ಕೋಟಾ ಶ್ರೀನಿವಾಸ್ ಪೂಜಾರಿ, ಕರ್ನಾಟಕ ಮುರಳೀಧರ ರಾವ್ ಮೊದಲಾದ ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.

Amit Shah

ಮಾಧ್ಯಮಗಳ ಜೊತೆ ಮಾತನಾಡಿದ ಅಮಿತ್ ಶಾ, 'ಕುವೆಂಪು ಸ್ಮಾರಕಕ್ಕೆ ಭೇಟಿ ನೀಡಿ ಆನಂದವಾಗಿದೆ. ಕನ್ನಡ ಸಾಹಿತ್ಯಕ್ಕೆ ಕುವೆಂಪು ಕೊಟ್ಟ ಕೊಡಿಗೆ ಅಪಾರ. ಕನ್ನಡ ಸಾಹಿತ್ಯಕ್ಕೆ ಮಾತ್ರವಲ್ಲ ಅವರ ದೇಶದ ಸಾಹಿತ್ಯಕ್ಕೂ ಅಮೂಲ್ಯ ವಾದ ಕೊಡುಗೆ ನೀಡಿದ್ದಾರೆ' ಎಂದು ಹೇಳಿದರು.

ಕುವೆಂಪು ಉದಯರವಿ ನಿವಾಸಕ್ಕೆ 'ಸ್ಮಾರಕ' ರೂಪ: ಸಿದ್ದರಾಮಯ್ಯಕುವೆಂಪು ಉದಯರವಿ ನಿವಾಸಕ್ಕೆ 'ಸ್ಮಾರಕ' ರೂಪ: ಸಿದ್ದರಾಮಯ್ಯ

'ಕುವೆಂಪು ಅವರ ಸಾಹಿತ್ಯ ಕೃಷಿಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಕುವೆಂಪು ಅವರ ರಾಮಾಯಣ ದರ್ಶನಂ ಮತ್ತು ನಾಡಗೀತೆಯಂತಹ ಕೊಡುಗೆಯನ್ನು ಯಾರು ಮರೆಯಲು ಸಾದ್ಯವಿಲ್ಲ' ಎಂದು ಅಮಿತ್ ಶಾ ಬಣ್ಣಿಸಿದರು.

'ವಿವೇಕಾನಂದರ ಪ್ರೇರಣೆಯಂತೆ ಏಕತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾದದು. ಕರ್ನಾಟಕದ ಇಂದಿನ ಸ್ಥಿತಿಗತಿಗೆ ಕುವೆಂಪು ಅವರ ಸಂದೇಶ ಹೆಚ್ಚು ಪ್ರಸ್ತುತವಾಗಿದೆ' ಎಂದರು.

kuppalli

ಕವಿಶೈಲಕ್ಕೆ ಭೇಟಿ ನೀಡಿದ ಬಳಿಕ ಅಮಿತ್ ಶಾ ತೀರ್ಥಹಳ್ಳಿಗೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿದರು.

English summary
BJP national president Amit Shah on March 26, 2018 visited the Kavi Shaila, Kuppalli, Shivamoga district. Kavishaila is a rock monument made of megalithic rocks and dedicated to National Poet Kuvempu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X