ಜಾರ್ಖಂಡ್ ನಲ್ಲಿ ಹತ್ತು ದಿನ ಹಸಿವಿನಲ್ಲಿದ್ದು ಮೃತಪಟ್ಟ 40ರ ಹರೆಯದ ವ್ಯಕ್ತಿ
ರಾಂಚಿ (ಜಾರ್ಖಂಡ್), ಜುಲೈ 18: ಜಾರ್ಖಂಡ್ ನಲ್ಲಿ ಹಸಿವಿನಿಂದ ಮೃತಪಟ್ಟ ಮತ್ತೊಂದು ಶಂಕಾಸ್ಪದ ಪ್ರಕರಣ ಬೆಳಕಿಗೆ ಬಂದಿದೆ. ಛತ್ರ ಜಿಲ್ಲೆಯ ದೊಡಗಧ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಹಸಿವಿನಿಂದ ಇದ್ದ ಕಾರಣಕ್ಕೆ ನಲವತ್ತರ ಹರೆಯದ ಝಿಂಗುರ್ ಭಿಯುನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆದರೆ, ಹಳ್ಳಿಯ ಮುಖ್ಯಸ್ಥರಾದ ರಾಜವಂತಿ ದೇವಿ ಅವರು ಹೇಳಿದ ಪ್ರಕಾರ, ನಿರುದ್ಯೋಗದಿಂದ ಆತ ಸಾವನ್ನಪ್ಪಿದ್ದಾರೆ. "ಯಾರಿಗೆ ಕೆಲಸ ಮಾಡಲು ಸಾಧ್ಯವಿಲ್ಲವೋ ಅಂಥ ವ್ಯಕ್ತಿ ಹಸಿವಿನಿಂದ ಖಂಡಿತಾ ಸಾವನ್ನಪ್ಪುತ್ತಾನೆ. ತನ್ನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನನ್ನ ಬಳಿ ತಿಳಿಸಿದ್ದರೆ ಏನಾದರೂ ವ್ಯವಸ್ಥೆ ಮಾಡುತ್ತಿದ್ದೆ" ಎಂದು ಆಕೆ ಹೇಳಿದ್ದಾರೆ.
ಭಿಯುನ್ ಸಾವಿನ ನಂತರ ಆ ತಕ್ಷಣವೇ ಜಿಲ್ಲಾ ಆಡಳಿತದಿಂದ ಆತನ ಕುಟುಂಬಕ್ಕೆ ಆಹಾರ ಧಾನ್ಯವನ್ನು ಒದಗಿಸಲಾಗಿದೆ. ಭಿಯುನ್ ನ ಪತ್ನಿ ರೂಬಿ ದೇವಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದ ಮನೆಯಲ್ಲಿ ಆಹಾರ ಪದಾರ್ಥ ಇರಲಿಲ್ಲ. ಹಳ್ಳಿಯಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿದುದಾಗಿ ತಿಳಿಸಿದ್ದಾರೆ.

ಕೆಲವು ಕಾಲ ಹಳ್ಳಿಗರು ಕೂಡ ಈ ಕುಟುಂಬಕ್ಕೆ ಆಹಾರ ನೀಡಿದ್ದು, ಆ ನಂತರ ಅವರು ಕೂಡ ನಿಲ್ಲಿಸಿದ್ದಾರೆ. "ನಮ್ಮ ಹೆಸರಲ್ಲಿ ಯಾವುದೇ ಪಡಿತರ ಚೀಟಿ ಇಲ್ಲ" ಎಂದು ರೂಬಿ ದೇವಿ ಹೇಳಿದ್ದಾರೆ. ಅಂದ ಹಾಗೆ ಭಿಯುನ್ ನ ನಾಲ್ಕು ವರ್ಷದ ಮಗನ ಹೆಸರು ಆತನ ಅಜ್ಜಿಗೆ ವಿತರಿಸಿರುವ ಪಡಿತರ ಚೀಟಿಯಲ್ಲಿ ಇದೆ. ಇತ್ತೀಚೆಗೆ ಆಕೆ ಮೃತಪಟ್ಟಿದ್ದಾರೆ.
ಇನ್ನು ಕನ್ಹಛತ್ತಿ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಪಪ್ಪು ರಜಾಕ್ ಮಾತನಾಡಿ, ಭಿಯುನ್ ಕಳೆದ ಕೆಲ ತಿಂಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಆದ್ದರಿಂದ ಆಹಾರ ತೆಗೆದುಕೊಳ್ಳಲು ಆಗದೆ, ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ.
"ಹಸಿವಿನಿಂದ ಆತ ಮೃತಪಟ್ಟಿರುವುದಲ್ಲ. ಸರಿಯಾದ ಕಾರಣ ತಿಳಿದುಕೊಳ್ಳುವ ಸಲುವಾಅಗಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು" ಎಂದಿದ್ದಾರೆ.
ಹಳ್ಳಿ ಪ್ರಧಾನ್ ಹೇಳುವ ಪ್ರಕಾರ, ರಾಜ್ಯ ಸರಕಾರದಿಂದ ದೊರೆಯಬೇಕಾದ ಆಹಾರ ಧಾನ್ಯವನ್ನು ದೊರಕಿಸಿ ಕೊಟ್ಟಿದ್ದೇವೆ ಎಂದಿದ್ದಾರೆ. ಈ ಮಧ್ಯೆ, ಡೆಪ್ಯೂಟಿ ಕಮಿಷನರ್ ಜಿತೇಂದ್ರ ಕುಮಾರ್ ಸಿಂಗ್ ಅವರು ಸಾವಿಗೆ ಸರಿಯಾದ ಕಾರಣ ತಿಳಿಯಲು ತನಿಖೆಗೆ ಆದೇಶ ನೀಡಿದ್ದಾರೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications