Toll: ಬೆಂಗಳೂರು ಪ್ರವೇಶಿಸುವ ಈ ಪ್ರಮುಖ ರಸ್ತೆಯಲ್ಲೂ ಟೋಲ್ ಆರಂಭ
ಬೆಂಗಳೂರಿಗೆ ಈಗಾಗಲೇ ಸುತ್ತಲೂ ಟೋಲ್ ರಸ್ತೆಗಳಿವೆ. ನಗರ ಪ್ರವೇಶಿಸಲು ಒಂದಾದರೂ ಟೋಲ್ ರಸ್ತೆ ಮೂಲಕವೇ ಬರಬೇಕಿದೆ. ಆದರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಯಾವುದೇ ಟೋಲ್ ರಸ್ತೆ ಈವರೆಗೆ ಇರಲಿಲ್ಲ. ಇನ್ನು ಮುಂದೆ ಕನಕಪುರ ಮಾರ್ಗದಲ್ಲಿ ಸಂಚರಿಸುವವರು ಕೂಡ ಟೋಲ್ ಶುಲ್ಕ ಪಾವತಿಸಬೇಕಾಗಿದೆ. ಇಂದಿನಿಂದಲೇ ಟೋಲ್ ಸಂಗ್ರಹ ಶುರುವಾಗಿದ್ದು, ಬೆಂಗಳೂರಿಗೆ ಸದ್ಯ ನಾಲ್ಕು ದಿಕ್ಕಿನಿಂದಲೂ ಟೋಲ್ ರಸ್ತೆಗಳು ಆವರಸಿಕೊಂಡಿವೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಬಳಿಕ ಹೆಚ್ಚಿನ ಟೋಲ್ ಹಣ ಪಾವತಿಸಬೇಕು ಎಂದು ಪ್ರಯಾಣಿಕರು ಹಲವು ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಈ ಪೈಕಿ ಬೆಂಗಳೂರು-ಕನಕಪುರ ರಸ್ತೆ ಕೂಡ ಒಂದು. ಈಗ ಕನಕಪುರ ಮಾರ್ಗದ ರಸ್ತೆಯಲ್ಲೂ ಟೋಲ್ ಕಟ್ಟಿಯೇ ವಾಹನಗಳು ಸಂಚರಿಸಬೇಕಾಗಿದೆ. ಕಗ್ಗಲೀಪುರದ ಸೋಮನಹಳ್ಳಿ ಬಳಿ ಟೋಲ್ ಗೇಟ್ ಶುರುವಾಗಿದ್ದು, ಕಾರುಗಳಿಗೆ 85 ರೂಪಾಯಿ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಶುಲ್ಕ ಇಲ್ಲ. ಆದರೆ ಈ ರಸ್ತೆಯಲ್ಲಿ ಟೋಲ್ ಸಂಗ್ರಹಕ್ಕೆ ಈ ಭಾಗದ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಇದರಿಂದ ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ. ಬೆಂಗಳೂರು-ಕನಕಪುರ-ಮಳವಳ್ಳಿ ಮಾರ್ಗದಲ್ಲಿ ಸರ್ವಿಸ್ ರಸ್ತೆಯೇ ಇಲ್ಲ. ಆದರೂ ಇಂದಿನಿಂದ ಟೋಲ್ ಪಾವತಿಸಿಯೇ ವಾಹನಗಳು ಓಡಾಡಬೇಕು ಎನ್ನಲಾಗಿದೆ. ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಆದರೂ ಅಲ್ಲಿನ ದುಬಾರಿ ಟೋಲ್ ದರಕ್ಕೆ ಹೆದರಿ ಈ ಮಾರ್ಗದಲ್ಲೇ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದವು. ಈಗ ಈ ರಸ್ತೆಯಲ್ಲೂ ಟೋಲ್ ವಿಧಿಸುತ್ತಿರುವುದು ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಎಕ್ಸ್ಪ್ರೆಸ್ವೇ ಬಳಿ ಸರ್ವಿಸ್ ರಸ್ತೆ ಇದ್ದರೂ ಹೆಚ್ಚಾಗಿ ಹಂಪ್ ಇದ್ದ ಕಾರಣಕ್ಕೆ ಹಾಗೂ ಸ್ಪೀಡ್ ಲಿಮಿಟ್ ಇದ್ದಿದ್ದರಿಂದ ಕಗ್ಗಲೀಪುರ-ಹಾರೋಹಳ್ಳಿ-ಕನಕಪುರ-ಮಳವಳ್ಳಿ ಮಾರ್ಗವಾಗಿ ಮೈಸೂರು ಬೆಂಗಳೂರು ನಡುವೆ ನೆಮ್ಮದಿಯಾಗಿ ಪ್ರಯಾಣ ಬೆಳೆಸುತ್ತಿದ್ದರು. ಇನ್ನು ಮುಂದೆ ಇಲ್ಲಿಯೂ ಟೋಲ್ ಕಟ್ಟಿಯೇ ಹೋಗಬೇಕಾಗಿದೆ.
ಕಾರು, ಜೀಪ್, ಲಘು ವಾಹನಗಳ ಏಕಮುಖ ಸಂಚಾರಕ್ಕೆ 85 ರೂಪಾಯಿ ಟೋಲ್ ಶುಲ್ಕ ನಿಗದಿ ಮಾಡಲಾಗಿದೆ. ಅದೇ ದಿನ ವಾಪಸ್ ಆದರೆ 130 ರೂಪಾಯಿ ನಿಗದಿಯನ್ನು ಮಾಡಲಾಗಿದೆ. ತಿಂಗಳ ಪಾಸ್ಗೆ 2,855 ರೂ ನಿಗದಿಯನ್ನು ಮಾಡಲಾಗಿದೆ. ಇನ್ನೂ ಅದೇ ಜಿಲ್ಲೆಯಲ್ಲಿ ಸಂಚರಿಸಲು ನೋಂದಣಿ ಮಾಡಿಕೊಂಡಿರುವ ವಾಣಿಜ್ಯ ವಾಹನಗಳಿಗೆ 45 ರೂಪಾಯಿ ನಿಗದಿ ಮಾಡಲಾಗಿದೆ. ಬಸ್, ಟ್ರಕ್ಗಳ ಏಕಮುಖ ಸಂಚಾರಕ್ಕೆ 290 ರೂಪಾಯಿ ದರ ಇದೆ. ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ದುಪ್ಪಟ್ಟು ದರ ಪಾವತಿಸಬೇಕು.
ಸೋಮನಹಳ್ಳಿ ಟೋಲ್ ನಿರ್ಮಾಣಕ್ಕೆ ಆರಂಭದಿಂದಲೂ ಸ್ಥಳೀಯರ ವಿರೋಧವಿತ್ತು. ಇದರ ವಿರುದ್ಧ ರೈತ ಸಂಘ ಕೂಡ ಹೋರಾಟ ನಡೆಸಿತ್ತು. ಅಲ್ಲದೆ 20 ಕಿ.ಮೀ ವ್ಯಾಪ್ತಿಯಲ್ಲಿ ವಾಣಿಜ್ಯ ಹಾಗೂ ವಾಣಿಜ್ಯೇತರ ವಾಹನಗಳಿಗೆ ಟೋಲ್ ಶುಲ್ಕ ಬೇಡ ಎಂದು ಆಗ್ರಹಿಸಿದ್ದರು. ಟೋಲ್ ಉದ್ಯೋಗದಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಬೇಡಿಕೆ ಇಟ್ಟಿದ್ದರು.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ












Click it and Unblock the Notifications