ಬೆಂಗಳೂರಿನ ಜೊತೆಗೆ ರಾಮನಗರ ಲಾಕ್ ಡೌನ್ ಮಾಡಿ ಎಂದ ಹೆಚ್ ಡಿಕೆ
ರಾಮನಗರ,
ಜುಲೈ.12:
ಕೊರೊನಾವೈರಸ್
ರೌದ್ರನರ್ತನಕ್ಕೆ
ರಾಜ್ಯ
ರಾಜಧಾನಿ
ತತ್ತರಿಸಿ
ಹೋಗಿದೆ.
ಬೆಂಗಳೂರು
ನಗರಕ್ಕೆ
ಹೊಂದಿಕೊಂಡಂತೆ
ಇರುವ
ರಾಮನಗರ
ಜಿಲ್ಲೆಯನ್ನೂ
ಲಾಕ್
ಡೌನ್
ಮಾಡುವಂತೆ
ಮಾಜಿ
ಸಿಎಂ
ಹೆಚ್.ಡಿ.ಕುಮಾರಸ್ವಾಮಿ
ಸಲಹೆ
ನೀಡಿದ್ದಾರೆ.
ರಾಜ್ಯದ
ಕಂದಾಯ
ಸಚಿವ
ಆರ್.ಅಶೋಕ್
ಮತ್ತು
ರಾಮನಗರ
ಜಿಲ್ಲಾಧಿಕಾರಿ,
ಜಿಲ್ಲಾ
ಆರೋಗ್ಯಾಧಿಕಾರಿಯೊಂದಿಗೆ
ಭಾನುವಾರ
ಮಾಜಿ
ಸಿಎಂ
ಕುಮಾರಸ್ವಾಮಿ
ಸಮಾಲೋಚನೆ
ನಡೆಸಿದರು.
ಈ
ವೇಳೆ
ರಾಮನಗರ
ಲಾಕ್
ಡೌನ್
ಅಗತ್ಯತೆ
ಬಗ್ಗೆ
ವಿವರಿಸಿದ್ದಾರೆ.
ಕರ್ನಾಟಕದಲ್ಲಿ 2627 ಸ್ಕೋರ್ ಮಾಡಿದ ಕೊರೊನಾವೈರಸ್!
ಬೆಂಗಳೂರಿನೊಂದಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್ಡೌನ್ ಮಾಡಲಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಿಗಿಂತಲೂ ಬೆಂಗಳೂರಿಗೆ ಹೆಚ್ಚು ಹತ್ತಿರವಿರುವ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಿಂತಲೂ ಅಧಿಕ ಸೋಂಕಿನ ಪ್ರಕರಣಗಳನ್ನು ಹೊಂದಿರುವ ರಾಮನಗರ ಜಿಲ್ಲೆಯನ್ನು ಲಾಕ್ಡೌನ್ ಮಾಡಲೇಬೇಕಾಗಿದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ರಾಮನಗರದಲ್ಲಿ
ಕೊವಿಡ್-19
ಅಂಕಿ-ಸಂಖ್ಯೆ:
ಬೆಂಗಳೂರಿನಲ್ಲಿ
ಪರಿಸ್ಥಿತಿ
ದಿನದಿಂದ
ದಿನಕ್ಕೆ
ವಿಕೋಪಕ್ಕೆ
ಹೋಗುತ್ತಿದೆ.
ರಾಜ್ಯ
ರಾಜಧಾನಿಯಲ್ಲಿ
ಒಂದೇ
ದಿನ
1525
ಮಂದಿಗೆ
ಕೊರೊನಾವೈರಸ್
ಸೋಂಕು
ತಗಲಿದ್ದು,
ಸಿಲಿಕಾನ್
ಸಿಟಿಯಲ್ಲಿ
ಒಟ್ಟು
ಸೋಂಕಿತರ
ಸಂಖ್ಯೆಯು
18387ಕ್ಕೆ
ಏರಿಕೆಯಾಗಿದೆ.
ಬೆಂಗಳೂರಿಗೆ
ಹೊಂದಿಕೊಂಡಂತಿರುವ
ರಾಮನಗರ
ಜಿಲ್ಲೆಯಲ್ಲಿ
ಒಟ್ಟು
388
ಸೋಂಕಿತ
ಪ್ರಕರಣಗಳು
ಪತ್ತೆಯಾಗಿದ್ದು,
ಈ
ಪೈಕಿ
153
ಮಂದಿ
ಗುಣಮುಖರಾಗಿದ್ದರೆ
227
ಸಕ್ರಿಯ
ಪ್ರಕರಣಗಳಿವೆ.
ಜಿಲ್ಲೆಯಲ್ಲಿ
ಇದುವರೆಗೂ
ಮಹಾಮಾರಿಗೆ
8
ಜನರು
ಪ್ರಾಣ
ಬಿಟ್ಟಿದ್ದಾರೆ.