"ಮಗನ ಮದುವೆ ಖರ್ಚಿನ ದುಡ್ಡನ್ನು ಜನರಿಗೆ ವಿನಿಯೋಗಿಸುತ್ತೇನೆ"

ರಾಮನಗರ,

ಏಪ್ರಿಲ್
28:
"ನನ್ನ
ಮಗನ
ಮದುವೆ
ನನ್ನ
ಆಸೆಯಂತೆ
ನಡೆಯಲಿಲ್ಲ.
ಮದುವೆಗೆ
ಅಂತಾ
ನಾನು
ಏನ್
ಹಣ
ಖರ್ಚು
ಮಾಡುತ್ತಿದ್ದೆನೋ
ಅದೇ
ಖರ್ಚನ್ನು
ಎರಡು
ಕ್ಷೇತ್ರಗಳಿಗೆ
ಈಗ
ವಿನಿಯೋಗ
ಮಾಡುತ್ತಿದ್ದೇನೆ"
ಎಂದು
ಹೇಳಿದ್ದಾರೆ
ಮಾಜಿ
ಸಿಎಂ
ಎಚ್.ಡಿ.ಕುಮಾರಸ್ವಾಮಿ.

id="toptextpromo">
id='are-slot-1'
class='oiad
oi-axt
oiadv'>

ಎಚ್.ಡಿ.ಕುಮಾರಸ್ವಾಮಿ

ಕುಟುಂಬಸ್ಥರು
ರಾಮನಗರ
ಮತ್ತು
ಚನ್ನಪಟ್ಟಣ
ಜನರಿಗೆ
ಇಂದು
ದಿನಸಿ
ಕಿಟ್
ವಿತರಣೆ
ಮಾಡುವ
ಕಾರ್ಯಕ್ರಮಕ್ಕೆ
ರಾಮನಗರದ
ಮಂಜುನಾಥ
ಕನ್ವೆನ್ಷನ್
ಹಾಲ್
ನಲ್ಲಿ
ಚಾಲನೆ
ನೀಡಿದರು.
ಕಾರ್ಯಕ್ರಮದಲ್ಲಿ
ಎಚ್.ಡಿ.ಕುಮಾರಸ್ವಾಮಿ,
ಅನಿತಾ
ಕುಮಾರಸ್ವಾಮಿ,
ಪುತ್ರ
ನಿಖಿಲ್
ಕುಮಾರಸ್ವಾಮಿ
ಮತ್ತು
ಸೊಸೆ
ರೇವತಿ
ಭಾಗಿಯಾಗಿದ್ದರು.
ಸುಮಾರು
60
ಸಾವಿರ
ಬಡ
ಕುಟುಂಬಳಿಗೆ
ಅಕ್ಕಿ,
ಬೇಳೆ
ಸಕ್ಕರೆ
ಇರುವ
ಕಿಟ್
ಗಳನ್ನ
ವಿತರಣೆ
ಮಾಡುವ
ಕಾರ್ಯಕ್ರಮಕ್ಕೆ
ಚಾಲನೆ
ನೀಡಲಾಗಿದೆ.
ಸಂದರ್ಭ
ಕುಮಾರಸ್ವಾಮಿ
ಅವರು
ಹಲವು
ವಿಷಯಗಳ
ಬಗ್ಗೆ
ಮಾತನಾಡಿದರು.

id='are-slot-2'
class='oiad
oi-axt
oiadv'>

"ವರದಿ ನೆಗೆಟಿವ್ ಬಂದಿದ್ದಕ್ಕೆ ಸಂತೋಷವಾಗಿದೆ"

ರಾಮನಗರ ಜಿಲ್ಲೆಯ ಕೆಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕೊರೊನಾ ಪರೀಕ್ಷೆ ವರದಿಗಳು ನೆಗೆಟಿವ್ ಬಂದಿರುವುದು ಸಂತೋಷಕರ ವಿಷಯ. ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾಜಧಾನಿಯ ಕೈದಿಗಳಿಂದ ಕರೋನಾ ಸೋಂಕು ಭೀತಿಗೊಳಗಾಗಿತ್ತು. ಇದೀಗ ನಗರಸಭೆ, ಜೈಲು ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ 68 ಮಂದಿಯ ವೈದ್ಯಕೀಯ ಪರೀಕ್ಷೆ ವರದಿ ನೆಗಟಿವ್ ಬಂದಿರುವುದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

"ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗೆ ಸ್ಪಂದಿಸಲಿ"

ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತ್ತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸುವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೇ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಸರ್ಕಾರಿ ಅಧಿಕಾರಿಗಳೂ 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರಕಾರ ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

"ರಾಜ್ಯದ ಜನರಿಗೆ ವಿನಾಯಿತಿ ಸಿಗಲಿ"

ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಅನುಕೂಲವಾಗುತ್ತೆ ಎಂದು ಹೇಳಿದರು.

"ಮಗನ ಮದುವೆ ಖರ್ಚನ್ನು ಬಡವರಿಗೆ ಉಪಯೋಗಿಸುವೆ"

ನನ್ನ ಆಸೆಯಂತೆ ಮಗನ ಮದುವೆ ನಡೆಸಲು ಸಾಧ್ಯವಾಗಿಲ್ಲ. ಮದುವೆಗೆ ಅಂತಾ ನಾನು ಏನ್ ಹಣ ಖರ್ಚು ಮಾಡುತ್ತಿದ್ದೆನೋ ಅದೇ ಖರ್ಚನ್ನು ಎರಡು ಕ್ಷೇತ್ರಗಳಿಗೆ ಈಗ ವಿನಿಯೋಗ ಮಾಡುತ್ತಿದ್ದೇನೆ. 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+