ಪಂಚಾಯತಿ ಚುನಾವಣೆ; ಗೆದ್ದ ಅಭ್ಯರ್ಥಿ ಅಸಿಂಧುಗೊಳಿಸಲು ಅರ್ಜಿ
ರಾಮನಗರ, ಫೆಬ್ರವರಿ 1 : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯನ್ನು ಅಸಿಂಧುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಸ್ವಯಂ ಘೋಷಣ ಪತ್ರದಲ್ಲಿ ದೋಷವಿದೆ ಎಂದು ಪರಾಜಿತ ಅಭ್ಯರ್ಥಿ ಕೋರ್ಟ್ ಮೊರೆ ಹೋಗಿದ್ದಾರೆ.
ಕನಕಪುರದ ದೊಡ್ಡಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಇತ್ತೀಚಿಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ದೊಡ್ಡಾಲಹಳ್ಳಿಯ ಮೂರನೇ ಬ್ಲಾಕ್ ಸದಸ್ಯರಾಗಿ ದೇವರಾಜು ಡಿ. ಕೆ. ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಇವರ ಅವರ ಆಯ್ಕೆಯನ್ನು ಆಸಿಂಧು ಗೊಳಿಸುವಂತೆ ಪರಾಜಿತ ಅಭ್ಯರ್ಥಿ ಶಿವರೇಣುಕಾ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಶಿವರೇಣುಕಾಗಿಂತ ಹೆಚ್ಚಿನ ಮತ ಪಡೆದು ದೇವರಾಜು ಆಯ್ಕೆಯಾಗಿದ್ದರು.

ಡಿ. ಕೆ. ದೇವರಾಜು ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ತಪ್ಪಾಗಿ ಮತದಾರರ ಕ್ಷೇತ್ರ ಸಂಖ್ಯೆ ನಮೂದಿಸಿದ್ದಾರೆ. ಆಸ್ತಿ ಘೋಷಣೆ, ಆದಾಯ ಹಾಗೂ ವ್ಯವಹಾರ ಮಾಹಿತಿ ಅಪೂರ್ಣವಾಗಿ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿಲ್ಲ ಎಂದು ಶಿವರೇಣುಕಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಡಿ. ಕೆ. ದೇವರಾಜು ಚುನಾವಣೆ ನಿಯಮ ಪಾಲನೆ ಮಾಡದೆ ಉಲ್ಲಂಘನೆ ಮಾಡಿವುದರಿಂದ ಅವರ ಗ್ರಾಮ ಪಂಚಾಯತಿ ಸದಸ್ಯತ್ವವನ್ನು ರದ್ದುಗೊಳಿಸಿ ಎರಡನೇ ಸ್ಥಾನದಲ್ಲಿರುವ ನನಗೆ ಅವಕಾಶ ಕಲ್ಪಿಸಬೇಕೆಂದು ಶಿವರೇಣುಕಾ ಕನಕಪುರ ನ್ಯಾಯಲಯದಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications