ರಾಮನಗರ: ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್ಲೈನ್ ಅಳವಡಿಸಿದ ಸರ್ಕಾರಿ ವೈದ್ಯ
ರಾಮನಗರ, ಮೇ 19: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸುಮಾರು 16 ಆಕ್ಸಿಜನ್ ಪಾಯಿಂಟ್ ಗಳನ್ನು ಸ್ಥಾಪಿಸುವ ಮೂಲಕ ಇತರರಿಗೆ ಮಾದರಿಯಾದ ಸರ್ಕಾರಿ ವೈದ್ಯನ ಕಥೆ ಇದು.
ರಾಮನಗರ ಜಿಲ್ಲೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯ ಡಾ.ರಾಜ್ ಕುಮಾರ್ ತಮ್ಮ ಸಂಬಳದ ಹಣವನ್ನು ಖರ್ಚು ಮಾಡಿ ಸುಮಾರು 16 ಅಕ್ಸಿಜನ್ ಪಾಯಿಂಟ್ ಗಳನ್ನು ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರಾಜ್ ಕುಮಾರ್, ಸುಮಾರು 1.50 ಲಕ್ಷ ಖರ್ಚು ಮಾಡಿ 16 ಆಕ್ಸಿಜನ್ ಪಾಯಿಂಟ್ ನಿರ್ಮಾಣ ಮಾಡಿಸಿದ್ದು, ಆಸ್ಪತ್ರೆಯ ಒಳಗೆ ಬೆಡ್ ಸಿಗದಿದ್ದಾಗ ಹೊರಗೆ ತುರ್ತಾಗಿ ಆಕ್ಸಿಜನ್ ಸಿಗಲಿ ಎಂದು ಆಕ್ಸಿಜನ್ ಪಾಯಂಟ್ ನಿರ್ಮಾಣ ಮಾಡಿಸುವ ಮೂಲಕ ನೊಂದ ರೋಗಿಗಳಿಗೆ ಸಹಾಯಹಸ್ತ ಚಾಚಿದ್ದಾರೆ.

ಈಗಾಗಲೇ ಎರಡನೇ ಕೊರೊನಾ ಅಲೆಯ ಆರ್ಭಟದ ನಡುವೆ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಕಾಣಿಸಿಕೊಳ್ಳಲಿದೆ ಎಂಬ ವಿಚಾರದ ಹಿನ್ನಲೆಯಲ್ಲಿ ವೈದ್ಯ ಡಾ.ರಾಜ್ ಕುಮಾರ್ ಆಸ್ಪತ್ರೆಯ ಒಂದು ಕೊಠಡಿಗೂ ಮುಂಜಾಗ್ರತಾ ಕ್ರಮವಾಗಿ ಆಕ್ಸಿಜನ್ ಪೈಪ್ಲೈನ್ ಅಳವಡಿಸಿದ್ದಾರೆ.












Click it and Unblock the Notifications