ರಾಮನಗರದಲ್ಲಿ ಹೋಟೆಲ್ ಆರಂಭಿಸಿ: ಡಿ.ಕೆ. ಸುರೇಶ್ ಮನವಿ
ರಾಮನಗರ, ಮೇ 05: ರಾಮನಗರ ಜಿಲ್ಲೆ ಕೋವಿಡ್ ಮುಕ್ತ ಜಿಲ್ಲೆಯಾಗಿದ್ದು, ಈ ಪ್ರದೇಶದಲ್ಲಿ ಪಾರ್ಸಲ್ ಪದ್ಧತಿ ಆಧಾರದ ಮೇಲೆ ಹೋಟೆಲ್ಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ವಿಡಿಯೋ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಸದ ಸುರೇಶ್ ಮನವಿ ಮಾಡಿದ್ದಾರೆ. ವಿಡಿಯೊದಲ್ಲಿ ಸುರೇಶ್ ಅವರು, ಮನವಿ ಮಾಡಿದ್ದಿಷ್ಟು: ಮಾನ್ಯ ಮುಖ್ಯಮಂತ್ರಿಗಳೇ ರಾಮನಗರ ಜಿಲ್ಲೆಯನ್ನು ನೀವು ಹಸಿರು ವಲಯವನ್ನಾಗಿ ಘೋಷಿಸಿದ್ದೀರಿ.
ಆದರೂ ಜಿಲ್ಲೆಯಲ್ಲಿ ಈವರೆಗೂ ಹೋಟೆಲ್ಗಳಿಂದ ತಿಂಡಿಯನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿಲ್ಲ. ಈ ವಿಚಾರವಾಗಿ ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರೂ ಅವಕಾಶ ನೀಡಲಾಗುತ್ತಿಲ್ಲ.
ಹಳ್ಳಿಗಳಿಂದ ಪಟ್ಟಣಕ್ಕೆ ಬಂದ ಜನರಿಗೆ ತಿನ್ನಲು ಏನು ಸಿಗುತ್ತಿಲ್ಲ. ಹೀಗಾಗಿ ತಾವುಗಳು ಮುಖ್ಯ ಕಾರ್ಯದರ್ಶಿದರ್ಶಿಗಳಿಗೆ ಆದೇಶ ನೀಡಿ ನನ್ನ ಕ್ಷೇತ್ರ ರಾಮನಗರ ಹಾಗೂ ತುಮಕೂರು ಭಾಗಳಲ್ಲೂ ಈ ಅವಕಾಶ ಕಲ್ಪಿಸಿಕೊಡಬೇಕು ಇಂದು ನಾನು ನಿಮಗೆ ಒತ್ತಾಯ ಪೂರ್ವಕವಾಗಿ ವಿನಂತಿ ಮಾಡುತ್ತೇನೆ.