ಬಿಡದಿಯಲ್ಲಿ ಉರುಳುವ ಸ್ಥಿತಿಯಲ್ಲಿ 90 ವರ್ಷದ ಬೃಹತ್ ಮರ; ಜೀವಭಯದಲ್ಲಿರುವ ಸಾರ್ವಜನಿಕರು
ರಾಮನಗರ, ಸೆಪ್ಟೆಂಬರ್ 08: ಬಿಡದಿ ಪಟ್ಟಣ ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಬೃಹತ್ ಅರಳಿ ಮರ ಧರೆಗೂರುಳುವ ಸ್ಥತಿಯಲ್ಲಿದೆ. ಆದ್ದರಿಂದ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡುದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿಡದಿ ಪಟ್ಟಣದ ರೈಲ್ವೇ ನಿಲ್ದಾಣದ ರಸ್ತೆಯ ಪ್ರಾರಂಭದಲ್ಲೇ 90 ವರ್ಷಗಳಷ್ಟು ಹಳೆಯದಾದ ಅರಳಿ ಮರ ಇದೆ. ಈ ಮರ ಈಗಾಗಲೇ ರಸ್ತೆ ಕಡೆ ವಾಲಿದ್ದು, ಮುಂದಿನ ದಿನಗಳಲ್ಲಿ ಅಪಾಯ ತಂದೊಡ್ಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.
ಅರಳಿ ಮರ ತೆರವುಗೊಳಸಿ ಅಪಾಯ ತಪ್ಪಿಸಿಬೇಕಾದ ಪುರಸಭೆ ಕೂಡ ಇದೇ ರಸ್ತೆಯಲ್ಲಿದೆ. ಈ ರಸ್ತೆಯಲ್ಲಿ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಓಡಾಡುತ್ತಿರುತ್ತಾರೆ. ಆದರೂ ಲಮಾಡುತ್ತಿರುವ ಅರಳಿ ಮರ ಕಂಡರು ಕಾಣದಂತೆ ವರ್ತಿಸುತ್ತಿದ್ದಾರೆ. ಉರುಳಿ ಬೀಳು ಹಂತದಲ್ಲಿರುವ ಮರವನ್ನು ತೆರವು ಮಾಡಲು ಮುಂದಾಗಿಲ್ಲ. ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಪ್ರಾಣ ಬೀತಿಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಜನರಲ್ಲಿ ಆತಂಕ ಮೂಡಿಸಿದ 90 ವರ್ಷದ ಮರ
ಪಟ್ಟಣದ ಹಿರಿಯರು ಹೇಳುವಂತೆ ಈ ಅರಳಿ ಮರ ಸುಮಾರು 90 ವರ್ಷಗಳಷ್ಟು ಹಳೆಯದ್ದಾಗಿದೆ. ಮರದ ಸುತ್ತಲೂ ಜನರು ವಿಶ್ರಾಂತಿ ಪಡೆಯಲಿ ಎನ್ನುವ ಉದ್ದೇಶದಿಂದ ಇಲ್ಲಿ ಕಟ್ಟೆಯನ್ನು ನಿರ್ಮಾಣ ಮಾಡಿದ್ದಾರೆ. ಪಟ್ಟಣಕ್ಕೆ ಬರುವ ಸಾರ್ವಜನಿಕರು ಸ್ವಲ್ಪ ಸಮಯ ಈ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು ಹೋಗುತ್ತಾರೆ. ಅಲ್ಲದೇ ಈ ಮರದ ಕೆಳಗೆ ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ ವ್ಯಾಪಾರ ಮಾಡುತ್ತಾರೆ. ವ್ಯಾಪಾರದ ಜಾಗ ಅಂದ ಮೇಲೆ ಜನರು ಬಂದೇ ಬರುತ್ತಾರೆ. ಬೃಹತ್ ಅರಳಿ ಮರದ ಕೆಳಗೆ ಹತ್ತಾರು ವಾಣಿಜ್ಯ ಮಳಿಗಿಗೆಗಳು ತಲೆ ಎತ್ತಿವೆ. ಹಲವು ಅಂಗಡಿಗಳ ಮೇಲೆ ಮರದ ಕೊಂಬೆಗಳು ಚಾಚಿಕೊಂಡಿವೆ. ಅಂಗಡಿ ಮಳಿಗೆಗಳ ಮಾಲೀಕರು ಹಾಗೂ ಅಂಗಡಿ ಬಾಡಿಗೆ ಪಡೆದಿರುವ ಜನರು ಇದೀಗ ಮರ ಎಲ್ಲಿ ಬಿದ್ದುಬಿಡುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ.

ಮಳೆಗೆ ಸಡಿಲವಾದ ಮರದ ಬುಡ
ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೃಹತ್ ಅರಳಿ ಮರ ರಸ್ತೆ ಭಾಗಕ್ಕೆ ಸ್ವಲ್ಪ ಮಟ್ಟಿಗೆ ವಾಲಿದೆ. ಅಲ್ಲದೇ ರಸ್ತೆ ಕಡೆಗೆ ಬೃಹತ್ ಗಾತ್ರದ ರೊಂಬೆ ಇದ್ದು, ಇದು ಯಾವ ಸಮಯದಲ್ಲಿ ಬೇಕಾದರೂ ಮುರಿದುಕೊಂಡು ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ. ಮರದ ಸುತ್ತ ಕಲ್ಲಿನ ಕಟ್ಟೆಯನ್ನ ಕಟ್ಟಲಾಗಿದೆ. ಮರ ದಪ್ಪವಾದಂತೆ ಕಲ್ಲಿನ ಕಟ್ಟಡ ಅಲ್ಲಲ್ಲಿ ಬಿರುಕು ಬಿಡುತ್ತಲೇ ಇದೆ. ಅಲ್ಲದೇ ಕಲ್ಲಿನ ಸಂದಿಗಳಲ್ಲಿ ಮರದ ಬೇರುಗಳು ಸಹ ಹೊರ ಬಂದಿವೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬುದು ಸ್ಥಳೀಯ ನಾಗರೀಕರ ಒತ್ತಾಯ ಆಗಿದೆ.

ಮರದ ಕೊಂಬೆ ಕಡಿಯುವಂತೆ ಸ್ಥಳೀಯರ ಆಗ್ರಹ
ಇನ್ನೂ ಪಟ್ಟಣದ ನಿವಾಸಿ ಹಾಗೂ ಸಾಮಾಜಿಕ ಹೋರಾಟಗಾರ ಮುತ್ತಣ್ಣ ಈ ಬಗ್ಗೆ ಮಾತನಾಡಿ, ನಮ್ಮ ಬಿಡದಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಯುವ ಜಾಗ ಅಂದರೆ ಅದು ರೈಲ್ವೇ ನಿಲ್ದಾಣದ ರಸ್ತೆ. ಅಲ್ಲದೇ ಬೀಳುವ ಹಂತದಲ್ಲಿರುವ ಮರದ ಕೆಳೆಗೆ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಬೃಹತ್ ಅರಳಿ ಮರ ತುಂಬಾ ಹಳೆಯದಾಗಿದೆ. ಮರದ ದಪ್ಪ ಕೊಂಬೆ ರಸ್ತೆ ಕಡೆಗೆ ಬಂದಿದ್ದು, ಇದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮರ ಕಡಿಯದಿದ್ದರೂ ಪರವಾಗಿಲ್ಲ, ರಸ್ತೆ ಕಡೆಗೆ ವಾಲಿರುವ ಬೃಹತ್ ಕೊಂಬೆಯನ್ನಾದರೂ ಕಡಿದು ಸಾರ್ವಜನಿಕರು ಹಾಗೂ ವಾಹನ ಸವಾರರ ಓಡಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications