ರಾಮನಗರ: ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡ ಪತ್ತೆ
ರಾಮನಗರ, ಜು.4: ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಸಮೀಪ ಹಳೆಯ ನಿವೇಶನವೊಂದರಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡವೊಂದು ಪತ್ತೆಯಾಗಿದೆ.
ನವಾಜ್ ಅಹಮದ್ ಎಂಬುವವರ ಮಾಲೀಕತ್ವದ ಖಾಲಿ ನಿವೇಶನದಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ನಿಗೂಢವಾಗಿದ್ದ ಕಟ್ಟಡ ಕಂಡುಬಂದಿದೆ. ಬಹಳ ಪುರಾತನ ಕಟ್ಟಡವಾಗಿದ್ದು ಬಹಳ ಗಟ್ಟಿಮುಟ್ಟಾಗಿದ್ದು ಒಳ ಭಾಗದಲ್ಲಿ ಗಾರೆ ಮಾಡಲಾಗಿದ್ದು, ಹಲವಾರು ವರ್ಷ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದರು ಗೋಡೆಗಳಿಗೆ ಯಾವುದೇ ಧಕ್ಕೆಯಾಗಿಲ್ಲ.
ಸ್ಥಳದ ಮಾಲೀಕ ನವಾಜ್ ಅಹಮದ್ ಮಾತನಾಡಿ, "ಇದು ತುಂಬಾ ಹಳೇ ಕಟ್ಟಡ. ಈ ಹಿಂದೆ ನಾವು ಬೇರೊಬ್ಬರ ಬಳಿ ಖರೀದಿ ಮಾಡಿದ್ದೆವು. ಆದರೆ ಈಗ ಅಂಗಡಿ ನಿರ್ಮಾಣ ಮಾಡಲು ಪಾಯ ತೆಗೆಸುವಾಗ ಸಣ್ಣ ಕಿಂಡಿ ಕಂಡು ಬಂತು ನಂತರ ಇದು ಬೆಳಕಿಗೆ ಬಂದಿದೆ. ನಮಗೆ ಇದರಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದಿದ್ದಾರೆ. ಸುಮಾರು 1930 ರಲ್ಲಿ ನಗರಸಭೆಯ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದರು ಎಂದು ಕೆಲವರು ನಮಗೆ ತಿಳಿಸಿದ್ದರು, ನಂತರ 1960 ರಲ್ಲಿ ಈ ಜಾಗ ಅಬ್ದುಲ್ ಅಜೀಂ ಎನ್ನುವರು ನಗರಸಭೆಯ ಹರಾಜಿನಲ್ಲಿ ತೆಗೆದುಕೊಂಡಿದ್ದರು ತದ ನಂತರ ತಮ್ಮ ಸಂಬಂಧಿಗೆ ಗಿಫ್ಟ್ ಡೀಡ್ ಮಾಡಿದ್ದರು ಈ ಜಾಗವನ್ನು ನಾವು 2009 ರಲ್ಲಿ ಖರೀದಿ ಮಾಡಿದ್ದೇವೆ ಎಂದರು.

ಟಿಪ್ಪು ಕಾಲದ ಶಸ್ತ್ರಗಾರ
ನೆಲದಾಳದಲ್ಲಿ ಪತ್ತೆಯಾಗಿರುವ ಕಟ್ಟಡ ಯಾವುದು ಎಂಬುದು ಇನ್ನೂ ನಿಖರವಾಗಿಲ್ಲದಿದ್ದರು ಕಟ್ಟಡ ರೂಪುರೇಷೆ ಗಮನಿಸಿದರೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಕಾಲದ ಮದ್ದಿನ ಮನೆಯ ರೀತಿ ಗೋಚರಿಸುತ್ತಿದೆ. ಅಲ್ಲದೇ ಈ ಭಾಗದಲ್ಲಿ ಟಿಪ್ಪು ಅಳ್ವಿಕೆಯ ಕುರುಹು ಇರುವುದರಿಂದ ಬಹುತೇಕ ಟಿಪ್ಪು ಕಾಲದ ಶಸ್ತ್ರಗಾರ ಇರಬೇಕು ಎನ್ನುತ್ತಿದ್ದಾರೆ ಜನ ಸಾಮಾನ್ಯರು. ಇದು ಟಿಪ್ಪು ಕಾಲದ ನೆಲಮಾಳಿಗೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಕೂತೂಹಲದಿಂದ ನೆಲಮಾಳ ವೀಕ್ಷಣೆ ಮಾಡುತ್ತಿರುವ ಸಾರ್ವಜನಿಕರು ನೆಲಮಾಳಿಗೆಯಲ್ಲಿ ಹೂಳು ತುಂಬಿದ್ದ ಗೋಡೆ ಹಾಗೂ ಚಾವಣಿ ಗಟ್ಟಿಮುಟ್ಟಾಗಿರುವುದನ್ನು ಕಂಡು ಜನರು ಬೆರಗಾಗಿದ್ದಾರೆ.
ರಕ್ಷಣೆ ಮಾಡಬೇಕಾದ ಅಧಿಕಾರಿಗಳು ನಾಪತ್ತೆ
ರಾಮನಗರ ಪ್ರದೇಶವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ಯಾರಿ ಕ್ಲೂಸ್ ಆಳ್ವಿಕೆ ನಡೆಸಿದ ಹಿನ್ನಲೆಯಲ್ಲಿ ಕ್ಲೂಸ್ ಪೇಟೆ ಎಂಬ ಹೆಸರು ಇತ್ತು ಅದಕ್ಕೆ ಸಾಕ್ಷಿಯಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಶಾಸನವು ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ದಿಂದ ಸಂಪೂರ್ಣ ಹಾಳಾಗಿದ್ದು ಅದನ್ನು ಸಂರಕ್ಷಣೆ ಮಾಡಬೇಕಾಗಿದೆ. ಇನ್ನೂ ಇಂದು ಪತ್ತೆಯಾಗಿರುವ ಕಟ್ಟಡ ರಾಮನಗರದ ಇತಿಹಾಸವನ್ನು ಮತ್ತೆ ಕೆದಕ ಬೇಕಾದ ಅನಿವಾರ್ಯತೆ ನಿರ್ಮಾಣ ಮಾಡಿದೆ. ಪುರಾತನ ಕಟ್ಟಡದ ಮೇಲೆ ಹಲವು ಕಟ್ಟಡಗಳು ನಿರ್ಮಾಣವಾಗಿದೆ. ಇನ್ನೂ ಭೂಮಿಯ ಕೇವಲ 6-7, ಅಡಿಗಳ ಕೆಳ ಭಾಗದಲ್ಲಿ ಕಟ್ಟಡ ಪತ್ತೆಯಾಗಿರುವುದು ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವುದನ್ನು ಸಾರುತ್ತಿದೆ.

ಇನ್ನೂ ಕಟ್ಟಡ ಇತಿಹಾಸ ಪಳೆಯುಳಿಕೆಯಾಗಿ ಪತ್ತೆಯಾಗಿರುವ ಕಟ್ಟಡ ಬಗ್ಗೆ ಜನರು ತಮಗೆ ತೋಚಿದ ಕಥೆ ಹೇಳುತ್ತಿದ್ದಾರೆ ಆದರೆ ಕಟ್ಟಡ ಯಾವುದು ಅದರ ಇತಿಹಾಸ ಎನು ಎಂದು ಜನರಿಗೆ ತಿಳಿಸಿ ಅವರ ಸಂದೇಹ ನಿವಾರಣೆ ಮಾಡಬೇಕಾದ ಪುರಾತತ್ವ ಇಲಾಖೆಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ











Click it and Unblock the Notifications