ಈ ಊರಲ್ಲಿ ಹಳ್ಳ ದಾಟಿ ಅಂತ್ಯಕ್ರಿಯೆ ಮಾಡಿದರೂ ಸಿಗದ ಮುಕ್ತಿ... ಶವ ಕೊಚ್ಚಿಹೋಗುವ ಆತಂಕ!!
ಚಾಮರಾಜನಗರ, ಅಕ್ಟೋಬರ್ 30: ಇಲ್ಲಿನ ಜನರ ಪರಿಸ್ಥಿತಿ ದೇವರಿಗೆ ಪ್ರೀತಿಯಾಗಿದ್ದು ಹಾಗೋ ಹೀಗೋ ಹಳ್ಳ ದಾಟಿ ಅಂತ್ಯಕ್ರಿಯೆ ನೆರವೇರಿಸಿದರೂ ಎಲ್ಲಿ ಹೂತಿದ್ಧ ಶವ ಕೊಚ್ಚಿಹೋಗುವುದೋ ಎಂಬ ಕಳವಳದಲ್ಲಿ ಮಣ್ಣು ಮಾಡುತ್ತಿದ್ದಾರೆ.
ಹನೂರು ತಾಲೂಕಿನ ಅಜ್ಜೀಪುರ ಗ್ರಾಪಂ ವ್ಯಾಪ್ತಿಯ ಅಂಬಿಕಾಪುರ ಗ್ರಾಮದಲ್ಲಿ ಆದಿ ಜಾಂಬವ ಸಮುದಾಯದವರಿಗೆ ಸ್ಮಶಾನ ವ್ಯವಸ್ಥೆಯಿಲ್ಲದ ಕಾರಣ, ಮೃತಪಟ್ಟ ಪಳನಿಯಯಮ್ಮ(54) ಉಡುತೊರೆ ಹಳ್ಳ ಎಂಬ ನೀರಿನ ಝರಿ ದಾಟಿ ಶನಿವಾರ ಪಳನಿಯಯಮ್ಮ(54) ಎಂಬವರ ಅಂತ್ಯಕ್ರಿಯೆ ಮಾಡಿದ್ದಾರೆ.
ಗುಂಡ್ಲುಪೇಟೆ
ಗೋಪಾಲಸ್ವಾಮಿ
ಬೆಟ್ಟಕ್ಕೆ
ಬಸ್
ಸಂಚಾರ
ಮತ್ತೆ
ಆರಂಭ
ಗ್ರಾಮದಲ್ಲಿ
ಆದಿ
ಜಾಂಬವ
ಮತ್ತು
ಪರಿಶಿಷ್ಟ
ಜಾತಿ
ಸಮುದಾಯದವರಿಗೆ
ಸ್ಮಶಾನ
ವ್ಯವಸ್ಥೆ
ಇಲ್ಲ.
ತಮ್ಮ
ಸಮುದಾಯದ
ವ್ಯಕ್ತಿ
ಸತ್ತರೇ
ನಮಗೆ
ಅಂತ್ಯಕ್ರಿಯೆ
ಮಾಡಲು
ಉಡುತೊರೆ
ಹಳ್ಳವೇ
ಗತಿ.
ಈ
ಬಗ್ಗೆ
ಅಧಿಕಾರಿಗಳಿಗೆ,
ಜನಪ್ರತಿನಿಧಿಗಳಿಗೆ
ತಿಳಿದಿದ್ದರೂ
ತಮಗೆ
ಸ್ಮಶಾನ
ವ್ಯವಸ್ಥೆ
ಕಲ್ಪಿಸಿಲ್ಲ
ಎಂಬುದು
ಗ್ರಾಮಸ್ಥರ
ಆರೋಪ.
ಅಂತ್ಯಕ್ರಿಯೆ ಮಾಡಿದರೂ ಸಿಗದ ಮುಕ್ತಿ..?
ಕಳೆದ ವಾರ ಗ್ರಾಮದ ಪಾಪಮ್ಮ ಎಂಬವರ ಮಗ ಷಣ್ಮುಗ ಮೃತಪಟ್ಟಿದ್ದರು. ಸ್ಮಶಾನವಿಲ್ಲದೇ ಉಡುತೊರೆ ಹಳ್ಳದ ಬಳಿ ಅಂತ್ಯಕ್ರಿಯೆ ಮಾಡಲಾಗಿತ್ತು. ಸತತ ಮಳೆಯಿಂದಾಗಿ ಉಡುತೊರೆ ಹಳ್ಳ ತುಂಬಿ ಹರಿದ ಪರಿಣಾಮ ಹೂತು ಹಾಕಿದ್ದ ಶವವೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿತ್ತು. ಈ ಮಧ್ಯೆ ಇಂದು ಪಳನಿಯಮ್ಮ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆಯನ್ನು ನೀರು ದಾಟಿ ಉಡುತೊರೆ ಹಳ್ಳದಲ್ಲೇ ಮಾಡಲಾಗಿದೆ. ಮತ್ತೊಮ್ಮೆ ಹಳ್ಳ ತುಂಬಿ ಹರಿದರೆ ಈ ಶವವೂ ನೀರಿನಲ್ಲಿ ಕೊಚ್ಚಿಹೋಗುವ ಆತಂಕದಲ್ಲಿದ್ದಾರೆ ಕುಟುಂಬಸ್ಥರು.
ಗ್ರಾಮದಲ್ಲಿ ನಮಗೆ ಸ್ಮಶಾನವಿಲ್ಲ ಸತ್ತವರನ್ನು ಹಳ್ಳದಲ್ಲೇ ಅಂತ್ಯಕ್ರಿಯೆ ಮಾಡುವಂತಾಗಿದೆ. ದಯವಿಟ್ಟು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮಗೆ ಯಾವುದೆ ಸೌಲಭ್ಯ ಕೊಡದಿದ್ದರೂ , ಕೊನೆ ಪಕ್ಷ ಸ್ಮಶಾನ ವ್ಯವಸ್ಥೆ ಕಲ್ಪಿಸುವ ಮೂಲಕ ಸತ್ತವರಿಗೆ ಮುಕ್ತಿ ಕಲ್ಪಿಸಿ ಎಂದು ಇತ್ತೀಚೆಗೆ ಮೃತಪಟ್ಟ ಷಣ್ಮುಖ ಅವರ ತಾಯಿ ಗೊಳಾಡಿದ್ದಾರೆ.
ಸ್ಮಶಾನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ
ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಮಶಾನ ವಿಲ್ಲದ ಗ್ರಾಮಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಈಗಾಗಲೇ ಸರಕಾರಿ ಜಮೀನು ಇರುವ ಕಡೆ ಸರ್ವೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಆದಷ್ಟು ಬೇಗ ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಹಸಿಲ್ದಾರ್ ಆನಂದಯ್ಯ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.