ರಸಗೊಬ್ಬರಕ್ಕೆ ಸೆಡ್ಡು, ರಾಯಚೂರಿನ ಕೋಳಿ ಗೊಬ್ಬರಕ್ಕೆ ಹೆಚ್ಚಿದ ಡಿಮ್ಯಾಂಡ್!
ರಾಯಚೂರು, ಜುಲೈ 12: ಎಡದೊರೆ ನಾಡಿನ ಕೋಳಿ ಗೊಬ್ಬರಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚು ರಫ್ತಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ 15 ವರ್ಷಗಳ ಹಿಂದೆ ಕೋಳಿ ಗೊಬ್ಬರದ ಬಳಕೆ ಅಷ್ಟಾಗಿರಲಿಲ್ಲ. ಹೀಗಾಗಿ ಕೋಳಿ ಫಾರ್ಮ್ ಮಾಲೀಕರಿಗೆ ಗೊಬ್ಬರ ವಿಲೇವಾರಿ ಮಾಡುವುದು ಕಷ್ಟವಾಗಿತ್ತು.
ಪ್ರಸ್ತುತ ಕರ್ನಾಟಕದ ನಾನಾ ಮೂಲೆ ಹಾಗೂ ಅಂತರ್ ರಾಜ್ಯಗಳಿಂದ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ವಿಲೇವಾರಿಗೆ ಅನುಕೂಲವಾಗಿದೆ. ಸದ್ಯ ಸಗಣಿ ಗೊಬ್ಬರ ದೊರೆಯುವುದು ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಆ ಸ್ಥಾನವನ್ನು ಕೋಳಿ ಗೊಬ್ಬರ ತುಂಬಿದೆ. ಮುಂಗಾರು ಕೃಷಿಯಲ್ಲಿ ರೈತರು ಈ ಕೋಳಿ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಕೋಳಿ ಗೊಬ್ಬರ ಬಳಸುತ್ತಿರುವುದರಿಂದ ಹೆಚ್ಚು ಇಳುವರಿ ಪಡೆಯುತ್ತಿರುವುದು ಕಂಡು ಬಂದಿದೆ. ಇನ್ನು ರಾಯಚೂರು ತಾಲೂಕಿನ ಹಲವು ಹಳ್ಳಿಗರು ಕಡಿಮೆ ದರಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ಕೋಳಿ ಫಾರ್ಮ್ಗಳಿಂದ ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಈ ಗೊಬ್ಬರ ಬಳಕೆಯಿಂದ ಇಳುವರಿ ಅಧಿಕವಾಗಿ ಬರುತ್ತಿದೆ ಎಂಬ ಕಾರಣಕ್ಕೆ ಖರೀದಿಸುತ್ತಿರುವುದು ಕಂಡು ಬಂದಿದೆ.
ರಾಸಾಯನಿಕ ಗೊಬ್ಬರಗಳ ದುಷ್ಪರಿಣಾಮಗಳ ಮಧ್ಯೆ ಕೋಳಿ ಗೊಬ್ಬರ ಉತ್ತಮವಾಗಿದೆ. ಅಲ್ಲದೆ ರಾಯಚೂರು ತಾಲೂಕಿನ ಹಲವು ಕಡೆ ಹೆಚ್ಚಿನ ಕೋಳಿ ಫಾರ್ಮ್ಗಳಿರುವುದರಿಂದ ಸುಲಭವಾಗಿ ಕಡಿಮೆ ದರಕ್ಕೆ ಗೊಬ್ಬರ ಸಿಗುತ್ತಿದೆ. ಕೋಳಿ ಗೊಬ್ಬರ ಬಳಸುವವರು ತೋಟಗಳಿಗೆ ಹೆಚ್ಚಿನ ನೀರು ಪೂರೈಕೆ ಮಾಡುತ್ತಿರುವುದು ಕಂಡು ಬಂದಿದೆ.

ಆರಂಭದಲ್ಲಿ ಪ್ರತಿ ಟನ್ ಗೊಬ್ಬರ ದರ 1,200 ರಿಂದ 1,3000ರ ಅಸುಪಾಸಿನಲ್ಲಿತ್ತು. ಆದರೆ ನಾಲ್ಕೈದು ವರ್ಷಗಳಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಹೆಚ್ಚಾಗಿದೆ. ಅಡಿಕೆ , ದಾಳಿಂಬೆ , ತೆಂಗು , ಸಪೋಟಾ, ಈರುಳ್ಳಿಯಂತಹ ವಾಣಿಜ್ಯ ಬೆಳಗಳಿಗೆ ಈ ಕೋಳಿ ಗೊಬ್ಬರವನ್ನು ಹೆಚ್ಚು ಬಳಸಲಾಗುತ್ತಿದೆ. ಕೋಳಿ ಗೊಬ್ಬರ ಪೂರ್ಣವಾಗಿ ಸಾವಯವ ಗೊಬ್ಬರವಾಗಿದೆ. ಹಾಕಿದ ನಂತರ ಸ್ವಲ್ಪ ಹೆಚ್ಚು ನೀರು ಹಾಯಿಸಿದಲ್ಲಿ ಇಳುವರಿ ಉತ್ತಮವಾಗಿ ಬರಲಿದೆ.
ಕೋಳಿ ಗೊಬ್ಬರ ಬಳಕೆಯಿಂದ ಫಸಲಿಗೆ ಉತ್ತಮ ಪೌಷ್ಟಿಕಾಂಶ ಒದಗಿ ಇಳುವರಿ ಪ್ರಮಾಣ ವೃದ್ಧಿಯಾಗಲಿದೆ. ನಿತ್ಯ ಸಾವಿರಾರು ಟನ್ ಕೋಳಿ ಗೊಬ್ಬರವನ್ನು ರಾಯಚೂರು ಜಿಲ್ಲೆಯ ನಾನಾ ಭಾಗ ಹಾಗೂ ಕರ್ನಾಟಕ ,ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗಣೆ ಮಾಡಲಾಗುತ್ತಿದೆ. ಒಂದು ಟ್ರ್ಯಾಕ್ಟರ್ ಲೋಡ್ ಕೋಳಿ ಗೊಬ್ಬರಕ್ಕೆ 30 ರಿಂದ 35 ಸಾವಿರ ರೂಪಾಯಿ ದರವಿದೆ. ಗೊಬ್ಬರ ಒಣಗಿದ್ದರೆ ದರ ಜಾಸ್ತಿ ಫಿಕ್ಸ್ ಮಾಡಿ ಮಾರಲಾಗುತ್ತದೆ.
ತೆಂಗಿನ ಗಿಡಕ್ಕೆ 3 ರಿಂದ 4 ಕೆಜಿಯಂತೆ ನಾಲ್ಕು ಎಕರೆ ತೋಟಗಾರಿಕೆ ಬೆಳೆಗೆ ಒಂದು ಲೋಡ್ ಕೋಳಿ ಗೊಬ್ಬರ ಬಳಸುತ್ತಿದ್ದು, ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಗೊಬ್ಬರ ಕೊಡಲಾಗುತ್ತದೆ. ಬೆಳೆಗಾರರು ಕೋಳಿ ಗೊಬ್ಬರ ಬಳಕೆ ನಂತರ ಹೆಚ್ಚಿನ ನೀರನ್ನು ಗಿಡಗಳಿಗೆ ಪೂರೈಸಬೇಕು. ಒಂದು ವೇಳೆ ಹೆಚ್ಚು ನೀರು ಪೂರೈಸದೇ ಹೋದರೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರೈತರು ತಿಳಿಸಿದ್ದಾರೆ.
ಕೋಳಿ ಗೊಬ್ಬರ ಬಳಕೆಯಿಂದ ತೋಟಗಾರಿಕೆ ಬೆಳಗಳಲ್ಲಿ ರೈತರು ಗರಿಷ್ಠ ಪ್ರಮಾಣದ ಇಳುವರಿ ಪಡೆದಿದ್ದಾರೆ. ಕೋಳಿ ಗೊಬ್ಬರ ರೋಗ ಬಾಧೆಯನ್ನು ನಿಯಂತ್ರಿಸಲಿದೆ. ಹೀಗಾಗಿ ರೈತರು ಅಧಿಕ ದರ ನೀಡಿ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದಾರೆ. ಸದ್ಯ ಕೋಳಿ ಗೊಬ್ಬರಕ್ಕೆ ರೈತರು ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದು ರಾಯಚೂರು ಕೋಳಿ ಫಾರ್ಮ್ ಮಾಲೀಕ ಎ.ಕೆ.ವಿರೇಶ್ ಹೇಳಿದ್ದಾರೆ.
ಈರುಳ್ಳಿ ಬೇಗ ಬೆಳೆಯಲು ಕೋಳಿ ಗೊಬ್ಬರ ಉತ್ತಮ. ಅಲ್ಲದೇ ಈಗ ಕೊಟ್ಟಿಗೆ ಗೊಬ್ಬರ ಸಾಕಷ್ಟು ಸಿಗುತ್ತಿಲ್ಲ. ರಸಗೊಬ್ಬರದ ಅಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಕೋಳಿ ಗೊಬ್ಬರವನ್ನು ಹೆಚ್ಚು ಬಳಸುತ್ತಿದ್ದೇವೆ. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಲಿದೆ ಎಂದು ರೈತ ಲಕ್ಷ್ಮಣ್ ಗೌಡ ಕಡಗಂದೊಡ್ಡಿ ತಿಳಿಸಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications