ಇಪ್ಪತ್ತು ನಾಯಿಗಳ ಜತೆ ಪುಟ್ಟ ಬಾಲಕ; ವರ್ತನೆಯೂ ಬದಲು
ಪುಣೆ, ಮೇ 12: ಒಂದೇ ಮನೆಯಲ್ಲಿ 20ಕ್ಕೂ ಹೆಚ್ಚು ನಾಯಿಗಳ ಜೊತೆ 11 ವರ್ಷದ ಬಾಲಕನನ್ನು ಕೂಡಿಹಾಕಿದ ಭಯಾನಕ ಘಟನೆ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕನ ಪೋಷಕರ ವಿರುದ್ಧ ಎನ್ಜಿಒ ಸಂಸ್ಥೆಯೊಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಈ ಬಾಲಕನ್ನು ರಕ್ಷಿಸಲಾಗಿದೆ. ಆದರೆ, ಪೋಷಕರ ಬಂಧನ ಇನ್ನೂ ಆಗಿಲ್ಲ.
ನಾಯಿಗಳ ಜೊತೆ ಬಾಲಕ ಸೆರೆಯಾಗಿರುವ ವಿಚಾರ ಅನಾಮಧೇಯ ವ್ಯಕ್ತಿಯೊಬ್ಬರ ಮೂಲಕ ಚೈಲ್ಡ್ಲೈನ್ (Childline NGO) ಎಂಬ ಎನ್ಜಿಒಗೆ ಗೊತ್ತಾಗಿದೆ. ಕೊಂಧ್ವಾ ಪ್ರದೇಶದ ಫ್ಲಾಟ್ವೊಂದರಲ್ಲಿ 20-22 ನಾಯಿಗಳ ಜೊತೆ 24 ಗಂಟೆಯೂ ಇರುವಂತೆ ಬಾಲಕನ ಮೇಲೆ ಬಲವಂತ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಬಾಲಕ ನಾಯಿಗಳ ಜೊತೆ ಇರುತ್ತಿರುವುದರ ಸುಳಿವು ಸಿಕ್ಕಿತು. ನಂತರ ಎನ್ಜಿಒ ಪೊಲೀಸರಿಗೆ ಈ ವಿಷಯ ತಿಳಿಸಿ ಕ್ರಮ ಕೈಗೊಳ್ಳುವಂತೆ ಕೋರಿತು.
"ದೂರುದಾರರು ಮೇ 5ರಂದು ಮನೆಗೆ ಹೋದಾಗ ಒಬ್ಬ ಬಾಲಕ ನಾಯಿಗಳ ಜೊತೆ ಫ್ಲಾಟ್ನ ಕಿಟಕಿ ಬಳಿ ಕುಳಿತುಕೊಂಡಿರುವುದನ್ನು ಕಾಣುತ್ತಾರೆ. ಆ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಆ ಬಾಲಕನ ಪೋಷಕರೊಂದಿಗೆ ಅವರು ಮಾತನಾಡಿದಾಗ, ಆ ಹುಡುಗ ಶಾಲೆ ಹೋಗುತ್ತಿಲ್ಲದಿರುವುದು ಗೊತ್ತಾಗಿದೆ. ನಾಯಿಗಳೊಂದಿಗೆ ಬಾಲನನ್ನು ಬಿಡಬೇಡಿ. ಆತನನ್ನು ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಆಕೆ ಕಿವಿಮಾತು ಹೇಳಿಬರುತ್ತಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಪ್ರಕರಣದ ವಿವರಣೆ ಕೊಡುತ್ತಾರೆ.

ಚೈಲ್ಡ್ಲೈನ್ ಸಂಸ್ಥೆಯ ಆ ಸದಸ್ಯೆ ಮತ್ತೊಮ್ಮೆ, ಅಂದರೆ ಮೇ 9ರಂದು ಆ ಮನೆಗೆ ಹೋಗುತ್ತಾರೆ. ಆಗ ಪೋಷಕರು ಮನೆಯಲ್ಲಿ ಇರುವುದಿಲ್ಲ. ಬಾಲಕನನ್ನು ಮನೆಯೊಳಗೆಯೇ ಕೂಡಿಹಾಕಿ ಹೋಗಿರುತ್ತಾರೆ. "ಅದೇ ದಿನ ಎನ್ಜಿಒದವರು ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಬಾಲಕನನ್ನು ರಕ್ಷಿಸುತ್ತಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ" ಎಂದು ಪೊಲೀಸರು ಹೇಳಿದ್ದಾರೆ.

ಶ್ವಾನದ ರೀತಿ ವರ್ತನೆ:
ಅಷ್ಟು ನಾಯಿಗಳೊಂದಿಗೆ ಇದ್ದೂ ಇದ್ದೂ 11 ವರ್ಷದ ಬಾಲಕನ ವರ್ತನೆ ಪ್ರಾಣಿಗಳ ರೀತಿಯಂತೆ ಇತ್ತು ಎಂದು ಪೊಲೀಸರು ತಿಳಿಸುತ್ತಾರೆ. ಆ ಹುಡುಗನನ್ನು ಮಕ್ಕಳ ಪಾಲನಾ ಗೃಹಕ್ಕೆ ಸೇರಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ಧಾರೆ.
(ಒನ್ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications