ರಾಮನವಮಿ ದಿನ ಬಿಹಾರದ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಗುಂಪು: ಎಫ್ಐಆರ್ ದಾಖಲು
ಪಾಟ್ನಾ, ಏಪ್ರಿಲ್ 12: ರಾಮ ನವಮಿ ಸಂದರ್ಭದಲ್ಲಿ ಬಿಹಾರದ ಮುಜಾಫರ್ಪುರದಲ್ಲಿ ವ್ಯಕ್ತಿಯೊಬ್ಬರು ಮಸೀದಿಯ ಗೋಡೆಯನ್ನು ಹತ್ತಿ ಅದರ ಗೇಟ್ನ ಮೇಲೆ ಕೇಸರಿ ಧ್ವಜವನ್ನು ಹಾಕಿರುವ ಬಗ್ಗೆ ವರದಿಯಾಗಿದೆ.
ದ್ವಿಚಕ್ರವಾಹನ, ಮಿನುಗುವ ಕತ್ತಿಗಳು ಮತ್ತು ಹಾಕಿ ಸ್ಟಿಕ್ಗಳನ್ನು ಹಿಡಿದು ಸವಾರಿ ಮಾಡುವ ಹಲವು ಮಂದಿ ಯುವಕರು ವ್ಯಕ್ತಿಯೊಬ್ಬರು ಮಸೀದಿಯ ಗೋಡೆಯನ್ನು ಹತ್ತಿ ಅದರ ಗೇಟ್ನ ಮೇಲೆ ಕೇಸರಿ ಧ್ವಜವನ್ನು ಹಾಕುವುದನ್ನು ಹುರಿದುಂಬಿಸಿದ್ದಾರೆ.
Saffron Flag Planted On Bihar Mosque On Ram Navami, Many Seen Cheering pic.twitter.com/dNYEWT9vpx
— Shoaib Siddiqui (@ShoaibS25199050) April 12, 2022
ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ. ಪುರುಷರು ಸಂತೋಷದಿಂದ ಘೋಷಣೆ ಕೂಗುವುದು. ಗೋಡೆಯ ಮೇಲೆ ಹತ್ತಿರುವ ಯುವಕನನ್ನು ಹುರಿದುಂಬಿಸುವುದು ಈ ಕಂಡು ಬಂದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ರಾಮ ನವಮಿಯನ್ನು ಆಚರಿಸುವ ಸಂದರ್ಭದಲ್ಲಿ ಯುವಕರು ಮೊಹಮ್ಮದ್ಪುರ ಗ್ರಾಮದ ದಕ್ ಬಾಂಗ್ಲಾ ಮಸೀದಿಯ ಮುಂದೆ ಮೆರವಣಿಗೆ ನಡೆಸಿದರು. ಘಟನೆಯಲ್ಲಿ ಎಫ್ಐಆರ್ ದಾಖಲಿಸಿರುವುದನ್ನು ಎಸ್ಎಸ್ಪಿ ಮುಜಾಫರ್ಪುರ್ ಜಯಂತ್ ಕಾಂತ್ ಖಚಿತಪಡಿಸಿದ್ದಾರೆ. ಆದರೆ ಈವರೆಗೆ ಯಾರದೇ ಬಂಧನ ನಡೆದಿಲ್ಲ. ಈ ಘಟನೆಯ ನಂತರ ಯಾವುದೇ ಕೋಮು ದಳ್ಳುರಿ ನಡೆದಿಲ್ಲ ಎಂದು ವರದಿಗಳು ಹೇಳುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೇಗಿದೆ?
ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಾಗೇಂದ್ರ ಗುಪ್ತಾ ಎಂಬವರು, "ರಾಮನ ಬಗ್ಗೆ ಈ ಕಿಡಿಗೇಡಿಗಳಿಗೆ ಕಿಂಚಿತ್ತೂ ಕಲ್ಪನೆಯಿದ್ದರೆ ಅದನ್ನು ಮಾಡುತ್ತಿರಲಿಲ್ಲ. ಈ ಘಟನೆಗಳು ಇನ್ನು ಕಡಿಮೆಯಾಗಿಲ್ಲ. ಈ ಗೂಂಡಾಗಳನ್ನು ಶಿಕ್ಷಿಸದಿದ್ದರೆ ಭಾರತದ ಜಾತ್ಯತೀತತೆಯ ಅಂತ್ಯ ಸಮೀಪಿಸಲಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ನಾವು ಭಾರತದಲ್ಲಿ ಮುಸ್ಲಿಮರಾಗಿರುವುದನ್ನು ಅಪರಾಧವೆಂದು ಏಕೆ ಘೋಷಿಸಬಾರದು? ಅಲ್ಲಿಗೆ ಎಲ್ಲಾವೂ ಮುಗಿಯುತ್ತದೆ ಅಲ್ಲವೇ?. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿ. ಅಷ್ಟು ಕ್ರೂರ, ನೀಚ ಮಟ್ಟಕ್ಕೆ ನಾವು ಇಳಿದಿದ್ದೇವೆ," ಎಂದು ಯುವರಾಜ್ ಸಿಂಗ್ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಗರಿಗೆ ನಾಚಿಕೆ ಆಗುವುದಿಲ್ಲವೇ, ನೀವು ಈ ದೇಶವನ್ನು ನಾಶ ಮಾಡುತ್ತಿದ್ದೀರಿ," ಎಂದು ಅನಿಲ್ ಆಚಾರ್ಯ ಎಂಬವರು ಹೇಳಿದರೆ, "ಈವರೆಗೂ ಯಾರದೇ ಬಂಧನವಾಗಿಲ್ಲ. ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣವಾಗಿ ಸೋತಿದೆ ಎಂಬುವುದಕ್ಕೆ ಇದುವೇ ಸಾಕ್ಷಿಯಾಗಿದೆ," ಎಂದು ಮೊಹಮ್ಮದ್ ಖುರೇಷಿ ಎಂಬವರು ಟ್ವೀಟ್ ಮಾಡಿದ್ದಾರೆ.
Recommended Video
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications