ರಾಮನವಮಿ ದಿನ ಬಿಹಾರದ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಗುಂಪು: ಎಫ್ಐಆರ್ ದಾಖಲು
ಪಾಟ್ನಾ, ಏಪ್ರಿಲ್ 12: ರಾಮ ನವಮಿ ಸಂದರ್ಭದಲ್ಲಿ ಬಿಹಾರದ ಮುಜಾಫರ್ಪುರದಲ್ಲಿ ವ್ಯಕ್ತಿಯೊಬ್ಬರು ಮಸೀದಿಯ ಗೋಡೆಯನ್ನು ಹತ್ತಿ ಅದರ ಗೇಟ್ನ ಮೇಲೆ ಕೇಸರಿ ಧ್ವಜವನ್ನು ಹಾಕಿರುವ ಬಗ್ಗೆ ವರದಿಯಾಗಿದೆ.
ದ್ವಿಚಕ್ರವಾಹನ, ಮಿನುಗುವ ಕತ್ತಿಗಳು ಮತ್ತು ಹಾಕಿ ಸ್ಟಿಕ್ಗಳನ್ನು ಹಿಡಿದು ಸವಾರಿ ಮಾಡುವ ಹಲವು ಮಂದಿ ಯುವಕರು ವ್ಯಕ್ತಿಯೊಬ್ಬರು ಮಸೀದಿಯ ಗೋಡೆಯನ್ನು ಹತ್ತಿ ಅದರ ಗೇಟ್ನ ಮೇಲೆ ಕೇಸರಿ ಧ್ವಜವನ್ನು ಹಾಕುವುದನ್ನು ಹುರಿದುಂಬಿಸಿದ್ದಾರೆ.
Saffron Flag Planted On Bihar Mosque On Ram Navami, Many Seen Cheering pic.twitter.com/dNYEWT9vpx
— Shoaib Siddiqui (@ShoaibS25199050) April 12, 2022
ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ. ಪುರುಷರು ಸಂತೋಷದಿಂದ ಘೋಷಣೆ ಕೂಗುವುದು. ಗೋಡೆಯ ಮೇಲೆ ಹತ್ತಿರುವ ಯುವಕನನ್ನು ಹುರಿದುಂಬಿಸುವುದು ಈ ಕಂಡು ಬಂದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ರಾಮ ನವಮಿಯನ್ನು ಆಚರಿಸುವ ಸಂದರ್ಭದಲ್ಲಿ ಯುವಕರು ಮೊಹಮ್ಮದ್ಪುರ ಗ್ರಾಮದ ದಕ್ ಬಾಂಗ್ಲಾ ಮಸೀದಿಯ ಮುಂದೆ ಮೆರವಣಿಗೆ ನಡೆಸಿದರು. ಘಟನೆಯಲ್ಲಿ ಎಫ್ಐಆರ್ ದಾಖಲಿಸಿರುವುದನ್ನು ಎಸ್ಎಸ್ಪಿ ಮುಜಾಫರ್ಪುರ್ ಜಯಂತ್ ಕಾಂತ್ ಖಚಿತಪಡಿಸಿದ್ದಾರೆ. ಆದರೆ ಈವರೆಗೆ ಯಾರದೇ ಬಂಧನ ನಡೆದಿಲ್ಲ. ಈ ಘಟನೆಯ ನಂತರ ಯಾವುದೇ ಕೋಮು ದಳ್ಳುರಿ ನಡೆದಿಲ್ಲ ಎಂದು ವರದಿಗಳು ಹೇಳುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೇಗಿದೆ?
ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಾಗೇಂದ್ರ ಗುಪ್ತಾ ಎಂಬವರು, "ರಾಮನ ಬಗ್ಗೆ ಈ ಕಿಡಿಗೇಡಿಗಳಿಗೆ ಕಿಂಚಿತ್ತೂ ಕಲ್ಪನೆಯಿದ್ದರೆ ಅದನ್ನು ಮಾಡುತ್ತಿರಲಿಲ್ಲ. ಈ ಘಟನೆಗಳು ಇನ್ನು ಕಡಿಮೆಯಾಗಿಲ್ಲ. ಈ ಗೂಂಡಾಗಳನ್ನು ಶಿಕ್ಷಿಸದಿದ್ದರೆ ಭಾರತದ ಜಾತ್ಯತೀತತೆಯ ಅಂತ್ಯ ಸಮೀಪಿಸಲಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ನಾವು ಭಾರತದಲ್ಲಿ ಮುಸ್ಲಿಮರಾಗಿರುವುದನ್ನು ಅಪರಾಧವೆಂದು ಏಕೆ ಘೋಷಿಸಬಾರದು? ಅಲ್ಲಿಗೆ ಎಲ್ಲಾವೂ ಮುಗಿಯುತ್ತದೆ ಅಲ್ಲವೇ?. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿ. ಅಷ್ಟು ಕ್ರೂರ, ನೀಚ ಮಟ್ಟಕ್ಕೆ ನಾವು ಇಳಿದಿದ್ದೇವೆ," ಎಂದು ಯುವರಾಜ್ ಸಿಂಗ್ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಗರಿಗೆ ನಾಚಿಕೆ ಆಗುವುದಿಲ್ಲವೇ, ನೀವು ಈ ದೇಶವನ್ನು ನಾಶ ಮಾಡುತ್ತಿದ್ದೀರಿ," ಎಂದು ಅನಿಲ್ ಆಚಾರ್ಯ ಎಂಬವರು ಹೇಳಿದರೆ, "ಈವರೆಗೂ ಯಾರದೇ ಬಂಧನವಾಗಿಲ್ಲ. ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣವಾಗಿ ಸೋತಿದೆ ಎಂಬುವುದಕ್ಕೆ ಇದುವೇ ಸಾಕ್ಷಿಯಾಗಿದೆ," ಎಂದು ಮೊಹಮ್ಮದ್ ಖುರೇಷಿ ಎಂಬವರು ಟ್ವೀಟ್ ಮಾಡಿದ್ದಾರೆ.
Recommended Video
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications