'ಇ-ಮೇಲ್ಗಳು ಸ್ಕರ್ಟ್ ನಂತೆ ಶಾರ್ಟ್ ಆಗಿರ್ಬೇಕು'
'ಇ-ಮೇಲ್ಗಳು ಸ್ಕರ್ಟ್ ನಂತೆ ಶಾರ್ಟ್ ಆಗಿರ್ಬೇಕು, ಆಕರ್ಷಕವಾಗಿರಬೇಕು' ಎಂದು ಬಿ.ಕಾಂ (ಆನರ್ಸ್) ಪಠ್ಯದಲ್ಲಿ ಮುದ್ರಣಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ, ಜೂನ್ 08: 'ಇ-ಮೇಲ್ಗಳು ಎಷ್ಟು ಶಾರ್ಟ್ ಮತ್ತು ಆಕರ್ಷಕವಾಗಿರಬೇಕು ಎಂದರೆ ಮಿನಿ ಸ್ಕರ್ಟ್ನಂತಿರಬೇಕು' ಎಂದು ಬಿಕಾಂ (ಆನರ್ಸ್) ಪಠ್ಯದಲ್ಲಿ ಮುದ್ರಣಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ದೆಹಲಿ ವಿಶ್ವವಿದ್ಯಾನಿಲಯದ ಮಾನ್ಯತೆ ಹೊಂದಿರುವ ಕಾಲೇಜಿನ ವಾಣಿಜ್ಯ ವಿಭಾಗದ ಮಾಜಿ ಮುಖ್ಯಸ್ಥ ಸಿ.ಬಿ.ಗುಪ್ತಾ ಬರೆದಿರುವ ಪಠ್ಯ ಪುಸ್ತಕ ಈಗ ಚರ್ಚೆಯ ವಿಷಯವಾಗಿದೆ.

'ಬೇಸಿಕ್ ಬ್ಯುಸಿನೆಸ್ ಕಮ್ಯುನಿಕೇಶನ್' ಪಠ್ಯದಲ್ಲಿ ಇಮೇಲ್ ಬಗ್ಗೆ ವಿವರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೆಹಲಿ ವಿವಿ ಕಾಲೇಜುಗಳಲ್ಲಿ ಈ ಪಠ್ಯ ಬಳಸುವಂತೆ ವಿದ್ಯಾರ್ಥಿಗಳಿಗೆ ಬಹುತೇಕ ಪ್ರಾಧ್ಯಾಪಕರು ಶಿಫಾರಸು ಮಾಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದಲೂ ಈ ಪುಸ್ತಕ ಬಳಕೆಯಲ್ಲಿದ್ದು, "ಇ-ಮೇಲ್ ಸಂದೇಶಗಳು ಸ್ಕರ್ಟ್ ನಂತೆ ಇರಬೇಕು. ಅಸಕ್ತಿದಾಯಕವಾಗುವಷ್ಟು ಗಿಡ್ಡ ಹಾಗೂ ಎಲ್ಲ ಅಂಶಗಳನ್ನೂ ಮುಚ್ಚುವಷ್ಟು (ಒಳಗೊಳ್ಳುವಷ್ಟು) ಉದ್ದ ಇರಬೇಕು" ಎಂದು ವಿವರಿಸಲಾಗಿದೆ.
'ಇದು ಸಮಾಜದಲ್ಲಿ ಸೆಕ್ಸಿಸಂ ಅಧಿಕೃತಗೊಳಿಸುವ ಪ್ರಯತ್ನ' ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ. ವಿದೇಶಿ ಲೇಖಕರು ಬರೆದ ಈ ವಿವರಣೆಯನ್ನು ಪಠ್ಯದಿಂದ ಕಿತ್ತು ಹಾಕಲಾಗಲು ಪಬ್ಲಿಷರ್ಸ್ ಗೆ ಸೂಚಿಸಲಾಗಿದೆ ಎಂದು ಸಿ.ಬಿ.ಗುಪ್ತಾ ಹೇಳಿದ್ದಾರೆ.
More From
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications