ದೆಹಲಿ: ನೆರೆ ಹೊರೆಯವರ ಜಗಳಕ್ಕೆ ಬಾಲಕ ಬಲಿ
ನವದೆಹಲಿ, ನವೆಂಬರ್ 25 : ನೆರೆಹೊರೆ ಮಹಿಳೆಯರ ಜಗಳ, ಎರಡು ವರ್ಷದ ಹಸುಳೆಯ ಜೀವಕ್ಕೆ ಎರವಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಉತ್ತಮ್ ನಗರದಲ್ಲಿ ನಿವಾಸಿಯಾದ ದೀಪಮಾಲಾ ತನ್ನ ಪಕ್ಕದ ಮನೆಯ ಮಹಿಳೆ ಖುಷ್ಬು ಜೊತೆ ಯಾವುದೊ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ. ಆದರೆ ಆ ಜಗಳ ಅಂತ್ಯ ಕಂಡಿದ್ದು ಮಾತ್ರ ಸಾವಲ್ಲಿ.
ತೀರಾ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದ ದೀಪಮಾಲಾ ಮತ್ತು ಖುಷ್ಬುರ ನಡುವೆ ಸಣ್ಣ ದ್ವೇಷ ಪ್ರಾರಂಭವಾಗಿದೆ. ಜಗಳವನ್ನು ಅಲ್ಲಿಗೆ ಬಿಡದ ದೀಪಮಾಲ ಖುಷ್ಬು ಅವರ 2 ವರ್ಷದ ಮಗ ನಿಖಿಲ್ ನನ್ನು ತನ್ನ ಮನೆಗೆ ಆಡಲು ಕರೆದಿದ್ದಾಳೆ. ಮಗು ಆಡುತ್ತಿರಬೇಕಾದರೆ ಮಹಿಳೆ ಆತನ ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ ಮಾಡಿದ್ದಾಳೆ.

ರಕ್ತ ಕಾರುತ್ತಾ ಬಿದ್ದಿದ್ದ ನಿಖಿಲ್ ನ ದೇಹವನ್ನು ಒಂದು ಮೂಟೆಯಲ್ಲಿ ಹಾಕಿದ ದೀಪಮಾಲಾ ದೂರ ಬಿಸಾಡಲು ಯೋಜಿಸಿ ಕತ್ತಲಾಗಲು ಕಾಯುತ್ತಾ ಕೂತಿದ್ದಳು.
ಇತ್ತ ಮಗ ನಿಖಿಲ್ ನನ್ನು ಕಾಣದೆ ಕಂಗಾಲಾದ ಖುಷ್ಬು ಎಲ್ಲಡೆ ಹುಡುಕಿ ಕೊನೆಗೆ ತನ್ನ ಪಕ್ಕದ ಮನೆಯಲ್ಲೆ ತಲೆಗೆ ಗಾಯ ಮಾಡಿಕೊಂಡು ರಕ್ತದ ಮಡುವಿನಲ್ಲಿ ಮೂಟೆಯೊಳಗೆ ಬಂಧಿಯಾಗಿದ್ದ ಮಗನನ್ನು ಕಂಡು ಹೌಹಾರಿದ್ದಾಳೆ. ಕೂಡಲೆ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಆತ ದಾರಿಯಲ್ಲೇ ಅಸುನೀಗಿದ್ದಾನೆ.
ದ್ವೇಷಕ್ಕಾಗಿ ಮಗುವನ್ನು ಕೊಂದ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಯಾವ ಕಾರಣಕ್ಕೆ ನೆರೆಹೊರೆಯವರಿಬ್ಬರೂ ಜಗಳ ಮಾಡಿಕೊಂಡಿದ್ದರು ಎಂಬುದು ತಿಳಿದುಬಂದಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications