ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಾದರಾಗಲಿ ಮಂದಿರ ಅಲ್ಲೇ ಕಟ್ಟುವೆವು: ಅಮಿತ್ ಶಾ ಪುನರುಚ್ಛಾರ

|
Google Oneindia Kannada News

ನವದೆಹಲಿ, ಜನವರಿ 12: ಲೋಕಸಭೆ ಚುನಾವಣೆ ಹತ್ತಿರ ಬರುತ್ತಲೆ ಬಿಜೆಪಿ ಮತ್ತೆ ರಾಮ ಮಂದಿರ ವಿಷಯವನ್ನು ಮುನ್ನಲೆಗೆ ತಂದಿದೆ. ಇಂದು ನಡೆದ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ 'ಮಂದಿರ ಅಲ್ಲೇ ಕಟ್ಟುವೆವು' ಎಂದು ಅಮಿತ್ ಶಾ ಅಬ್ಬರಿಸಿದ್ದಾರೆ.

ಮೋದಿ ಅವರು ಇತ್ತೀಚೆಗಷ್ಟೆ ಅಯೋಧ್ಯೆ ತೀರ್ಪಿಗೆ ಕಾದು ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದಿದ್ದರು. ಇದನ್ನು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳು ಸೇರಿದಂತೆ ಬಿಜೆಪಿ ಬೆಂಬಲಿತ ಕೆಲವು ಹಿಂದೂಪರ ಸಂಘಟನೆಗಳು ಒಪ್ಪಿರಲಿಲ್ಲ.

ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿ ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿ

ಆದರೆ ಇಂದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ನೇರವಾಗಿ ರಾಮ ಮಂದಿರವನ್ನು ನಿಗದಿತ ಜಾಗದಲ್ಲಿಯೇ ಕಟ್ಟುತ್ತೇವೆ ಎಂದು ಹೇಳುವ ಮೂಲಕ ಮೋದಿ ಹೇಳಿಕೆಯ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ಹೇಳಿಕೆಯಲ್ಲಿ ಅಯೋಧ್ಯೆ ತೀರ್ಪಿಗೆ ಕಾಯುತ್ತೇವೆ ಎಂಬ ಭಾವ ಇರಲಿಲ್ಲವೆನ್ನುವುದು ಗಮನಿಸಬೇಕಾದ ಅಂಶ.

We will build Ram temple in Ayodhya: Amit Shah

ಅಯೋಧ್ಯೆ ವಿಚಾರಣೆ ಜ.29 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್ಅಯೋಧ್ಯೆ ವಿಚಾರಣೆ ಜ.29 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ರಾಮ ಮಂದಿರ ಕಟ್ಟಲು ಬಿಜೆಪಿ ಸಿದ್ಧವಾಗಿದೆ, ಅಯೋಧ್ಯೆ ಪ್ರಕರಣಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಆದರದೇನೇ ಆಗಲಿ ರಾಮ ಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ ಎಂದು ಅಮಿತ್ ಶಾ ದೊಡ್ಡ ಗಂಟಲಿನಲ್ಲಿ ಹೇಳಿ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದಾರೆ.

English summary
BJP president Amit Shah said BJP is ready to build Ram Mandir in Ayodhya. We will build temple in any cost. Congress making hurdles to the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X