ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

' 7 ದಿನದಲ್ಲಿ ಬಂಗಲೆ ಬಿಡಿ, ಇಲ್ಲ ಅಂದ್ರೆ ನೀರು, ಕರೆಂಟ್ ಕಟ್ ಮಾಡ್ತೀವಿ'

|
Google Oneindia Kannada News

ನವದೆಹಲಿ, ಆಗಸ್ಟ್ 19: ಏಳು ದಿನದಲ್ಲಿ ಬಂಗಲೆ ಬಿಡಿ ಇಲ್ಲ ಅಂದರೆ ಕರೆಂಟು, ನೀರು ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಮಾಜಿ ಸಂಸದರಿಗೆ ಕೇಂದ್ರ ಎಚ್ಚರಿಕೆ ನೀಡಿದೆ.

ಕಳೆದ ಲೋಕಸಭೆಯಲ್ಲಿ ಸೋಲನ್ನು ಅನುಭವಿಸಿರುವ ಇನ್ನೂರಕ್ಕೂ ಹೆಚ್ಚು ಮಂದಿಗೆ ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಏಳು ದಿನಗಳಲ್ಲಿ ಬಂಗಲೆ ಖಾಲಿ ಮಾಡದಿದ್ದರೆ ವಿದ್ಯುತ್, ನೀರು ಸಂಪರ್ಕವನ್ನು ಕಡಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.

'ಮಾಜಿ'ಗಳಾದರೂ ಸರಕಾರೀ ನಿವಾಸ ಖಾಲಿ ಮಾಡದ 200 ಸಂಸದರು: ಏನ್ ಹೇಳೋಣ ಇವರಿಗೆ? 'ಮಾಜಿ'ಗಳಾದರೂ ಸರಕಾರೀ ನಿವಾಸ ಖಾಲಿ ಮಾಡದ 200 ಸಂಸದರು: ಏನ್ ಹೇಳೋಣ ಇವರಿಗೆ?

ಸಂದಸರಿಗೆ 2014ರಲ್ಲಿ ಬಂಗಲೆ ಮಂಜೂರು ಮಾಡಲಾಗಿತ್ತು. ಮಾಜಿ ಸಂಸದರು ಹಿಂದಿನ ಲೋಕಸಭೆಯನ್ನು ವಿಸರ್ಜಿಸಿದ ಒಂದು ತಿಂಗಳೊಳಗೆ ತಮಗೆ ಕೊಟ್ಟಿರುವ ಬಂಗಲೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಮೂರು ತಿಂಗಳು ಕಳೆದರೂ ಬಂಗಲೆ ಖಾಲಿ ಮಾಡುವಂತೆ ಕಾಣುತ್ತಿಲ್ಲ.

Vacate Bungalow In 7 Days Power And Water To Be Stopped

ಏಳು ದಿನ ಸಮಯ ನೀಡಿದ್ದರೂ ಮೂರು ದಿನ ಮುಗಿಯುತ್ತಿದ್ದಂತೆ ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಹೇಳಿದೆ. ವಸತಿ ಸಮಿತಿ ಅಧ್ಯಕ್ಷ ಸಿಆರ್ ಪಾಟೀಲ್ ತಿಳಿಸಿದ್ದಾರೆ.

ಈ ಹಿಂದೆ ರಾಹುಲ್ ಗಾಂಧಿಗೂ ಕೂಡ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಹೊಸದಾಗಿ ಆಯ್ಕೆಯಾಗಿರುವ ಸಂಸದರಿಗೆ ಉಳಿದುಕೊಳ್ಳಲು ಬಂಗಲೆ ಇರದೆ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

English summary
Vacate Bungalow In 7 Days Power And Water To Be Stopped, All former MPs have asked to vacate their government accommodations, mostly the heritage bungalows in the posh Lutyen's zone the Centre said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X