ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲಾಕ್‌ಡೌನ್‌ನಲ್ಲಿ ಸೋತರೆ, ಕೊರೊನಾ ವಿರುದ್ಧ ಗೆಲ್ಲಲು ಕಷ್ಟ'

|
Google Oneindia Kannada News

ದೆಹಲಿ, ಏಪ್ರಿಲ್ 10: ಸಾಂಕ್ರಾಮಿಕ ರೋಗ ಕೊರೊನಾದಿಂದ ತಪ್ಪಿಸಿಕೊಳ್ಳಬೇಕು ಅಂದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಸದ್ಯಕ್ಕೆ ಪರಿಹಾರ ಅಥವಾ ಔಷಧ ಎನ್ನುವುದು ಸರ್ವರಾಷ್ಟ್ರಗಳು ಕಂಡುಕೊಂಡಿದೆ. ಹಾಗಾಗಿ, ವಿಶ್ವದ ಬಹುತೇಕ ದೇಶಗಳು ಲಾಕ್‌ಡೌನ್‌ ಮೊರೆ ಹೋಗಿದೆ.

ಲಾಕ್‌ಡೌನ್‌ ಗಂಭೀರವಾಗಿ ತೆಗೆದುಕೊಳ್ಳದ ದೇಶದಲ್ಲಿ ಕೊರೊನಾ ಹೆಚ್ಚು ಹರಡಿದೆ. ಕೊರೊನಾದಿಂದ ಹೊರಬರಲು ಚೀನಾ ಅನುಸರಿಸಿದ್ದು ಇದೇ ಸೂತ್ರ. ಲಾಕ್‌ಡೌನ್‌ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಅಮೆರಿಕದಲ್ಲಿ ಇಂದು ಸೋಂಕಿತರ ಸಂಖ್ಯೆ ಲಕ್ಷಕ್ಕೆ ಏರಿರುವುದು.

ಬೆಂಗಳೂರಿನಲ್ಲಿ ಸೀಲ್‌ಡೌನ್‌ ಇಲ್ಲ: ಭಾಸ್ಕರ್ ರಾವ್ ಸ್ಪಷ್ಟನೆ ಬೆಂಗಳೂರಿನಲ್ಲಿ ಸೀಲ್‌ಡೌನ್‌ ಇಲ್ಲ: ಭಾಸ್ಕರ್ ರಾವ್ ಸ್ಪಷ್ಟನೆ

ಈ ಎಲ್ಲ ಉದಾಹರಣೆಗಳನ್ನು ಗಮನಿಸಿರುವ ಭಾರತ, ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಒತ್ತಡದಲ್ಲಿದೆ. ಈಗಾಗಲೇ ಏಪ್ರಿಲ್ 21ರವರೆಗೂ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಭಾರತದ ಸದ್ಯದ ಅಂಕಿ-ಅಂಶ ನೋಡಿದ್ರೆ ಏಪ್ರಿಲ್ 14ರ ಬಳಿಕವೂ ಲಾಕ್‌ಡೌನ್‌ ಮುಂದುವರಿಸುವ ಅಗತ್ಯವಿದೆ.

ಇದೀಗ, ಕೇಂದ್ರ ಆರೋಗ್ಯ ಸಚಿವೆ ಹರ್ಷವರ್ಧನ್ ರಾಜ್ಯಗಳಿಗೆ ಮತ್ತೊಮ್ಮೆ ಎಚ್ಚರಿಸಿದ್ದಾರೆ. ''ನಿಮ್ಮ ರಾಜ್ಯಗಳಲ್ಲಿ ಲಾಕ್‌ಡೌನ್‌ ಸಂಪೂರ್ಣವಾಗಿ ಪಾಲನೆ ಮಾಡಿಸಿ, ಲಾಕ್‌ಡೌನ್‌ನಲ್ಲಿ ಹಿನ್ನಡೆಯಾದರೆ, ಅದರ ಪರಿಣಾಮ ಗಂಭೀರವಾಗುತ್ತೆ. ಕೊರೊನಾ ವಿರುದ್ಧ ಹೋರಾಡಲು ಕಷ್ಟವಾಗುತ್ತೆ'' ಎಂದು ಮನವರಿಕೆ ಮಾಡಿದ್ದಾರೆ.

Union Health Minister Direct To States Follow Lockdown Strictly

ಅಂದ್ಹಾಗೆ, ಲಾಕ್‌ಡೌನ್‌ ವಿಸ್ತರಣೆ ಮಾಡಿ ಎಂದು ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕರ್ನಾಟಕ, ತೆಲಂಗಾಣ, ಪಂಜಾಬ್, ದೆಹಲಿ ಸೇರಿದಂತೆ ಹಲವು ರಾಜ್ಯಗಳು ಲಾಕ್‌ಡೌನ್‌ ಮುಂದುವರಿಕೆಗೆ ಮುಂದಾಗಿದೆ. ಒಡಿಶಾ ಸರ್ಕಾರ ಅದಾಗಲೇ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಾಳೆ ಪ್ರಧಾನಿ ಮೋದಿ ರಾಜ್ಯದ ಸಿಎಂಗಳ ಜೊತೆ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ.

English summary
I request health ministers of all states to ensure that lockdown is followed 100% in your respective states - Dr Harsh Vardhan, Union Health Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X