ಯುಜಿಸಿ ಪಾರಂಪರಿಕ ಪಟ್ಟಿಗೆ ಮಂಗಳೂರು ವಿವಿ ಕಾಲೇಜ್
ನವದೆಹಲಿ, ಜುಲೈ, 06: ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ದೇಶದ 19 ಕಾಲೇಜುಗಳಿಗೆ ಪಾರಂಪರಿಕ ಸ್ಥಾನಮಾನ ನೀಡಿದೆ. ಈ ಪೈಕಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜು ಸೇರಿರುವುದು ಹೆಮ್ಮೆಯ ವಿಷಯ. ಯುಜಿಸಿ ಈ ಯೋಜನೆಯಿಂದ ಕಾಲೇಜುಗಳ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ನಿರಂತರ ಅನುದಾನ ದೊರೆಯಲಿದೆ.
ದೇಶದ 19 ಕಾಲೇಜುಗಳಿಗೆ ಪಾರಂಪರಿಕ ಸ್ಥಾನಮಾನ ಪಡೆಯಲು 60ಕ್ಕೂ ಹೆಚ್ಚು ಕಾಲೇಜುಗಳಿಂದ ಅರ್ಜಿ ಬಂದಿತ್ತು, ಅದರೆ, ಈ ಪೈಕಿ19 ಕಾಲೇಜುಗಳನ್ನು ಪರಿಗಣಿಸಲಾಗಿದೆ. ದೆಹಲಿಯ ಒಂದೇ ಒಂದು ಕಾಲೇಜು ಕೂಡಾ ಈ ಪಟ್ಟಿಗೆ ಸೇರುವಲ್ಲಿ ಸಫಲವಾಗಿಲ್ಲ.

ಆಯ್ಕೆಯಾಗಿರುವ ಕಾಲೇಜುಗಳ ಸಂರಕ್ಷಣೆ ಹಾಗೂ ಹೊಸ ಕೋರ್ಸ್ಗಳ ಪ್ರಾರಂಭಕ್ಕೆ ಧನಸಹಾಯ ಮಾಡಲಾಗುತ್ತದೆ ಎಂದು ಯುಜಿಸಿ ಅಧಿಕಾರಿಗಳು ತಿಳಿಸಿದ್ದಾರೆ. [ಮಾನಸ ಗಂಗೋತ್ರಿ ವಿವಿ ಘಟಿಕೋತ್ಸವದ ಚಿತ್ರಗಳು]
ಮಂಗಳೂರಿನ ಯುನಿವರ್ಸಿಟಿ ಕಾಲೇಜು ಹೊರತುಪಡಿಸಿ, ಮುಂಬೈ ಸೇಂಟ್ ಕ್ಸೇವಿಯರ್ಸ್ ಕಾಲೇಜು, ಕೊಟ್ಟಾಯಂನ ಸಿಎಂಎಸ್ ಕಾಲೇಜು, ಕೇರಳದ ಸರ್ಕಾರಿ ಬ್ರೆನ್ನನ್ ಕಾಲೇಜು ಪಾರಂಪರಿಕ ಸ್ಥಾನಮಾನ ಪಡೆದ ಕೆಲ ಕಾಲೇಜುಗಳಾಗಿವೆ. ಗುವಾಹಟಿಯ ಕಾಟನ್ ಕಾಲೇಜು ಅತೀ ಹೆಚ್ಚು 4.35 ಕೋಟಿ ರೂ. ಧನಸಹಾಯ ಪಡೆದಿದೆ.
1865ರಲ್ಲಿ ಶಾಲೆ ಸ್ಥಾಪನೆಯಾಗಿದ್ದು, 1968ರಲ್ಲಿ ಕಾಲೇಜು ನಂತರ ವಿವಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯ 33ನೇ ವಾರ್ಷಿಕ ಘಟಿಕೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡಿದೆ. ಪಂಜೆ ಮಂಗೇಶರಾಯ, ಮಂಜೇಶ್ವರ ಗೋವಿಂದ ಪೈ, ಕೋಟ ಶಿವರಾಮ ಕಾರಂತ, ಬೆನಗಲ್ ರಾಮರಾಯ , ಡಾ. ಎಂ. ವೀರಪ್ಪ ಮೊಯಿಲಿ ಸೇರಿದಂತೆ ಅನೇಕ ಹೆಸರಾಂತ ವ್ಯಕ್ತಿಗಳು ಮಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ. [ನಕಲಿ ವಿವಿಗಳ ಪಟ್ಟಿ ಪ್ರಕಟ]

ಅನುದಾನ ಪಡೆಯಲಿರುವ ಕಾಲೇಜುಗಳು:
* ಸೈಂಟ್ ಕ್ಸೇವಿಯರ್ ಕಾಲೇಜು, ಮುಂಬೈ
* ಸಿಎಂಎಸ್ ಕಾಲೇಜು, ಕೊಟ್ಟಾಯಂ
* ಸೈಂಟ್ ಜೋಸೆಫ್ ಕಾಲೇಜು, ತಿರುಚ್ಚಿ
* ಖಾಲ್ಸ ಕಾಲೇಜು, ಅಮೃತಸರ್
* ಸೈಂಟ್ ಬೆಡೆಸ್ ಕಾಲೇಜು, ಶಿಮ್ಲಾ
* ಕ್ರೈಸ್ಟ್ ಚರ್ಚ್ ಕಾಲೇಜು, ಕಾನ್ಪುರ
* ಓಲ್ಡ್ ಆಗ್ರಾ ಕಾಲೇಜು, ಆಗ್ರಾ
* ಮೀರತ್ ಕಾಲೇಜು, ಮೀರತ್
* ಲಾಂಗತ್ ಸಿಂಗ್ ಕಾಲೇಜ್, ಮುಜಾಫರ್ ಪುರ
* ಸರ್ಕಾರಿ ಬ್ರೆನ್ನನ್ ಕಾಲೇಜ್, ಕೇರಳ
* ಮಂಗಳೂರು ವಿಶ್ವವಿದ್ಯಾಲಯ ಕಾಲೇಜ್
* ಕಾಟನ್ ಕಾಲೇಜ್, ಗುವಾಹಟಿ
* ಮಿಡ್ನಾಪುರ ಕಾಲೇಜ್, ಪಶ್ಚಿಮ ಬಂಗಾಳ
* ಸರ್ಕಾರಿ ವೈದ್ಯಕೀಯ ವಿಜ್ಞಾನ ಕಾಲೇಜು, ಜಬಲ್ಪುರ
* ಡೆಕ್ಕನ್ ಎಜುಕೇಷನ್ ಸೊಸೈಟಿ ಫರ್ಗುಸನ್ ಕಾಲೇಜ್, ಪುಣೆ
* ಹಿಸ್ಲೋಪ್ ಕಾಲೇಜ್, ನಾಗ್ಪುರ
* ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು, ಜಮ್ಮು
* ಕನ್ಯಾ ಮಹಾವಿದ್ಯಾಲಯ, ಜಲಂಧರ್
* ಡಿಎವಿ ಕಾಲೇಜು, ಅಂಬಲಾ ನಗರ, ಹರ್ಯಾಣ
(ಒನ್ ಇಂಡಿಯಾ ಸುದ್ದಿ)
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications