Get Updates
Get notified of breaking news, exclusive insights, and must-see stories!

ಮತ್ತೆ ವಾತಾವರಣದಲ್ಲಿ ಬದಲಾವಣೆ: ದೆಹಲಿ ಸೇರಿದಂತೆ ಈ ರಾಜ್ಯಗಳ ಸ್ಥಿತಿ ಹೇಗಿದೆ

ನವದೆಹಲಿ ಮಾರ್ಚ್ 04: ಉತ್ತರ ಭಾರತದಲ್ಲಿ ಹವಾಮಾನವು ಬದಲಾಗುತ್ತಲೇ ಇದೆ. ಆದರೂ ಚಳಿಗಾಲ ಏಕಾಏಕಿ ಗಣನೀಯವಾಗಿ ಕಡಿಮೆಯಾಗಿದೆ. ಬೆಳಗ್ಗೆ ಮತ್ತು ಸಂಜೆ ಮೈಕೊರೆಯುವ ಚಳಿ ಏಕಾಏಕಿ ಕಡಿಮೆಯಾಗಿ ತಾಪಮಾನ ಹೆಚ್ಚಾಗುತ್ತಿದೆ. ಹೀಗೆ ಏಕಾಏಕಿ ಬದಲಾವಣೆಯಿಂದಾಗಿ ಜನರು ತೊಂದರೆಗೊಳಗಾಗುತ್ತಿದೆ. ಹೀಗಾಗಿ ಮತ್ತೊಂದೆಡೆ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಇಂದಿನಿಂದ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯ ಬದಲಾಗಲಿದ್ದು, ತಾಪಮಾನ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ನವೀಕರಣದಲ್ಲಿ ತಿಳಿಸಿದೆ. ದೆಹಲಿಯಲ್ಲಿ ಇಂದಿನ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಆಗಿದೆ. ಇಂದು ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.

ದೆಹಲಿ ಮಾತ್ರವಲ್ಲದೆ, ಯುಪಿ, ಬಿಹಾರ, ಎಂಪಿ ಮತ್ತು ಛತ್ತೀಸ್‌ಗಢದಲ್ಲಿ ಇಂದು ಹವಾಮಾನ ಭಾರೀ ಬದಲಾವಣೆಯಾಗಿದೆ. ದಿನದಲ್ಲಿ ಅಧಿಕ ಬಿಸಿಲು ಜನರನ್ನು ಹೈರಾಣಾಗಿಸಿದೆ. ಆದರೆ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ರಾಜಸ್ಥಾನದಲ್ಲಿ ಪಾದರಸದ ಅಬ್ಬರ ಹೆಚ್ಚಿದ್ದರೂ ಬಿಸಿ ಅಲ್ಲಿ ಸಂಪೂರ್ಣ ತಟ್ಟಿದೆ. ನಿನ್ನೆ ಇಲ್ಲಿನ ಹಲವು ನಗರಗಳಲ್ಲಿ ಪಾದರಸವು 32 ದಾಟಿದೆ. ರಾಜಸ್ಥಾನದಲ್ಲಿ ಬಿಸಿಲಿನ ಬಿಸಿ ಸಂಪೂರ್ಣವಾಗಿ ತಟ್ಟಿದೆ. ಜೊತೆಗೆ IMD ರಾಜಸ್ಥಾನದಲ್ಲಿ ಈ ಬಾರಿ ಹೆಚ್ಚಿನ ತಾಪಮಾನ ಇರುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ.

ಇಂದು ಈಶಾನ್ಯ ಭಾಗದಲ್ಲಿ ಮಳೆ

ಇತ್ತ ರಾಜಸ್ಥಾನದಲ್ಲಿ ಪಾದರಸ ಏಕಾಏಕಿ ಏರಿಕೆಯಾದರೆ ಈಶಾನ್ಯ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಸ್ಸಾಂ, ಸಿಕ್ಕಿಂ ಮತ್ತು ಮಿಜೋರಾಂನಲ್ಲಿಯೂ ಮಳೆಯಾಗುವ ಸಾಧ್ಯತೆ ಇದ್ದು, ಈ ಕಾರಣಕ್ಕಾಗಿ ಇಲ್ಲಿ ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಹಳದಿ ಅಲರ್ಟ್ ಘೋಷಿಸಲಾಗಿದೆ.

The mood of the weather will change again from March 4

ಇದು ಇಂದು ಬೆಳಗ್ಗೆ ದೆಹಲಿಯಲ್ಲಿನ AQI ಸ್ಥಿತಿ

ಪುಸಾ, ದೆಹಲಿ- 128 AQI,

ಪಂಜಾಬಿ ಬಾಗ್- 115AQI,

ಬಾದ್ ಶಾದಿಪುರ್- 121 AQI,

ಬ್ಯಾಡ್ ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ-123 AQI,

ಅಶೋಕ್ ವಿಹಾರ್ - 121AQI,

NSIT QI, 128 QI

ಲೋಧಿ ರಸ್ತೆ, 128 AQI

The mood of the weather will change again from March 4

ಇಂದು ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ಸ್ವಲ್ಪ ಮಳೆಯಾಗಬಹುದು ಎಂದು ಸ್ಕೈಮೆಟ್ ಹೇಳಿದೆ. ಪಶ್ಚಿಮದ ಅವಾಂತರಗಳಿಂದ ಫಲೋಡಿ, ಬಿಕಾನೇರ್, ಜೋಧ್‌ಪುರ, ಬಾರ್ಮರ್ ಮತ್ತು ಶ್ರೀ ಗಂಗಾನಗರದಲ್ಲಿ ಇಂದು ಮಳೆಯಾಗಬಹುದು.ವಾಸ್ತವವಾಗಿ, ಸಿಕರ್, ಅಲ್ವಾರ್, ಜೈಪುರದಲ್ಲೂ ಸ್ವಲ್ಪ ಮಳೆ ಬೀಳಬಹುದು. ಆದಾಗ್ಯೂ, ಅದರ ನಂತರ ಹವಾಮಾನವು ಶುಷ್ಕವಾಗಿರುತ್ತದೆ.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

The mood of the weather will change again from March 4

ಕೊರೊನಾ ಆರಂಭದಲ್ಲಿ ದೆಹಲಿಯ ಗಾಳಿ ಗುಣಮಟ್ಟ ಸುಧಾರಣೆ ಕಂಡಿತ್ತು. ಕೊರೊನಾ ವೈರಸ್‌ ಭೀತಿಯಿಂದ 2020ರಲ್ಲಿ ಭಾರತ ಸೇರಿ ಜಗತ್ತಿನ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಇದರ ಪರಿಣಾಮ ರಾಷ್ಟ್ರದ ಸುಮಾರು 90 ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನು ಸ್ವಾಗತಿಸಿದ ಪರಿಸರವಾದಿಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದ್ದು, ಪರಿಸರಕ್ಕೆ ಹಾನಿಮಾಡುವ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲು ಆಗ್ರಹಿಸಿದ್ದರು. ಭಾರತದಲ್ಲಿ 2020ರಲ್ಲಿ ಏಪ್ರಿಲ್‌ 14ರವರೆಗೆ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಲಾಗಿತ್ತು. ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಲಾಗಿತ್ತು. ಇದರಿಂದ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ವಾಹನ ಸಂಚಾರ ಗಮನಾರ್ಹ ಪ್ರಮಾಣದಲ್ಲಿ ಕುಸಿದು ವಾತಾವರಣದಲ್ಲಿನ ಮಾಲಿನ್ಯಕಾರಕ ಸೂಕ್ಷ್ಮ ಕಣದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ದೆಹಲಿಯಲ್ಲಿಈ ಪ್ರಮಾಣ ಶೇ.30ರಷ್ಟಕ್ಕೆ ಕುಸಿದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+