ಆಮ್ಲಜನಕ ಹಾಗೂ ಅಗತ್ಯ ಔಷಧಗಳ ಪೂರೈಕೆಗೆ ಕಾರ್ಯಪಡೆ ರಚಿಸಿದ ಸುಪ್ರೀಂ

ನವದೆಹಲಿ, ಮೇ 08: ದೇಶಾದ್ಯಂತ ಆಮ್ಲಜನಕ ಪೂರೈಕೆ ಹಾಗೂ ಅಗತ್ಯ ಔಷಧಗಳ ಲಭ್ಯತೆ ಕುರಿತಂತೆ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂಕೋರ್ಟ್ ರಚಿಸಿದೆ.

ದೇಶದ ಪ್ರಖ್ಯಾತ ವೈದ್ಯರು, ಕೇಂದ್ರ ಸಂಪುಟ ಕಾರ್ಯದರ್ಶಿ ಸೇರಿ ಇತರೆ ಸದಸ್ಯರ ಕಾರ್ಯಪಡೆಯನ್ನು ಸುಪ್ರೀಂಕೋರ್ಟ್ ಇಂದು ರಚಿಸಿದೆ.

ಈ ರಾಷ್ಟ್ರೀಯ ಕಾರ್ಯಪಡೆಯು ದೇಶದ ವಿಭಿನ್ನ ರಾಜ್ಯಗಳಿಗೆ ಆಮ್ಲಜನಕ ಪೂರೈಸುವುದು, ಹಾಗೂ ಅಗತ್ಯ ಔಷಧಿಗಳ ಲಭ್ಯತೆಯನ್ನು ಪರಾಮರ್ಶಿಸುವ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

Supreme court

ಹಾಗೆಯೇ ಭವಿಷ್ಯದ ಸವಾಲುಗಳನ್ನು ಎದುರಿಸಬೇಕಾದ ತುರ್ತು ಯೋಜನೆಗಳನ್ನು ಈ ಕಾರ್ಯಪಡೆ ರೂಪಿಸಲಿದೆ.ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಎಂಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ನೀಡಿದೆ.

Recommended Video

      Covid 19 ಪರಿಸ್ಥಿತಿಯಲ್ಲು Tax ಬರೇ ಎಳಿತಿರೋ Nirmala Sitharaman | Oneindia Kannada

      ಈ ರಾಷ್ಟ್ರೀಯ ಕಾರ್ಯಪಡೆಯಲ್ಲಿ ಕರ್ನಾಟಕದ ಖ್ಯಾತ ವೈದ್ಯ ಡಾ. ದೇವಿಪ್ರಸಾದ್ ಶೆಟ್ಟಿ ಕೂಡ ಇದ್ದಾರೆ. ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಸರ್ಕಾರಕ್ಕೆ ಈ ಕಾರ್ಯಪಡೆಯಿಂದ ನೆರವಾಗಲಿದೆ ಎನ್ನುವುದು ನ್ಯಾಯಾಲಯದ ಅಭಿಪ್ರಾಯವಾಗಿದೆ. ಹಾಗೆಯೇ ಈ ಕಾರ್ಯಪಡೆಯವ ವೈಜ್ಞಾನಿಕ ಸಲಹೆಗಳು ಸರ್ಕಾರಕ್ಕೆ ನೆರವಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
      -ಡಾ. ಭಾಬತೋಶ್ ಬಿಸ್ವಾಸ್
      -ಡಾ. ದೇವೇಂದ್ರ ಸಿಂಗ್ ರಾಣಾ
      -ಡಾ. ದೇವಿ ಪ್ರಸಾದ್ ಶೆಟ್ಟಿ
      -ಡಾ.ಗಗನ್ ದೀಪ್ ಕಾಂಗ್
      -ಡಾ. ಜೆವಿ ಪೀಟರ್
      -ಡಾ. ನರೇಶ್ ತ್ರೆಹನ್
      -ಡಾ.ರಾಹುಲ್ ಪಂಡಿತ್
      -ಡಾ. ಸೌಮಿತ್ರ ರಾವತ್
      -ಡಾ.ಶಿವ್ ಕುಮಾರ್ ಸರಿನ್
      -ಡಾ. ಜರೀರ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+