ವಿವರಣೆ: ರವಿಶಂಕರ್ ಗುರೂಜಿ ಯಮುನಾ ನದಿ ತೀರ ವಿವಾದ

ನವದೆಹಲಿ, ಮಾರ್ಚ್ 09: ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರು ಮಾರ್ಚ್ 11ರಂದು ಹಮ್ಮಿಕೊಂಡಿರುವ ವಿಶ್ವ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ನೂರೆಂಟು ಸಮಸ್ಯೆಗಳು ಎದುರಾಗಿವೆ.

ವಿವಾದ ಕಾವು ಹೆಚ್ಚಾಗುತ್ತಿದ್ದಂತೆ ಈ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂದು ರಾಷ್ಟ್ರಪತಿಗಳು ಹಾಗೂ ಪ್ರಧಾನಿ ಸಚಿವಾಲಯ ಪ್ರಕಟಿಸಿದೆ. ಯಮುನಾ ನದಿ ಮೇಲೆ ಸೇತುವೆ, ಪರಿಸರ ಕಲುಷಿತಗೊಂಡಿರುವುದು, ಸೈನಿಕರ ಬಳಕೆ ಹೀಗೆ ನಾನಾ ವಿವಾದಗಳ ಕೇಂದ್ರ ಬಿಂದುವಾಗಿರುವ ಈ ಕಾರ್ಯಕ್ರಮದ ಬಗ್ಗೆ ವಿವರಣೆ ಇಲ್ಲಿದೆ:

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಾರ್ಚ್ 11ರಂದು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಹಾಗೂ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಇಬ್ಬರು ಕೂಡಾ ಕಾರ್ಯಕ್ರಮಕ್ಕೆ ಗೈರು ಹಾಜರಾಗುವ ಸಾಧ್ಯತೆ ಇದೆ.

Sri Sri's Art of Living row

ಏನಿದು ಕಾರ್ಯಕ್ರಮ:
* ಆರ್ಟ್ ಆಫ್ ಲಿವಿಂಗ್ ಸ್ಥಾಪನೆಯಾಗಿ 35 ವರ್ಷಗಳಾಗಿದ್ದು, ವಾರ್ಷಿಕೋತ್ಸವ ಸಮಾರಂಭವನ್ನು ಯಮುನಾ ನದಿ ತೀರದಲ್ಲಿ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ.
* ಸುಮಾರು 35 ಲಕ್ಷಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
* ಯೋಗ, ಧಾನ್ಯ, ಸುದರ್ಶನ ಕ್ರಿಯೆ, ಉಪನ್ಯಾಸ, ಶಾಂತಿ ಪ್ರಾರ್ಥನೆ, ದೇಶ, ವಿದೇಶದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
* ಈ ಕಾರ್ಯಕ್ರಮವಾಗಿ ತಾತ್ಕಾಲಿಕವಾಗಿ ತೂಗು ಸೇತುವೆ ನಿರ್ಮಿಸಲಾಗಿದೆ. ಇದಕ್ಕೆ ಭಾರತೀಯ ಸೇನೆಯ ಯೋಧರನ್ನು ಬಳಸಲಾಗಿದೆ.

ವಿವಾದ ಏನು?:
* ಕಾರ್ಯಕ್ರಮದ ಆಯೋಜನೆಯಿಂದ ಯಮುನಾ ನದಿ ಕಲುಷಿತಗೊಂಡಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
* ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಈ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ಬಂದಿರುವ ದೂರಿನ ವಿಚಾರಣೆ ಜಾರಿಯಲ್ಲಿದೆ.
* ನೀರಿನ ಅಭಾವ ಎದುರಿಸುತ್ತಿರುವ ಪೂರ್ವ ದೆಹಲಿ ಭಾಗದಲ್ಲಿ ಯಮುನಾ ನದಿಯ ನೀರು ಆಸರೆಯಾಗಿದ್ದು, ಪರಿಸರ, ನೀರು ಮಾಲಿನ್ಯಗೊಂಡು ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಲಿದೆ.

ಕಾರ್ಯಕ್ರಮ ಹಾಗೂ ವಿವಾದದ ಬಗ್ಗೆ ರವಿಶಂಕರ್ ಗುರೂಜಿ ಟ್ವೀಟ್:


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+