ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಯಶಸ್ವಿ
ನವದೆಹಲಿ, ಆಗಸ್ಟ್ 27: ದೇಶದ ಮೊದಲ ಜೈವಿಕ ಇಂಧನ ಚಾಲಿತ ವಿಮಾನವು ಸೋಮವಾರದಂದು ಯಶಸ್ವಿ ಹಾರಾಟ ನಡೆಸಿದೆ.
ಪರ್ಯಾಯ ಇಂಧನವನ್ನು ಬಳಸಿದ ಸ್ಪೈಸ್ಜೆಟ್ ಬಾಂಬಾರ್ಡರ್ ಕ್ಯೂ-400 ವಿಮಾನವು ಡೆಹ್ರಾಡೂನ್ನಿಂದ ದೆಹಲಿಗೆ ಹಾರಾಟ ನಡೆಸಿ, ಯಶಸ್ವಿ ಲ್ಯಾಂಡ್ ಮಾಡಿದೆ. ಕ್ಯೂ400 ಏರ್ ಕ್ರಾಫ್ಟ್ 78 ಸೀಟುಗಳ ವಿಮಾನವಾಗಿದೆ.
ಅಮೆರಿಕ ಮತ್ತು ಆಸ್ಟ್ರೇಲಿಯಾಗಳಂತಹ ಕೆಲವು ಮುಂದುವರಿದ ದೇಶಗಳು ಈಗಾಗಲೇ ಜೈವಿಕ ಇಂಧನ ಬಳಸಿದ ವಾಣಿಜ್ಯ ವಿಮಾನಗಳ ಹಾರಾಟಗಳ ಯಶಸ್ವಿ ಪ್ರಯೋಗ ನಡೆಸಿವೆ. ಇಂತಹ ಪ್ರಯತ್ನ ನಡೆಸುತ್ತಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವೂ ಒಂದಾಗಿದೆ.
ಸ್ಪೈಸ್ ಜೆಟ್ನ ವಿಮಾನವು ಜೈವಿಕ ಇಂಧನ ಬಳಸಿ ಡೆಹ್ರಾಡೂನ್ ನಗರದ ಮೇಲೆ ಹತ್ತು ನಿಮಿಷ ಹಾರಾಟದ ಪರೀಕ್ಷೆ ನಡೆಸಿ ನಿಲ್ದಾಣಕ್ಕೆ ಮರಳಿತು. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಹೀಗಾಗಿ, ವಿಮಾನಯಾನವನ್ನು ದೆಹಲಿಯತ್ತ ತಿರುಗಿಸಲಾಯಿತು.

ಡೆಹ್ರಾಡೂನ್ ನಿಂದ ದೆಹಲಿಯತ್ತ ಪಯಣ
ಸ್ಪೈಸ್ ಜೆಟ್ನ ವಿಮಾನವು ಜೈವಿಕ ಇಂಧನ ಬಳಸಿ ಡೆಹರಾಡೂನ್ ನಗರದ ಮೇಲೆ ಹತ್ತು ನಿಮಿಷ ಹಾರಾಟದ ಪರೀಕ್ಷೆ ನಡೆಸಿ ನಿಲ್ದಾಣಕ್ಕೆ ಮರಳಲಿದೆ. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬರದಿದ್ದರೆ ವಿಮಾನವು ದೆಹಲಿಯತ್ತ ಪ್ರಯಾಣ ಬೆಳೆಸಲಿದೆ.

ಮೊದಲ ಯಾನದ ಯಶಸ್ಸಿನ ಸಂಭ್ರಮಾಚರಣೆಗೆ ಸಾಕ್ಷಿ
ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು, ರಸ್ತೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ್ ವರ್ಧನ್ ಹಾಗೂ ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮೊದಲ ಯಾನದ ಯಶಸ್ಸಿನ ಸಂಭ್ರಮಾಚರಣೆಗೆ ಸಾಕ್ಷಿಯಾದರು.

ಜೈವಿಕ ಇಂಧನ ಬಳಕೆ
ವಿಮಾನವು ಶೇ 75ರಷ್ಟು ಏರ್ ಟರ್ಬೈನ್ ಇಂಧನ (ಎಟಿಎಫ್), ಶೇ25ರಷ್ಟು ಜೈವಿಕ ಇಂಧನ ಹೊಂದಿದೆ. ಡೆಹ್ರಾಡೋನ್ ನ ಸಿಎಸ್ ಐಆರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಪೆಟ್ರೋಲಿಯಂ ಸಂಸ್ಥೆ, ಜತ್ರೋಪಾ ಬೆಳೆಯಿಂದ ಉತ್ಪಾದಿಸಿರುವ ಇಂಧನವನ್ನು ಬಳಸಲಾಗಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.

ಇಂಧನದ ಮೇಲೆ ಅವಲಂಬನೆ
ಹಾಲಿ ಬಳಕೆಯಲ್ಲಿರುವ ಇಂಧನದ ಮೇಲೆ ಅವಲಂಬನೆಯನ್ನು ಶೇ 50ರಷ್ಟು ಕಡಿಮೆ ಮಾಡಲಿದೆ. ಇದರಿಂದ ಪ್ರಯಾಣ ದರವು ತಗ್ಗಲಿದೆ ಎಂದು ಸ್ಪೈಸ್ಟ್ ಜೆಟ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಹೇಳಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications