ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮೇಲೆ ವಿಮಾನದಲ್ಲೂ ಸಿಗಲಿದೆ ವೈ-ಫೈ!
ನವದೆಹಲಿ, ಮಾರ್ಚ್ 03: ವಿಮಾನ ಪ್ರಯಾಣಿಕರಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಇನ್ಮೇಲೆ ವಿಮಾನದ ಒಳಗೆ ವೈ-ಫೈ ಸೌಲಭ್ಯ ಸಿಗಲಿದೆ. ಭಾರತದಲ್ಲಿ ವಿಮಾನ ಪ್ರಯಾಣಿಕರಿಗೆ ಇನ್-ಫ್ಲೈಟ್ ವೈ-ಫೈ ಇಂಟರ್ನೆಟ್ ಸೌಲಭ್ಯ ನೀಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಮ್ಮತಿ ನೀಡಿದೆ.
ವಿಮಾನ ಏರಿದಾಗ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಅಥವಾ ಫ್ಲೈಟ್ ಮೋಡ್ ಆನ್ ಮಾಡುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗುತ್ತಿತ್ತು. ಆದ್ರೀಗ, ಭಾರತದಲ್ಲಿ ಹಾರಾಡುವ ಸರ್ಕಾರಿ ಸ್ವಾಮ್ಯದ ಏರ್ ಲೈನ್ಸ್ ಗಳಿಗೆ ಈ ನಿರ್ಬಂಧ ತೆರವು ಮಾಡಲಾಗಿದ್ದು, ಪ್ರಯಾಣಿಕರಿಗೆ ಅಂತರ್ಜಾಲ ಸೇವೆ ನೀಡಲು ಒಪ್ಪಿಗೆ ಸೂಚಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಮುಂದೆ ಓದಿರಿ...

ಅಧಿಸೂಚನೆಯಲ್ಲಿ ಏನಿದೆ.?
ವಿಮಾನದಲ್ಲಿ ಪ್ರಯಾಣ ಆರಂಭಿಸಿದಾಗ ಪ್ರಯಾಣಿಕರು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಈ-ರೀಡರ್, ಪಾಯಿಂಟ್ ಆಫ್ ಸೇಲ್ ಡಿವೈಸ್ ಗಳ ಮೂಲಕ ವೈ-ಫೈ ಸೇವೆ ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ ಫ್ಲೈಟ್ ವೈ-ಫೈ ನೀಡಿದ್ದ ಟಾಟಾ ಗ್ರೂಪ್
ಕಳೆದ ಫೆಬ್ರವರಿಯಲ್ಲಿ ಪಾನಸೋನಿಕ್ ಏವಿಯೋನಿಕ್ಸ್ ಸಹಭಾಗಿತ್ವದೊಂದಿಗೆ ಟಾಟಾ ಗ್ರೂಪ್ ನ ನೆಲ್ಕೋ ಇನ್-ಫ್ಲೈಟ್ ವೈ-ಫೈ ಸೇವೆಯನ್ನು ಭಾರತದಲ್ಲಿ ಆರಂಭಿಸಿತ್ತು.

ಇಲ್ಲಿಯವರೆಗೂ ಇದ್ದ ನಿಯಮವೇನು.?
ಈಗಾಗಲೇ ಏರ್ ಫ್ರಾನ್ಸ್, ಬ್ರಿಟಿಷ್ ಏರ್ ವೇಸ್, ಈಜಿಪ್ಟ್ ಏರ್, ಎಮಿರೇಟ್ಸ್, ಮಲೇಶಿಯಾ ಏರ್ ಲೈನ್ಸ್, ಕತಾರ್ ಏರ್ ವೇಸ್ ಸೇರಿದಂತೆ ವಿಶ್ವದ ಹಲವು ಏರ್ ಲೈನ್ಸ್ ಗಳು ಪ್ರಯಾಣಿಕರಿಗೆ ಇನ್-ಫ್ಲೈಟ್ ವೈ-ಫೈ ಸೌಲಭ್ಯ ನೀಡುತ್ತಿವೆ. ಆದರೆ ಅವು ಭಾರತದ ವಾಯುವಲಯ ಪ್ರವೇಶಿಸಿದ ಕೂಡಲೆ ವೈ-ಫೈ ಸೇವೆ ಕಡಿತಗೊಳಿಸಬೇಕು ಎಂಬ ನಿಯಮ ಈವರೆಗೂ ಜಾರಿಯಲ್ಲಿತ್ತು.

ಕರೆ ಮಾಡುವ ಅವಕಾಶವೂ ಇದೆ
ಇನ್-ಫ್ಲೈಟ್ ಕನೆಕ್ಟಿವಿಟಿ (IFC) ಮೂಲಕ ವಿಮಾನದಲ್ಲಿ ಪ್ರಯಾಣಿಸುವಾಗ ಕರೆ ಮಾಡುವ ಮತ್ತು ಅಂತರ್ಜಾಲ ಸೇವೆ ಬಳಸುವ ಅವಕಾಶವಿರುತ್ತದೆ. ಭಾರತೀಯ ವಾಯುವಲಯದಲ್ಲಿ ವೈ-ಫೈ ಸೌಲಭ್ಯ ಒದಗಿಸಿರುವುದರಿಂದ ಸ್ಥಳೀಯ ಏರ್ ಲೈನ್ಸ್ ಗೆ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications