ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ
ನವದೆಹಲಿ, ಜೂ. 4 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಗೈರು ಹಾಜರಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಮೋದಿ ಅವರ ಜೊತೆಗಿನ ಭೇಟಿಯ ವೇಳೆ ಸಿಎಂ ಎರಡು ಪ್ರಮುಖ ವಿಚಾರಗಳ ಕುರಿತಂತೆ ಮನವಿ ಸಲ್ಲಿಸಿದ್ದಾರೆ.
ಬುಧವಾರ
ಸಿದ್ದರಾಮಯ್ಯ
ನರೇಂದ್ರ
ಮೋದಿ
ಅವರನ್ನು
ರೇಸ್
ಕೋರ್ಸ್
ರಸ್ತೆಯ
ನಿವಾಸದಲ್ಲಿ
ಭೇಟಿ
ಮಾಡಿದರು.
ಮೋದಿ
ಪ್ರಧಾನಿಯಾದ
ಬಳಿಕ
ಮೊದಲ
ಬಾರಿಗೆ
ಭೇಟಿ
ಮಾಡಿದ
ಸಿದ್ದರಾಮಯ್ಯ
ಮೋದಿ
ಅವರಿಗೆ
ಶಾಲು
ಹೊದಿಸಿ
ಅಭಿನಂದನೆ
ಸಲ್ಲಿಸಿದರು.
ಭೇಟಿಯ
ವೇಳೆ
ಮಾತೃಭಾಷೆ
ವಿವಾದ
ಮತ್ತು
ಕಾವೇರಿ
ನದಿ
ನೀರು
ಹಂಚಿಕೆಯ
ಸಿಎಂ
ಮೋದಿ
ಅವರೊಂದಿಗೆ
ಮಾತುಕತೆ
ನಡೆಸಿದ್ದಾರೆ.
[ಕಾವೇರಿ
:
ಕರೆಂಟು
ಕೊಟ್ರೆ
ಎನ್ಡಿಎಗೆ
'ಜಯಾ'
ಕರದಂಟು]
ಪಿಟಿಐ
ಚಿತ್ರ
ಪ್ರಧಾನಿ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಭಾಷಾ ಮಾಧ್ಯಮದ ವಿವಾದ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಪ್ರಧಾನಿಯೊಂದಿಗೆ ವಿಷಯ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು. ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು. [ಏನಿದು ಭಾಷಾ ಮಾಧ್ಯಮ ತೀರ್ಪು]
ಬಹುಭಾಷಾ ರಾಷ್ಟ್ರವಾದ ಭಾರತದಲ್ಲಿ ಪ್ರಾದೇಶಿಕ ಭಾಷೆಗಳು ಉಳಿಯಬೇಕು. ಆದ್ದರಿಂದ ಈಗಾಗಲೇ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಮಾತೃಭಾಷೆ ವಿಚಾರದಲ್ಲಿ ಕರ್ನಾಟಕವನ್ನು ಬೆಂಬಲಿಸುವಂತೆ ಪತ್ರ ಬರೆದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಎರಡು ವಿಚಾರಗಳ ಕುರಿತಾಗಿ ಗಮನ ಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಸದಾನಂದ ಗೌಡ ಭೇಟಿ : ಬುಧವಾರ ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಬೆಳಗ್ಗೆ ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರನ್ನು ಭೇಟಿ ಮಾಡಿದ್ದರು. ಗುರುವಾರ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. [ಸದಾನಂದ ಗೌಡ, ಸಿದ್ದರಾಮಯ್ಯ ಭೇಟಿ]