'ಪಾಕಿಸ್ತಾನ ಐಸಿಯುನಲ್ಲಿರುವಾಗ, ಇಮ್ರಾನ್ ಖಾನ್ಗೆ ಕಾಶ್ಮೀರ ಚಿಂತೆ ಯಾಕೆ?'
ನವದೆಹಲಿ, ಆಗಸ್ಟ್ 19: ಪಾಕಿಸ್ತಾನವೇ ಐಸಿಯುನಲ್ಲಿರುವಾಗ ಇಮ್ರಾನ್ ಖಾನ್ಗೆ ಕಾಶ್ಮೀರದ ಬಗ್ಗೆ ಯೋಚನೆ ಯಾಕೆ ಎಂದು ಶಿವಸೇನಾ ಪ್ರಶ್ನಿಸಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಹಾಗೂ ಅದರ ಕುರಿತು ಪಾಕಿಸ್ತಾನದ ಪ್ರತಿಕ್ರಿಯೆ ಟೀಕಿಸಿದ ಶಿವಸೇನಾ ಪಾಕಿಸ್ತಾನವು ಈಗಾಗಲೇ ತನ್ನ ದೇಶೀಯ ಸನ್ನಿವೇಶಗಳಿಂದ ತೀವ್ರ ನಿಗಾ ಘಟಕದಲ್ಲಿದೆ.
ಹೀಗಿರುವಾಗ ಇಮ್ರಾನ್ ಖಾನ್ ಕಾಶ್ಮೀರದ ಬಗ್ಗೆ ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದೆ. ಇಮ್ರಾನ್ ಖಾನ್ ಮೊದಲು ಪಾಕಿಸ್ತಾನದಲ್ಲಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಳಿಕ ಯೋಚಿಸಲಿ ಎಂದು ಹೇಳಿದೆ.

ಬಹುತೇಕ ರಾಷ್ಟ್ರಗಳಿಂದ ಭಾರತಕ್ಕೆ ಬೆಂಬಲ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 370 ನೇ ವಿಧಿಯನ್ನು ರದ್ದುಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಯುಎನ್ಎಸ್ಸಿಯ ಹೆಚ್ಚಿನ ಸದಸ್ಯ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿರುವುದನ್ನು ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಬಡತನ, ಹಣದುಬ್ಬರವನ್ನು ತಗ್ಗಿಸಲಿ
ವಿಶ್ವದಾದ್ಯಂತ ಕಾಶ್ಮೀರ ಸಮಸ್ಯೆಗಳನ್ನು ಹೆಚ್ಚಿಸುವ ಬದಲು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಬಡತನ, ಅರಾಜಕತೆ ಮತ್ತು ಕಳಪೆ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಬೇಕೆಂದು ಸಂಪಾದಕೀಯವು ಸಲಹೆ ನೀಡಿದೆ.
ಸಂಪಾದಕೀಯದ ಪ್ರಕಾರ, ಪಾಕಿಸ್ತಾನದಂತಹ ದೇಶದ ಹಿಂದೆ ಮೆರವಣಿಗೆ ಮಾಡುವ ಮೂಲಕ ಚೀನಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುಜುಗರಕ್ಕೊಳಗಾಯಿತು.

ಪಾಕಿಸ್ತಾನದಿಂದ ಭಾರತಕ್ಕೆ ಬರುವ ರೈಲುಗಳು ರದ್ದು
ಪಾಕಿಸ್ತಾನವು ಭಾರತಕ್ಕೆ ಬರುತ್ತಿದ್ದ ಎರಡು ರೈಲುಗಳನ್ನು ತಡೆ ಹಿಡಿದಿದೆ. ಜೊತೆಗೆ ಪಾಕಿಸ್ತಾನದ ಏರೋಸ್ಪೇಸ್ನಲ್ಲಿ ಭಾರತದ ವಿಮಾನ ಹಾರಾಟವನ್ನು ನಿಷೇಧಿಸಿದೆ.
ಪಾಕಿಸ್ತಾನವು ಕಾಶ್ಮೀರದ ವಿಷಯದಲ್ಲಿ ಸ್ವಯಂ ಹಾನಿ ಮಾಡುವ ಅಭ್ಯಾಸವನ್ನು ಹೊಂದಿದೆ ಮತ್ತು ಯುಎನ್ಎಸ್ಸಿಯಲ್ಲಿ ಅದರ ವಿನಂತಿಯನ್ನು ರದ್ದುಗೊಳಿಸಿದರೂ, ದೇಶವು ಭಯಭೀತರಾಗುತ್ತಿದೆ ಮತ್ತು ದುಃಖಿಸುತ್ತಿದೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ. ಪಾಕಿಸ್ತಾನದ ಬೆದರಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆ.

ಭಾರತದ ನಡೆಯನ್ನು ತಡೆಯಲು ಪಾಕಿಸ್ತಾನದ ವಿಫಲ ಪ್ರಯತ್ನ
ಯುಎಸ್ ನಿಂದ ಹೊಡೆತ ತಿಂದಿದ್ದರೂ, ಚೀನಾ ಒದಗಿಸಿದ ಆಮ್ಲಜನಕ ದಿಂದಾಗಿ ಪಾಕಿಸ್ತಾನವು ಕಂಬದಿಂದ ಪೋಸ್ಟ್ಗೆ ಓಡುತ್ತಲೇ ಇದೆ ಎಂದು ಶಿವಸೇನೆ ವ್ಯಂಗ್ಯ ಮಾಡಿದೆ.
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನಡೆಯನ್ನು ತಡೆಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್ಎಸ್ಸಿ) ವಿಫಲ ಪ್ರಯತ್ನ ಮಾಡಿದ್ದಕ್ಕಾಗಿ ಪಾಕಿಸ್ತಾನ ಮತ್ತು ಚೀನಾ ಎರಡನ್ನೂ ಶಿವಸೇನಾ ಸಂಪಾದಕೀಯವು ಅಪಹಾಸ್ಯ ಮಾಡಿದೆ.












Click it and Unblock the Notifications