ಲೈಂಗಿಕ ಹಗರಣ: ತೆಹಲ್ಕಾ ಸಂಪಾದಕ ತೇಜಪಾಲ್ ಮನೆಗೆ

ಖ್ಯಾತ ಪತ್ರಕರ್ತ, ತೆಹಲ್ಕಾ ಸಹ ಸಂಸ್ಥಾಪಕ, ಸಂಪಾದಕ ತರುಣ್ ತೇಜಪಾಲ್ ತಮ್ಮ ಮಹಿಳಾ ಸಹೋದ್ಯೋಗಿ ಜತೆ ತಾವು ಅಸಭ್ಯವಾಗಿ ನಡೆದುಕೊಂಡಿರುವುದನ್ನು ಒಪ್ಪಿಕೊಂಡು ನೈತಿಕತೆ ಮೇಲೆ 6 ತಿಂಗಳ ಕಾಲ ಕೆಲಸ ಬಿಟ್ಟು ಮನೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಗಮನಾರ್ಹವೆಂದರೆ, ಘಟನೆ ಆಂತರಿಕವಾಗಿ ನಡೆದಿರುವುದು. ಈಗಾಗಲೇ ಬಾಧಿತ ಮಹಿಳೆಯ ಕ್ಷಮಾಪಣೆ ಕೋರಿದ್ದು, ಇದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಎಂದು ತೆಹಲ್ಕಾದ ವ್ಯವಸ್ಥಾಪಕ ನಿರ್ದೇಶಕಿ ಶೋಮಾ ಚೌಧರಿ ಅವರಿಂದ ಪ್ರಕರಣವನ್ನು ಮುಚ್ಚಿಹಾಕುವ ಯತ್ನವೂ ನಡೆದಿತ್ತು.
ಆದರೆ ಘಟನೆಯಿಂದ ತೀವ್ರವಾಗಿ ನೊಂದ Editor-in-Chief, ಪ್ರಕರಣದ ಆರೋಪಿ ತರುಣ್ ತೇಜಪಾಲ್, ನೈತಿಕತೆ ಹೊತ್ತು ಸೇವೆಯಿಣದ ದೂರ ಸರಿದಿದ್ದಾರೆ.
'ಅದು (ಲೈಂಗಿಕ ಕಿರುಕುಳ) ನಡೆಯಬಾರದ ಘಟನೆಯಾಗಿತ್ತು. ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾವು ನಂಬಿಕೊಂಡು ಬಂದಿರುವ ಮೌಲ್ಯಗಳಿಗೆ ವಿರುದ್ಧವಾದ ವರ್ತನೆ ಇದಾಗಿದೆ. ಆದ್ದರಿಂದ ನಾನೀಗಾಗಲೇ ಬೇಷರತ್ ಕ್ಷಮೆಯಾಚಿಸಿರುವೆ. ನನ್ನ ತಪ್ಪಿನ ಅರಿವಾಗಿದೆ. ಹಾಗಾಗಿ 6 ತಿಂಗಳ ಕಾಲ ಕಚೇರಿಗೆ ಬರುವುದಿಲ್ಲ' ಎಂಬ ಒಕ್ಕಣೆಯ ಪತ್ರವನ್ನು ಆರೋಪಿ ತರುಣ್, ಮ್ಯಾನೇಜಿಂಗ್ ಎಡಿಟರ್ ಶೋಮಾಗೆ ಇಮೇಲ್ ಮಾಡಿ ತಿಳಿಸಿದ್ದಾರೆ.
ಬಾಧಿತ ಮಹಿಳೆ ಆರೋಪಿ ತರುಣ್ ತೇಜಪಾಲ್ ಅವರ ಕ್ಷಮಾಪಣೆಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಪ್ರಕರಣ ಮುಕ್ತಾಯಗೊಂಡಿದೆ ಎಂದು ಶೋಮಾ ಹೇಳಿದ್ದಾರೆ. 'ಆತನದು (ಆರೋಪಿ ತರುಣ್ ತೇಜಪಾಲ್) ಲೈಂಗಿಕ ದುರ್ವತನೆ. ನಾನು ಆತನ ಮಗಳಿಗೆ ಸಮಾನವಾಗಿದ್ದೇನೆ. ಆದರೂ ಆತ ಸತತವಾಗಿ ಸುಮಾರು ಕಾಲದಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅದೆಲ್ಲಾ ನನ್ನ ಜತೆ ಮಾಡಬೇಡಿ ಎಂದು ಎಷ್ಟೋ ಬಾರಿ ಅಂಗಾಲಾಚಿದ್ದೆ. ಆದರೂ ಅದು ಆತನ ಕಿವಿಗೆ ಬೀಳಲಿಲ್ಲ. ನಿರಂತರವಾಗಿ ನಡೆದೇ ಇತ್ತು' ಎಂದು ಬಾಧಿತ ಪತ್ರಕರ್ತೆ NDTVಗೆ ತಿಳಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications