Get Updates
Get notified of breaking news, exclusive insights, and must-see stories!

70 ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮದ ಸಮಾರೋಪ

Recommended Video

      70th Republic Day

      70 ನೇ ಗಣರಾಜ್ಯೋತ್ಸವವನ್ನು ರಾಜಧಾನಿ ದೆಹಲಿಯ ರಾಜಪಥದಲ್ಲಿ ಸಹಸ್ರಾರು ಜನರು ಕಣ್ತುಂಬಿಕೊಂಡರು.

      ಅದರಲ್ಲೂ 2019 ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಗಣರಾಜ್ಯೋತ್ಸವ ಇದಾಗಿರುವುದರಿಂದ ಮತ್ತಷ್ಟು ಕುತೂಹಲ ಸೃಷ್ಟಿಸಿತ್ತು.

      ಭಾರತೀಯ ಸೇನೆಯ ಪರಾಕ್ರಮಕ್ಕೆ, ವಾಯಸೇನೆಯ ಶಕ್ತಿಗೆ ನೆರೆದಿದ್ದ ಜನ ದಂಗಾದರು. ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆಯ ನಿಮಿತ್ತ ದೇಡ ಹಲವು ರಾಜ್ಯಗಳು ಸ್ತಬ್ದ ಚಿತ್ರ ಮೆರವಣಿಗೆ ಮಾಡಿದ್ದು ಗಮನ ಸೆಳೆಯಿತು.

      ಕರ್ನಾಟಕದಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಭಾಗವಹಿಸಿದ್ದ ವೇದಿಕೆಯನ್ನು ಸ್ತಬ್ದ ಚಿತ್ರದಲ್ಲಿ ತೋರಿಸಲಾಯಿತು. ಹಿನ್ನೆಲೆಯಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡು ಮೊಳಗಿ ಹೆಮ್ಮೆ ಮೂಡಿಸಿತು.

      Republic day 2019: LIVE updates from Red fort procession

      ಬೆಳಿಗ್ಗೆ 9.50 ಕ್ಕೆ ವಿಜಯ ಚೌಕ್ ನಿಂದ ರಾಜಪಥದ ಮೂಲಕ ಸಾಗಿ ತಿಲಕ್ ಮಾರ್ಗ್, ಭದೂರ್ ಶಾ ಜಾಫರ್ ಮಾರ್ಗ, ನೇತಾಜಿ ಮಾರ್ಗದ ಗುಂಟ ಮೆರವಣಿಗೆ ಸಾಗಿತ್ತು.

      ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಇಂದಿನ ಗಣರಾಜ್ಯೋತ್ಸವ ಪರೇಡ್ ನ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

      Jan 26, 2019, 12:10 pm IST

      70 ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮದ ಸಮಾರೋಪ
      Jan 26, 2019, 11:45 am IST

      ರಾಜಪಥಕ್ಕೆ ಆಗಮಿಸಿದ ಜನರಿಗೆ ಕೈಬೀಸಿ ಕಾಲ್ನಡಿಗೆಯಲ್ಲೇ ಸಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ
      Jan 26, 2019, 11:37 am IST

      ಸಮಾರೋಪಗೊಂಡ 70ನೇ ಗಣರಾಜ್ಯದಿನ. ರಾಷ್ಟ್ರಪತಿಭವನಕ್ಕೆ ವಾಪಸ್ ಹೊರಟ ರಾಷ್ಟ್ರೊತಿ ರಾಮನಾಥ್ ಕೋವಿಂದ್
      Jan 26, 2019, 11:17 am IST

      ಬೈಕಿನಲ್ಲಿ ವಿವಿಧ ಸಾಹಸ ಪ್ರದರ್ಶನ ಮಾಡುತ್ತಿರುವ ಭಾರತೀಯ ಸೇನೆ
      Jan 26, 2019, 11:06 am IST

      ಶೌರ್ಯ ಪ್ರಶಸ್ತಿ ಸ್ವೀಕರಿಸಿದ ಹಲವು ವಿದ್ಯಾರ್ಥಿಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡರು.
      Jan 26, 2019, 11:05 am IST

      ಬೆಳಗಾವಿಯಲ್ಲಿ ಗಾಂಧೀಜಿ ಭಾಗವಹಿಸಿದ್ದ ಏಕೈಕ ಅಧಿವೇಶನದಲ್ಲಿ ಅವರು ಭಾಷಣ ಮಾಡುವುದಕ್ಕೆಂದು ನಿರ್ಮಿಸಿದ್ದ ವೇದಿಕೆಯನ್ನೇ ಮತ್ತೆ ಕರ್ನಾಟಕದ ಸ್ತಬ್ದಚಿತ್ರವನ್ನಾಗಿ ನಿರ್ಮಿಸಲಾಗಿತ್ತು.
      Jan 26, 2019, 11:02 am IST

      ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ದೇಶದ ವಿವಿಧ ಕ್ಷೇತ್ರಗಳಿಗೆ ಸಿಗುತ್ತಿರುವ ಕೊಡುಗೆಗಳನ್ನು ಪ್ರತಿನಿಧಿಸುವ ಸ್ತಬ್ದಚಿತ್ರಗಳ ಪ್ರದರ್ಶನ ನಡೆಯುತ್ತಿದೆ.
      Jan 26, 2019, 10:55 am IST

      ಗಣರಾಜ್ಯ ದಿನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೂ ಭಾಗಿ
      Jan 26, 2019, 10:54 am IST

      ಹಿನ್ನೆಲೆಯಲ್ಲಿ ಮೊಳಗಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆ.
      Jan 26, 2019, 10:53 am IST

      ಗಮನ ಸೆಳೆದ ಕರ್ನಾಟಕದ ಬೆಳಗಾವಿ ಕಾಂಗ್ರೆಸ್ ಅಧಿವೇಶ ಸ್ತಬ್ಧ ಚಿತ್ರ. ಗಾಂಧೀಜಿ ಭಾಗವಹಿಸಿದ್ದ ಅಧಿವೇಶನದ ಸ್ತಬ್ದಚಿತ್ರ.
      Jan 26, 2019, 10:45 am IST

      ಗಾಂಧೀಜಿ ಅವರ 150 ನೇ ಜನ್ಮದಿನಾಚರಣೆಯ ನಿಮಿತ್ತ ಬಹುತೇಕ ರಾಜ್ಯಗಳೂ ಗಾಂಧೀಜಿ ಅವರ ಟ್ಯಾಬ್ಲೋ ಮೂಲಕವೇ ಗಮನ ಸೆಳೆಯುತ್ತಿವೆ.
      Jan 26, 2019, 10:43 am IST

      ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ಕುರಿತು ಹೇಳುವ ಮಹಾರಾಷ್ಟ್ರದ ಪ್ರಾತ್ಯಕ್ಷಿಕೆ
      Jan 26, 2019, 10:41 am IST

      ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮ ವರ್ಷಾಚರಣೆಯ ನಿಮಿತ್ತ ಅವರ ಬದುಕನ್ನು ಪ್ರತಿನಿಧಿಸುವ ಟ್ಯಾಬ್ಲೋ ಪ್ರದರ್ಶನ
      Jan 26, 2019, 10:39 am IST

      ವಿವಿಧ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಪಥಸಂಚಲನ
      Jan 26, 2019, 10:30 am IST

      ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಿದ್ದ ಪರಮವೀರಚಕ್ರ ಪ್ರಶಸ್ತಿ ವಿಜೇತರು
      Jan 26, 2019, 10:25 am IST

      ಭಾರತೀಯ ನೌಕಾಸೇನೆ, ವಾಯುಸೇನೆ ಮತ್ತು ಭೂ ಸೇನೆಯ ಪ್ರಾಮುಖ್ಯ ತೋರುವ ಪ್ರಾತ್ಯಕ್ಷಿಕೆಗಳ ಅನಾವರಣ.
      Jan 26, 2019, 10:23 am IST

      ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರೂ ಭಾಗಿ
      Jan 26, 2019, 10:22 am IST

      ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಪರೇಡ್
      Jan 26, 2019, 10:18 am IST

      ವಿವಿಧ ರೆಜಿಮೆಂಟಿನ ಸಿಬ್ಬಂದಿಗಳಿಂದ ಪಥಸಂಚಲನ
      Jan 26, 2019, 10:08 am IST

      ಲೆ.ಜನರಲ್ ಅಮಿತ್ ಮಿಸ್ತ್ರಿ ಪಥಸಂಚಲನದ ನಾಯಕ
      Jan 26, 2019, 10:05 am IST

      ಹುತಾತ್ಮ ಯೋಧ ನಜೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ವಾನಿ ಅಹ್ಮದ್ ಕುಟುಂಬಸ್ತರು.
      Jan 26, 2019, 10:01 am IST

      ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್
      Jan 26, 2019, 9:58 am IST

      ಮುಖ್ಯ ಅತಿಥಿ ದಕ್ಷಿಣಾ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮ್ ಫೋಸಾ ಆಗಮನ
      Jan 26, 2019, 9:49 am IST

      ಅಮರ ಜವಾನ ಜ್ಯೋತಿಯಲ್ಲಿ ವೀರಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.
      Jan 26, 2019, 9:48 am IST

      ಸ್ವಾತಂತ್ರ್ಯಕ್ಕೂ ಮುನ್ನವೇ ಮೈಸೂರು ವಡೆಯರುಗಳಿಂದ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಜಾರಿಗೊಳಿಸಿಕೊಂಡ ರಾಜ್ಯ ಕರ್ನಾಟಕವೆನ್ನಲು ಹೆಮ್ಮೆಯಾಗುತ್ತದೆ. ಪ್ರಜಾಪ್ರಭುತ್ವವದ ಮೌಲ್ಯವನ್ನು ಅರಿತುಕೊಂಡು, ಗೌರವಿಸಿ, ಸಮಾಜವನ್ನು ಬಲಗೊಳಿಸಲು ಪ್ರಯತ್ನಿಸೋಣ- ಎಚ್ ಡಿ ಕುಮಾರಸ್ವಾಮಿ, ಕರ್ನಾಟಕ ಮುಖ್ಯಮಂತ್ರಿ
      Jan 26, 2019, 9:39 am IST

      70 ನೇ ಗಣರಾಜ್ಯೋತ್ಸವವನ್ನು ಕಣ್ತುಂಬಿಸಿಕೊಳ್ಳಲು ದೆಹಲಿಯ ರಾಜಪಥದಲ್ಲಿ ನೆರೆದ ಜನತೆ.
      Jan 26, 2019, 9:38 am IST

      ಕರ್ನಾಟಕದಲ್ಲಿ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯಪಾಲ ವಾಜುಬಾಯ್ ವಾಲಾ. ಗಣರಾಜ್ಯೋತ್ಸವದ ನಿಮಿತ್ತ ಮಾಣಿಕ್ ಶಾ ಮೈದಾನದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
      Jan 26, 2019, 9:18 am IST

      ಲಕ್ನೋದಲ್ಲಿ ಗಣರಾಜ್ಯೋತ್ಸವ ಆಚರಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
      Jan 26, 2019, 9:17 am IST

      ಉತ್ತರಕಾಂಡಲ್ಲಿ -15 ಡಿಗ್ರಿ ಸೆಲ್ಷಿಯಸ್ ಚಳಿಯಲ್ಲೂ ಹಿಮ ಪರ್ವತದ ಮೇಲೆ ಗಣರಾಜ್ಯ ದಿನ ಆಚರಿಸಿದ ಭಾರತೀಯ ಸೈನಿಕರು
      Jan 26, 2019, 9:15 am IST

      9:50 ಕ್ಕೆ ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದ್ದು, ಅಮರ ಜವಾನ ಜ್ಯೋತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅರ್ಪಿಸಲಿದ್ದಾರೆ
      READ MORE

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+