ವೈರಲ್ ವಿಡಿಯೋ : ರಾಖಿ ಸಾವಂತ್ ಇನಿಯನಿಗೆ ಬಿತ್ತು ಭರ್ತಿ ಒದೆ
ನವದೆಹಲಿ, ಜನವರಿ 18 : ಕಳೆದ ವರ್ಷ ಕಾಶ್ಮೀರದಲ್ಲಿ ಯುವಕರ ತಂಡದಿಂದ ಹೊಡೆತ ತಿಂದಿದ್ದೆ ಎಂದು ನಟನೆ ಮಾಡಿದ್ದ ಕುಖ್ಯಾತ ವ್ಯಕ್ತಿಯೊಬ್ಬನನ್ನು ವ್ಯಕ್ತಿಯೊಬ್ಬ ನಿಜವಾಗಿಯೂ ಹಿಡಿದು ಬಾರಿಸಿರುವ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ನೇರವಾಗಿ ಪ್ರಸಾರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆ ಕುಖ್ಯಾತ ವ್ಯಕ್ತಿ ಮತ್ತಾರೂ ಅಲ್ಲ, ನಾಟಕೀಯತೆಗೆ, ಢೋಂಗಿತನಕ್ಕೆ ಹೆಸರುವಾಸಿಯಾಗಿರುವ ವಿವಾದಪ್ರಿಯೆ, ಪ್ರಚಾರಪ್ರಿಯೆ, 40 ವರ್ಷದ 'ತರುಣಿ' ರಾಖಿ ಸಾವಂತ್ ಅವರನ್ನು ವರಿಸಲಿರುವ 46 ವರ್ಷದ 'ತರುಣ' ಚೆಲುವಾಂತ ಚೆನ್ನಿಗ ದೀಪಕ್ ಕಲಾಲ್.
Srsly disgusting thing I saw today ..whu gave us dis right k ja k kisi ko b aise maaro ..if u don’t lyk just don’t watch his videos
— Ankur Bodh (@AnkurBodh1) 15 January 2019
This is d first time m feeling very bad for him..rip humanity 🙏🏻@MumbaiPolice plz take some action #Deepakkalal #rakhisawant @ColorsTV #igt pic.twitter.com/dtludbpn48
ಅಭಿರುಚಿಹೀನ, ಅಸಹ್ಯಕರ, ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದೇ ದೀಪಕ್ ಕಲಾಲ್ ನನ್ನು ನಡುರಸ್ತೆಯಲ್ಲಿ ಬಡಿಯಲು ಕಾರಣ. 'ದಯವಿಟ್ಟು ಕ್ಷಮಿಸಿ, ಇನ್ನು ಅಂಥ ತಪ್ಪು ಮಾಡಲ್ಲ' ಎಂದು ಕಲಾಲ್ ಪರಿಪರಿಯಾಗಿ ಬೇಡಿಕೊಳ್ಳುತ್ತ, ಕಾಲಿಗೆ ಬೀಳುತ್ತಿದ್ದರೂ ಆತನನ್ನು ನಿರ್ದಯವಾಗಿ ಹೊಡೆಯಲಾಗಿದೆ.

ರ್ಯಾಪರ್ ಫಜಿಲ್ಪುರಿಯಾನ ಮ್ಯಾನೇಜರ್ ಎರಡು ದಿನಗಳ ಹಿಂದೆಯೇ ದೆಹಲಿಯಲ್ಲಿ ಕಾಮಿಡಿಯನ್ ದೀಪಕ್ ಕಲಾಲ್ ನನ್ನು ಹಿಡಿದು ಬಡಿದಿದ್ದಾರೆ. ಇನ್ನೊಮ್ಮೆ ಅಂಥ ಅಸಹ್ಯಕರ ವಿಡಿಯೋಗಳನ್ನು ಹಾಕಬೇಡ ಎಂದು ಹೇಳಿದ್ದಲ್ಲದೆ, ದೀಪಕ್ ಕಣ್ಣೀರುಗರೆಯುತ್ತಿದ್ದರೂ ಬಿಡದೆ ಹೊಡೆದಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ದೀಪಕ್ ಕಲಾಲ್ ಮನದನ್ನೆ ರಾಖಿ ಸಾವಂತ್ ಅವರು, ಇದು ನಿಜಕ್ಕೂ ಖೇದಕರ ಸಂಗತಿ. ದೀಪಕ್ ಮಾಡಿರುವುದು ನಿಮಗೆ ಸರಿಯಿಲ್ಲ ಅನ್ನಿಸಿದ್ದರೆ ಕಾನೂನನ್ನು ಏಕೆ ಕೈಗೆ ತೆಗೆದುಕೊಳ್ಳುತ್ತೀರಿ? ಪೊಲೀಸರಿಗೆ ದೂರು ನೀಡಿ. ಹಿಂದೂಸ್ತಾನದಲ್ಲಿ ಕಾನೂನು ಸುವ್ಯವಸ್ಥೆಯೆಂಬುದು ಇಲ್ಲವೇ ಇಲ್ಲ ಎಂದು ರಾಖಿ ಕೆಂಡ ಕಾರಿದ್ದಾರೆ.

ರಾಖಿ ಸಾವಂತ್ ಜೊತೆ ಮದುವೆಯಾದ ಮೇಲೆ ಪ್ರಥಮ ರಾತ್ರಿಯನ್ನು ಲೈವ್ ಆಗಿ ಆಚರಿಸುತ್ತೇನೆ... ಆಕೆಯನ್ನು ಈಗಾಗಲೆ ಗರ್ಭಿಣಿಯನ್ನಾಗಿ ಮಾಡಿದ್ದೇನೆ... ಮಗನೇ ನೀನು ಗಂಡಸು, ನಿನ್ನ ಗಂಡಸ್ತನ ಏನೆನ್ನುವುದನ್ನು ಇಡೀ ಜಗತ್ತಿಗೇ ತೋರಿಸು ಎಂದು ನನ್ನ ತಾಯಿಯೇ ಹೇಳಿದ್ದಾಳೆ.... ಹೀಗೆ ಬೊಗಳುತ್ತಲೇ ಇರುತ್ತಾನೆ ದೀಪಕ್ ಕಲಾಲ್ ತನ್ನ ಯುಟ್ಯೂಬ್ ಚಾನಲ್ ನಲ್ಲಿ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications