ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಯ ಕ್ರೀಡಾಪಟುಗಳಿಗೆ ಬಡ್ತಿಯಲ್ಲಿ ಆದ್ಯತೆಗೆ ಹೊಸ ನಿಯಮ

By Nayana
|
Google Oneindia Kannada News

ನವದೆಹಲಿ, ಆಗಸ್ಟ್ 3: ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಗಳಾಗಿರುವ ಕ್ರೀಡಾಪಟುಗಳು ಮತ್ತು ಕೋಚ್‌ಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ಕ್ರೀಡಾಪಟುಗಳು ಮತ್ತು ಕೋಚ್‌ಗಳಿಗೆ ಇನ್ನು ಅಧಿಕಾರಿ ಮಟ್ಟದ ಬಡ್ತಿ ಪಡೆಯಲು ಅವಕಾಶವಿದೆ.

ರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನ ರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನ

ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿರುವ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್‌ಗಳಿಗೂ ಬಡ್ತಿ ದೊರೆಯಲಿದೆ. ಪದ್ಮಶ್ರೀ ಪ್ರಶಸ್ತಿ ಮತ್ತು ರಾಷ್ಟ್ರೀಯ ಪುರಸ್ಕಾರವನ್ನು ಪಡೆಯುವ ಕ್ರೀಡಾಪಟುಗಳನ್ನೂ ಕೂಡ ಗುರುತಿಸಲಾಗುತ್ತದೆ.

ಹೊಸ ನಿಯಮದಂತೆ, 2 ಒಲಿಂಪಿಕ್ಸ್ ಗಳಲ್ಲಿ ಸ್ಪರ್ಧಿಸುವ ಮತ್ತು ಏಷ್ಯನ್ ಗೇಮ್ಸ್‌ನ ಅಥವಾ ಕಾಮನ್‌ವೆಲ್ತ್‌ ಗೇಮ್ಸ್‌ ಅಥವಾ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 2 ಪದಕ ಜಯಿಸುವ ಕ್ರೀಡಾಪಟುಗಳಿಗೆ ಅಧಿಕಾರಿ ದರ್ಜೆಯ ಬಡ್ತಿ ಸಿಗಲಿದೆ. ಅರ್ಜುನ ಅಥವಾ ಖೇಲ್​ರತ್ನ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳಿಗೂ ಬಡ್ತಿ ಸಿಗಲಿದೆ.

Railways sportsmen will get more promotion with new policy

2016ರ ರಿಯೋ ಒಲಿಂಪಿಕ್ಸ್ ವರೆಗೆ ಕ್ರೀಡಾಪಟುಗಳಿಗೆ ಬಡ್ತಿ ನೀಡುವ ಯಾವುದೇ ನಿಯಮವನ್ನು ರೈಲ್ವೆ ಇಲಾಖೆಯು ಹೊಂದಿರಲಿಲ್ಲ. ರಿಯೋ ಗೇಮ್ಸ್‌ನ ಬಳಿಕ, ಪದಕ ವಿಜೇತ ಮತ್ತು ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಪಡೆಯುವ ಕ್ರೀಡಾಪಟುಗಳಿಗಷ್ಟೇ ಬಡ್ತಿ ನೀಡುವ ನಿಯಮ ಜಾರಿಗೆ ತರಲಾಗಿತ್ತು. ರೈಲ್ವೆ ಇಲಾಖೆಯಲ್ಲಿ ಸ್ಯಕ್ಕೆ 3 ಸಾವಿರ ಹಾಲಿ ಕ್ರೀಡಾಪಟಗಳು ಉದ್ಯೋಗಿಗಳಾಗಿದ್ದಾರೆ ಎಂದು ಪಿಯುಷ್‌ ಗೋಯಲ್‌ ತಿಳಿಸಿದ್ದಾರೆ.

English summary
As Indian railways has adopted new policy regarding promotion, employees who were appointed in sports quota will get better promotion than earlier, minister of railways Piyush Goyal said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X