ರೈಲ್ವೆ ಇಲಾಖೆಯ ಕ್ರೀಡಾಪಟುಗಳಿಗೆ ಬಡ್ತಿಯಲ್ಲಿ ಆದ್ಯತೆಗೆ ಹೊಸ ನಿಯಮ
ನವದೆಹಲಿ, ಆಗಸ್ಟ್ 3: ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಗಳಾಗಿರುವ ಕ್ರೀಡಾಪಟುಗಳು ಮತ್ತು ಕೋಚ್ಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ಕ್ರೀಡಾಪಟುಗಳು ಮತ್ತು ಕೋಚ್ಗಳಿಗೆ ಇನ್ನು ಅಧಿಕಾರಿ ಮಟ್ಟದ ಬಡ್ತಿ ಪಡೆಯಲು ಅವಕಾಶವಿದೆ.
ರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನ
ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿರುವ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೋಚ್ಗಳಿಗೂ ಬಡ್ತಿ ದೊರೆಯಲಿದೆ. ಪದ್ಮಶ್ರೀ ಪ್ರಶಸ್ತಿ ಮತ್ತು ರಾಷ್ಟ್ರೀಯ ಪುರಸ್ಕಾರವನ್ನು ಪಡೆಯುವ ಕ್ರೀಡಾಪಟುಗಳನ್ನೂ ಕೂಡ ಗುರುತಿಸಲಾಗುತ್ತದೆ.
Shri Piyush Goyal, Hon'ble MR Approves a New Promotion Policy for Railway Sportspersons - #Railway Sportsperson & Coaches will be promoted to the Officer Rank. #sports #Olympics pic.twitter.com/GoGcnogt3d
— SouthWestern Railway (@SWRRLY) August 2, 2018
ಹೊಸ ನಿಯಮದಂತೆ, 2 ಒಲಿಂಪಿಕ್ಸ್ ಗಳಲ್ಲಿ ಸ್ಪರ್ಧಿಸುವ ಮತ್ತು ಏಷ್ಯನ್ ಗೇಮ್ಸ್ನ ಅಥವಾ ಕಾಮನ್ವೆಲ್ತ್ ಗೇಮ್ಸ್ ಅಥವಾ ವಿಶ್ವ ಚಾಂಪಿಯನ್ಷಿಪ್ನಲ್ಲಿ 2 ಪದಕ ಜಯಿಸುವ ಕ್ರೀಡಾಪಟುಗಳಿಗೆ ಅಧಿಕಾರಿ ದರ್ಜೆಯ ಬಡ್ತಿ ಸಿಗಲಿದೆ. ಅರ್ಜುನ ಅಥವಾ ಖೇಲ್ರತ್ನ ಪ್ರಶಸ್ತಿ ಪಡೆಯುವ ಕ್ರೀಡಾಪಟುಗಳಿಗೂ ಬಡ್ತಿ ಸಿಗಲಿದೆ.
2016ರ ರಿಯೋ ಒಲಿಂಪಿಕ್ಸ್ ವರೆಗೆ ಕ್ರೀಡಾಪಟುಗಳಿಗೆ ಬಡ್ತಿ ನೀಡುವ ಯಾವುದೇ ನಿಯಮವನ್ನು ರೈಲ್ವೆ ಇಲಾಖೆಯು ಹೊಂದಿರಲಿಲ್ಲ. ರಿಯೋ ಗೇಮ್ಸ್ನ ಬಳಿಕ, ಪದಕ ವಿಜೇತ ಮತ್ತು ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆಯುವ ಕ್ರೀಡಾಪಟುಗಳಿಗಷ್ಟೇ ಬಡ್ತಿ ನೀಡುವ ನಿಯಮ ಜಾರಿಗೆ ತರಲಾಗಿತ್ತು. ರೈಲ್ವೆ ಇಲಾಖೆಯಲ್ಲಿ ಸ್ಯಕ್ಕೆ 3 ಸಾವಿರ ಹಾಲಿ ಕ್ರೀಡಾಪಟಗಳು ಉದ್ಯೋಗಿಗಳಾಗಿದ್ದಾರೆ ಎಂದು ಪಿಯುಷ್ ಗೋಯಲ್ ತಿಳಿಸಿದ್ದಾರೆ.