ಅಲೋಕ್ ಬಳಿ ರಫೇಲ್ ಡೀಲ್ ದಾಖಲೆ: ರಾಹುಲ್ ಸ್ಫೋಟಕ ಮಾಹಿತಿ
ನವದೆಹಲಿ, ಅಕ್ಟೋಬರ್ 24: ಸ್ಫೋಟಕ ಬೆಳವಣಿಗೆಯೊಂದರಲ್ಲಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಮಹತ್ವದ ಕಾಗದ ಪತ್ರಗಳನ್ನು ಸಂಗ್ರಹಿಸುತ್ತಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸಿಬಿಐ ಮುಖ್ಯಸ್ಥ ಹುದ್ದೆಯೊಂದ ಅಲೋಕ್ ಕುಮಾರ್ ವರ್ಮಾ ಅವರನ್ನು ತೆಗೆದುಹಾಕುವುದರ ಹಿಂದೆ ರಫೇಲ್ ಡೀಲ್ ಕಾರಣವಾಗಿದೆ. ಎಂದು ಹೇಳಿಕೊಂಡಿರುವ ರಾಹುಲ್ ಗಾಂಧಿ ರಫೇಲ್ ಡೀಲ್ಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಿದ ಅಲೋಕ್ ವರ್ಮಾ ಅವರನ್ನು ಕಡ್ಡಾಯವಾಗಿ ರಜೆಯ ಮೇಲೆ ಕಳುಹಿಸುವ ಮೂಲಕ ರಫೇಲ್ ಡೀಲ್ಗೆ ಅಡ್ಡಿಪಡಿಸಿದ ಎಲ್ಲರನ್ನೂ ಮುಗಿಸುವ ಹುನ್ನಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
CBI चीफ आलोक वर्मा राफेल घोटाले के कागजात इकट्ठा कर रहे थे। उन्हें जबरदस्ती छुट्टी पर भेज दिया गया।
— Rahul Gandhi (@RahulGandhi) October 24, 2018
प्रधानमंत्री का मैसेज एकदम साफ है जो भी राफेल के इर्द गिर्द आएगा- हटा दिया जाएगा, मिटा दिया जाएगा।
देश और संविधान खतरे में हैं।
ಅಷ್ಟೇ ಅಲ್ಲದೆ ದೇಶದ ಸಂವಿಧಾನ ಸಂಕಷ್ಟದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಮಂತ್ರಿಗಳ ಉದ್ದೇಶ ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿರುವ ರಾಹುಲ್' ಜೋ ಭೀ ರಫೇಲ್ ಕೆ ಈರ್ದ್-ಗಿರ್ದ್ ಆಯೇಗಾ-ಹಠಾ ದಿಯಾ ಜಾಯೇಗಾ, ಮಿಠಾ ದಿಯಾ ಜಾಯೇಗಾ' ಎಂದು ಲೇವಡಿ ಮಾಡಿದ್ದಾರೆ.
ಸಿಬಿಐ ವಿವಾದಕ್ಕೆ ಹೊಸ ತಿರುವು ದೊರೆತಿದೆ, ಹಾಲಿ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸಲಾಗಿದ್ದು ಅವರ ಜಾಗಕ್ಕೆ ನಾಗೇಶ್ವರ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ನಾಗೇಶ್ವರ ರಾವ್ ಅವರು ತಕ್ಷಣದಿಂದಲೇ ಸಿಬಿಐ ಪ್ರಭಾರ ನಿರ್ದೇಶಕರ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

ಸಿಬಿಐ ವಿಶೇಷ ನಿರ್ದೇಶಕ ರಾಜೇಶ್ ಅಸ್ತಾನ ಅವರ ವಿರುದ್ಧ ಲಂಚ ಆರೋಪದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ ಬಳಿಕ ಸಿಬಿಐ ನಲ್ಲಿ ಆಂತರಿಕ ಜಗಳ ತಾರಕ್ಕೇರಿತ್ತು. ರಾಕೇಶ್ ಅಸ್ತಾನ ಅವರನ್ನು ರಜೆ ಮೇಲೆ ಕಳುಹಿಸಬಹುದು ಅಥವಾ ಅಮಾನತು ಮಾಡಬಹುದು ಎಂಬ ಕುತೂಹಲವೂ ಇತ್ತು. ಆದರೆ ರಾಕೇಶ್ ಅಸ್ತಾನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ಅಲೋಕ್ ವರ್ಮಾ ಅವರನ್ನು ರಜೆಯ ಮೇಲೆ ಕಳುಹಿಸುವ ಮೂಲಕ ಸಿಬಿಐ ಆಂತರಿಕ ಕಲಹಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.












Click it and Unblock the Notifications