ನಗದು ರಹಿತ ವ್ಯವಸ್ಥೆಗೆ 'ಭೀಮ್' ಆ್ಯಪ್ ಬಿಡುಗಡೆಗೊಳಿಸಿದ ಮೋದಿ
ನಗದು ರಹಿತ, ಆಧಾರ್ ಸಹಿತ ಭೀಮ್ ಎಂಬ ಆ್ಯಪ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದ್ದು, ಇದರ ಮೂಲಕ ಜನರು ತಮ್ಮ ಬ್ಯಾಂಕಿನ ಖಾತೆಯ ಹಣವನ್ನು ವರ್ಗಾವಣೆ, ಜಮೆ ಮಾಡಬಹುದು.
ನವದೆಹಲಿ,ಡಿಸೆಂಬರ್ 31: ಅಪನಗದೀಕರಣವಾದ 50ದಿನದ ನಂತರ ಏನೇನಾಗುತ್ತದೆ ಎಂಬುದಕ್ಕೆ ಮೊದಲ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಡಾ. ಅಂಬೇಡ್ಕರ್ ಅವರ ಹೆಸರಿನಲ್ಲಿ 'ಭೀಮ್'( ಭಾರತ್ ಇಂಟರ್ ಫೇಸ್ ಫಾರ್ ಮನಿ) ಎಂಬ ಡಿಜಿಟಲ್ ಅಪ್ಲಿಕೇಶನ್(ಆ್ಯಪ್) ಅನ್ನು ಶುಕ್ರವಾರ ಬಿಡುಗಡೆಗೊಳಿಸಿದರು.
ದೆಹಲಿಯಲ್ಲಿ ನಡೆದ ಡಿಜಿ ಧನ ಮೇಳದಲ್ಲಿ ಮೋದಿ 'ಭೀಮ್'ಗೆ ಚಾಲನೆ ನೀಡಿ, 'ಇನ್ನು ಎರಡು ವಾರಗಳಲ್ಲಿ ಈ ಅಪ್ಲಿಕೇಶನ್ ಅನ್ನು ಮೇಲ್ದರ್ಜೆಗೆ ಏರಿಸುತ್ತೇವೆ. ಇದಕ್ಕೆ ಹೆಬ್ಬೆಟ್ಟಿನ ಗುರುತು ಸಾಕು, ಸ್ಮಾರ್ಟ್ ಫೋನ್ ಅಲ್ಲದೆ ಸಾಮಾನ್ಯ ಪೋನ್ ಗಳಲ್ಲೂ ಸುಲಭವಾಗಿ ವಹಿವಾಟು ನಡೆಸಲು ಅನುಕೂಲವಾಗಲಿದೆ ಇದು ದೇಶದ ಜನರಿಗೆ ನೀಡುತ್ತಿರುವ ಹೊಸ ವರ್ಷದ ಕೊಡುಗೆ ಎಂದು ಪ್ರಧಾನಿ ತಿಳಿಸಿದರು.

ಖಾದಿ ಗ್ರಾಮೋದ್ಯೋಗದಿಂದ ಖರೀದಿಸಿದ ವಸ್ತುವಿಗೆ ಭೀಮ್ ಅಪ್ಲಿಕೇಶನ್ ಮೂಲಕ ಹಣ ಪಾವತಿಸಿ, ಮುಂದಿನ ದಿನದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟು ನಡೆಸಲು ಭೀಮ್ ನಲ್ಲಿ ಹೆಬ್ಬೆಟ್ಟು ಗುರುತು ಸಾಕು. ಈ ಗುರುತು ಬ್ಯಾಂಕ್ ವ್ಯವಹಾರವಾಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ ಇದುವರೆಗೆ ನೂರು ಕೋಟಿ ಜನ ಆಧಾರ್ ಸಂಖ್ಯೆ ಹೊಂದಿದ್ದಾರೆ. ಅವರ ಬಳಿ ನೂರು ಕೋಟಿಗೂ ಹೆಚ್ಚು ಮೊಬೈಲ್ ಗಳಿವೆ, ಇದು ಆಧಾರ್ ಆಧಾರಿತವಾಗಿದ್ದು, ಮುಂದಿನ ಎರಡು ವಾರದಲ್ಲಿ ಹೆಬ್ಬೆಟ್ಟಿನ ಮೂಲಕ ಭೀಮ್ ಬಳಕೆಯಾದರೆ ಕ್ರಾಂತಿಯೇ ಆಗಲಿದೆ ಎಂದು ಪ್ರತಿಪಾದಿಸಿದರು.

ಬಳಕೆ ಹೇಗೆ?:
ಬಳಕೆದಾರ, ಭೀಮ್ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆ ನೋಂದಣಿ ಮಾಡಿಕೊಂಡು ಯುಪಿಐ ಪಿನ್ ಪಡೆಯಬೇಕು. ಆ ನಂತರ 'ಭೀಮ್' ಬಳಸಿ ಬ್ಯಾಂಕಿನ ಹಣ ವರ್ಗಾವಣೆ, ಜಮೆ, ಖಾತೆ ಪರಿಶೀಲನೆ ಮಾಡಬಹುದು. ಭೀಮ್ ನಲ್ಲಿ ಕ್ಯೂಆರ್ ಕೋಡ್ ಬಳಸಿ ಸ್ಕ್ಯಾನ್ ಮಾಡಿ ಕೊಂಡ ವಸ್ತುವಿಗೆ ಹಣ ಪಾವತಿಸಬಹುದು. ನೇಟ್ ಬ್ಯಾಂಕಿಂಗ್ ನಂತೆ ಐಎಫ್ ಪಿಸಿ ಕೋಡ್ ಬಳಸಿ ಹಣ ಪಾವತಿಸಬಹುದು.
Download BHIM (Bharat Interface for Money) App. It will improve ease, experience & efficiency of digital transfers. https://t.co/vTFd5B4aHW
— Narendra Modi (@narendramodi) December 30, 2016
ಸದ್ಯಕ್ಕೆ ಇದನ್ನು ಆಂಡ್ರಾಯ್ಡ್ ಫೋನಿನಲ್ಲಿ ಮಾತ್ರ ಬಳಕೆಯಾಗುತ್ತಿದ್ದು, ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿ ಪಡಿಸಿರುವ ಅಪ್ಲಿಕೇಶನ್ ಆಗಿದೆ. ಒಮ್ಮಲೆ 10ಸಾವಿರದ ವರೆಗೂ ವಹಿವಾಡು ನಡೆಸಬಹುದು, ಒಂದು ದಿನದಲ್ಲಿ 20ಸಾವಿರದ ವರೆಗೆ ವಹಿವಾಟು ಸಾಧ್ಯ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ ಸಿ, ಐಸಿಐಸಿಐ ಸೇರಿದಂತೆ ಸದ್ಯಕ್ಕೆ 32 ಬ್ಯಾಂಕುಗಳು ಇದರ ಪಟ್ಟಿಯಲ್ಲಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಇದರ ಬಳಕೆಯಿದ್ದು ಎಲ್ಲ ಭಾಷೆ ಇದಕ್ಕೆ ಸೇರ್ಪಡೆಯಾಗಲಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications