ಕೇಂದ್ರ ಸಚಿವ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ
ನವದೆಹಲಿ, ಅಕ್ಟೋಬರ್ 09: ಕೇಂದ್ರ ಸಚಿವ, ಮಾಜಿ ಸಂಪಾದಕ ಎಂಜೆ ಅಕ್ಬರ್ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹಲವು ಪತ್ರಕರ್ತೆಯರು ಆರೋಪ ಹೊರೆಸಿದ್ದಾರೆ.
ಪ್ರಿಯಾ ರಮಣಿ ಎಂಬುವರು ಮೊದಲಿಗೆ ಈ ಬಗ್ಗೆ ಟ್ವೀಟ್ ಮಾಡಿ ವೋಗ್ ಇಂಡಿಯಾದ 2017ರ ಆವೃತ್ತಿಯಲ್ಲಿ ಬಂದ ಲೇಖನವೊಂದರನ್ನು ಉಲ್ಲೇಖಿಸಿದ್ದಾರೆ.
ಟೆಲಿಗ್ರಾಫ್, ಏಷ್ಯನ್ ಏಜ್, ದಿ ಸಂಡೇ ಗಾರ್ಡಿಯನ್ ಮುಂತಾದ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕರಾಗಿದ್ದ ಎಂಜೆ ಅಕ್ಬರ್ ಅವರು ಭಾರತೀಯ ಜನತಾ ಪಕ್ಷ ಸೇರಿದರು.
ರಾಜ್ಯಸಭಾ ಸದಸ್ಯರಾದ ಅಕ್ಬರ್ ಅವರು ನಂತರ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿ ಕಾರ ನಿರ್ವಹಿಸುತ್ತಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ನಂತರ, ಪ್ರಮುಖ ರಾಷ್ಟ್ರೀಯ ದೈನಿಕ ಹಿಂದೂಸ್ತಾನ್ ಟೈಮ್ಸ್ ನ ರಾಜಕೀಯ ವಿಭಾಗದ ಸಂಪಾದಕ, ಮುಖ್ಯ ಬ್ಯೂರೋ ಪ್ರಶಾಂತ್ ಝಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಎಡಿಟರ್ ಕೆಆರ್ ಶ್ರೀನಿವಾಸನ್ ವಿರುದ್ಧ ಪತ್ರಕರ್ತೆ ಸಂಧ್ಯಾ ಮೆನನ್ ಏಳು ಮಂದಿ ಮಹಿಳೆಯರು ಆರೋಪಿಸಿದ್ದಾರೆ.
ನಾನಾ ಪಾಟೇಕರ್, ಚಿತ್ರಕರ್ಮಿ ವಿಕಾಸ್ ಬೆಹ್ಲ್, ಲೇಖಕ ಚೇತನ್ ಭಗತ್, ಕಾಮಿಕ್ ಉತ್ಸವ್ ಚಕ್ರವರ್ತಿ, ನಟ ರಜತ್ ಕಪೂರ್ ಅವರಿಗೆ #metoo ಅಭಿಯಾನದ ಬಿಸಿ ತಟ್ಟಿದೆ.
|
ಮೊದಲು ದನಿಯೆತ್ತಿದ ಪ್ರಿಯಾ ರಮಣಿ
ಪ್ರಿಯಾ ರಮಣಿ ಎಂಬುವರು ಮೊದಲಿಗೆ ಈ ಬಗ್ಗೆ ಟ್ವೀಟ್ ಮಾಡಿ ವೋಗ್ ಇಂಡಿಯಾದ 2017ರ ಆವೃತ್ತಿಯಲ್ಲಿ ಬಂದ ಲೇಖನವೊಂದರನ್ನು ಉಲ್ಲೇಖಿಸಿದ್ದಾರೆ.
'ನಾನು ಮೊದಲಿಗೆ ನನ್ನ ಎಂಜೆ ಅಕ್ಬರ್ ಕಥೆಯೊಂದಿಗೆ ಆರಂಭಿಸುತ್ತಿದ್ದೇನೆ. ಲೇಖನದಲ್ಲಿ ಇವರ ಹೆಸರು ಸೇರಿಸಲಿಲ್ಲ ಏಕೆಂದರೆ ಇವರು 'ಏನ್ನನ್ನೂ' ಮಾಡಲಿಲ್ಲ. ಇವರ ಬಳಿ ಹಲವು ಮಹಿಳೆಯರು ಕೆಟ್ಟ ಕಥೆಗಳನ್ನು ಹೇಳಲಿದ್ದಾರೆ' ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
|
ಪ್ರೇರಣಾ ಸಿಂಗ್ ಬಿಂದ್ರಾ ಅವರಿಂದ ಟ್ವೀಟ್
ಈತ ಅತ್ಯಂತ ಪ್ರತಿಭಾವಂತ ಸಂಪಾದಕ, ಈಗ ರಾಜಕಾರಣಿ, ನನ್ನ ಮೊದಲ ಉದ್ಯೋಗ ಸ್ಥಳದಲ್ಲಿ ಈತ ನನಗೆ ಬಾಸ್. ಒಮ್ಮೆ ಹೋಟೆಲ್ ರೂಮಿಗೆ ಕರೆದು ಲೇಖನವೊಂದರ ಬಗ್ಗೆ ಚರ್ಚೆ ಮಾಡಿದೆವು. ಮಧ್ಯರಾತ್ರಿ ಕಳೆಯುತ್ತಿದ್ದಂತೆ ಆತ ನನ್ನನ್ನು ಮಂಚಕ್ಕೆ ಕರೆದ, ನಾನು ನಿರಾಕರಿಸಿದೆ. ಪ್ರತಿಭಟಿಸಿದೆ. ಈ ಬಗ್ಗೆ ಮಾತನಾಡಲು ಅನೇಕ ಕಾರಣಗಳಿಂದ ಆಗಿರಲಿಲ್ಲ ಎಂದು ಹೆಸರನ್ನು ಹೇಳಲು ಬಯಸದ ಪತ್ರಕರ್ತೆಯ ನೋವನ್ನು ಟ್ವೀಟ್ ನಲ್ಲಿ ಹಾಕಲಾಗಿದೆ.
|
ಸುಜತಾ ಆನಂದನ್ ಟ್ವೀಟ್
ಕಾಫಿ ಕುಡಿಯಲೆಂದು ನನ್ನ ಫ್ರೆಂಡ್ ಮನೆಗೆ ರಾತ್ರಿ ವೇಳೆ ಒಂದು ದಿನ ಈತ ಬಂದಿದ್ದ. ನನ್ನ ಗೆಳತಿ ಸಿಂಗಲ್ ಮದರ್ ಆಗಿದ್ದು, ಮಗು ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಈತನ ಬಯಕೆಗೆ ಸಹಕರಿಸಲೂ ಇಲ್ಲ. ಆನಂತರ ಅವಳಿಗೆ ನರಕ ದರ್ಶನವಾಯಿತು.
|
ಶುಮಾ ರಹಾ ಟ್ವೀಟ್
1995ರಲ್ಲಿ ತಾಜ್ ಬೆಂಗಾಲ್, ಕೋಲ್ಕತ್ತಾದಲ್ಲಿ ನನಗಾದ ಅನುಭವದ ನಂತರ ನಾನು ಹುದ್ದೆ ತೊರೆಯಬೇಕಾಯಿತು
|
ಹರೀಂದರ್ ಬವೇಜಾ
ರಮ್ ಜತೆಗೆ ಇಂದು ರಾತ್ರಿ ನಿಮ್ಮ ಮನೆಗೆ ಬರುತ್ತೇನೆ ಎನ್ನುತ್ತಿದ್ದ. ಬೇಡ ಎಂದರೆ ಏನು ಅರ್ಥ ಎಂಬುದು ಆತನಿಗೆ ತಿಳಿದಿಲ್ಲ. ನಮ್ಮಲ್ಲಿ ಅನೇಕರ ಬಳಿ ಎಂಜೆ ಬಗ್ಗೆ ಕಥೆಗಳಿವೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ









Click it and Unblock the Notifications