ವೈವಾಹಿಕ ಅತ್ಯಾಚಾರ: ದೆಹಲಿ ಹೈಕೋರ್ಟ್ನಿಂದ ಬಾರದ ಒಮ್ಮತದ ತೀರ್ಪು
ನವದೆಹಲಿ, ಮೇ 11: ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕೆಂಬ ವಿಚಾರದ ಬಗ್ಗೆ ದೆಹಲಿ ಹೈಕೋರ್ಟ್ನ ನ್ಯಾಯಪೀಠವೊಂದಕ್ಕೆ ಒಮ್ಮತದ ತೀರ್ಪು ಕೊಡಲು ಸಾಧ್ಯವಾಗಲಿಲ್ಲ. ನ್ಯಾಯಪೀಠದಲ್ಲಿದ್ದ ನ್ಯಾ. ರಾಜೀವ್ ಶಕಧೇರ್ (Justice Rajeev Shakdher) ಮತ್ತು ನ್ಯಾ. ಹರಿಶಂಕರ್ ಅವರು ಭಿನ್ನ ತೀರ್ಪು ನೀಡಿದ್ದಾರೆ. ಇದರೊಂದಿಗೆ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ವೈವಾಹಿಕ ಜೀವನದಲ್ಲಿ ಗಂಡನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸದಂತೆ ವಿನಾಯಿತಿ ನೀಡಲಾಗಿದ್ದ ಕಾನೂನನ್ನು ರದ್ದುಗೊಳಿಸುವಂತೆ ಅರ್ಜಿಗಳು ಸಲ್ಲಿಕೆಯಾಗಿದ್ದರು. ಇದರ ವಿಚಾರಣೆ ಬಹಳ ದಿನಗಳವರೆಗೆ ನಡೆದು ಫೆಬ್ರವರಿ 21ರಂದು ದೆಹಲಿ ಉಚ್ಚ ನ್ಯಾಯಾಲಯ ತನ್ನ ತೀರ್ಪು ಕಾಯ್ದಿರಿಸಿತ್ತು. ಇಂದು ನೀಡಿದ ತೀರ್ಪಿನಲ್ಲಿ ಇಬ್ಬರು ನ್ಯಾಯಾಧೀಶರ ಮಧ್ಯೆ ಅಭಿಪ್ರಾಯಭೇದ ಬಂದು ಒಮ್ಮತ ತೀರ್ಪು ಸಾಧ್ಯವಾಗಲಿಲ್ಲ.
ವೈವಾಹಿಕ ಜೀವನದಲ್ಲಿ ವಯಸ್ಕ ಹೆಂಡತಿಯೊಂದಿಗೆ ಗಂಡ ಯಾವುದೇ ರೀತಿಯಲ್ಲಾದರೂ ಲೈಂಗಿಕ ಸಂಪರ್ಕ ಸಾಧಿಸಿದರೆ ಅದು ಅಪರಾಧ ಎನಿಸುವುದಿಲ್ಲ ಎಂದು ಐಪಿಸಿ ಸೆಕ್ಷನ್ 375ರಲ್ಲಿ ತಿಳಿಸಲಾಗಿರುವ ಎರಡನೇ ವಿವರಣೆಯು ಹೇಳುತ್ತದೆ. ಈ ಕಾನೂನು ಅಸಂವಿಧಾನಿಕ ಎಂದು ನ್ಯಾ. ರಾಜೀವ್ ಶಕದೇರ್ ಅಭಿಪ್ರಾಯಪಟ್ಟರು.

ಇನ್ನೊಂದೆಡೆ, ನ್ಯಾ. ಹರಿಶಂಕರ್ ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಐಪಿಸಿ ಸೆಕ್ಷನ್ 375ರ ಎರಡನೇ ವಿನಾಯಿತಿಯ ವಿವರಣೆಯು ಸಂವಿಧಾನದ ನಿಯಮ ಉಲ್ಲಂಗಿಸುವುದಿಲ್ಲ ಎಂದರು.
ವೈವಾಹಿಕ ಅತ್ಯಾಚಾರವನ್ನು ಅಪರಾಧದಿಂದ ಹೊರಗಿಟ್ಟಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹಲವು ವೈವಾಹಿಕ ಜೀವನದಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಲೈಂಗಿಕ ಹಲ್ಲೆಗೊಳಗಾಗುತ್ತಿರುವುದುಂಟು. ಈ ಮಹಿಳೆಯರಿಗೆ ಕಾನೂನಿನ ನೆರವು ಇಲ್ಲವಾಗಿದೆ. ಆದ್ದರಿಂದ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕೆಂದು ಕೋರಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ, ಕೇಂದ್ರ ಸರಕಾರದ ನಿಲುವು ಏನು ಎಂದು ದೆಹಲಿ ಉಚ್ಚ ನ್ಯಾಯಾಲಯ ಫೆಬ್ರವರಿ 7ರಂದು ಕೇಳಿ, ಉತ್ತರಕ್ಕಾಗಿ ಎರಡು ವಾರ ಕಾಲಾವಕಾಶ ಕೊಟ್ಟಿತು. ಅದಕ್ಕೆ ಕೆಂದ್ರ ಸರಕಾರ ಇನ್ನೂ ಹೆಚ್ಚಿನ ಕಾಲಾವಧಿ ಬೇಕು ಎಂದು ಕೇಳಿತಾದರೂ ಕೋರ್ಟ್ ಅದಕ್ಕೆ ಒಪ್ಪಲಿಲ್ಲ.
ಈ ಪ್ರಕರಣದಲ್ಲಿ ತೆಗೆದುಕೊಳ್ಳುವ ನಿರ್ಧಾರ ಸಾಮಾಜಿಕ ಮತ್ತು ಕೌಟುಂಬಿಕವಾಗಿ ದೀರ್ಘ ಪರಿಣಾಮಗಳನ್ನು ಉಂಟು ಮಾಡಬಹುದು. ಅದಕ್ಕಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯ ಕೇಳುತ್ತಿದ್ದೇವೆ ಎಂದು ದೆಹಲಿ ಹೈಕೋರ್ಟ್ಗೆ ಕೇಂದ್ರ ಸರಕಾರ ತಿಳಿಸಿತು.

ಬೇಡ ಎಂದರೆ ಬೇಡ:
ದೆಹಲಿ ಹೈಕೋರ್ಟ್ ಪೀಠದ ನ್ಯಾ. ಶಕಧೇರ್ ಪ್ರಕಾರ, ಒಬ್ಬ ಗರ್ಲ್ಫ್ರೆಂಡ್ ಆಗಲೀ ಲಿವ್ ಇನ್ ಪಾರ್ಟ್ನರ್ ಆಗಲೀ ಲೈಂಗಿಕ ಕ್ರಿಯೆಗೆ ಅಸಮ್ಮತಿ ಸೂಚಿಸಿದರೂ ಗಂಡಸು ಬಲಾತ್ಕಾರ ಮಾಡಿದರೆ ಅದು ಅಪರಾಧ ಆಗುತ್ತದೆ. ಇದು ವೈವಾಹಿಕ ಜೀವನಕ್ಕೂ ಅನ್ವಯ ಆಗುತ್ತದೆ. "ಯಾವುದೇ ಸಂಬಂಧವನ್ನು ಬೇರೆ ರೀತಿಯಲ್ಲಿ ನೋಡಲಾಗುವುದಿಲ್ಲ. ಏನೇ ಇದ್ದರೂ ಆಕೆ ಮಹಿಳೆಯೇ" ಎಂಬುದು ಈ ನ್ಯಾಯಾಧೀಶರ ಅನಿಸಿಕೆ.
ವಿವಾಹಪೂರ್ವ ಸಂಬಂಧಕ್ಕೂ ದಾಂಫತ್ಯ ಸಂಬಂಧಕ್ಕೂ ವ್ಯತ್ಯಾಸ ಇದೆ:
ವಿವಾಹಪೂರ್ವ ಸಂಬಂಧ ಅಥವಾ ಲಿವ್-ಇನ್ ಸಂಬಂಧಕ್ಕೂ ದಾಂಪತ್ಯ ಜೀವನದಲ್ಲಿನ ಸಂಬಂಧಕ್ಕೂ ವ್ಯತ್ಯಾಸ ಇದೆ. ವೈವಾಹಿಕ ಜೀವನದಲ್ಲಿ ಇಬ್ಬರಲ್ಲಿ ಯಾರು ಬೇಕಾದರೂ ಲೈಂಗಿಕ ಸಂಬಂಧ ಅಪೇಕ್ಷಿಸುವ ಹಕ್ಕು ಹೊಂದಿರುತ್ತಾರೆ. ಆದರೆ, ಮದುವೆ ಆಗಿಲ್ಲದ ಜೋಡಿಗೆ ಈ ಹಕ್ಕು ಇರುವುದಿಲ್ಲ" ಎಂದು ನ್ಯಾ| ಹರಿಶಂಕರ್ ಹೇಳಿದ್ದಾರೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧಗೊಳಿಸಬೇಕೆಂದು ನಾಲ್ಕೈದು ವರ್ಷಗಳ ಹಿಂದೆಯೇ ಎನ್ಜಿಒಗಳಾದ ಆರ್ಐಟಿ ಫೌಂಡೇಶನ್ ಮತ್ತು ಅಖಿಲ ಭಾರತ ಪ್ರಜಾತಂತ್ರೀಯ ಮಹಿಳಾ ಸಂಸ್ಥೆ ದೆಹಲಿ ಹೈಕೋರ್ಟ್ನಲ್ಲಿ ಪೆಟಿಶನ್ ಸಲ್ಲಿಸಿದ್ದವು. ಈ ಅರ್ಜಿಗಳನ್ನು ವಿರೋಧಿಸಿ ಕೇಂದ್ರ ಸರಕಾರ 2017ರಲ್ಲಿ ಪ್ರಮಾಣಪತ್ರ ಕೊಟ್ಟಿತ್ತು.
ಇದೀಗ ಈ ಪ್ರಕರಣದಲ್ಲಿ ಒಮ್ಮತದ ತೀರ್ಪು ನೀಡದಿದ್ದರೂ ದೆಹಲಿ ಹೈಕೋರ್ಟ್ ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಮಾಡುವುದು ಉತ್ತಮ ಎಂದು ಸಲಹೆ ನೀಡಿದೆ. ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications