ರಾಹುಲ್ ಗಾಂಧಿ ತಮ್ಮ ಮಾತಿನಲ್ಲಿ ಸಭ್ಯತೆ ಕಾಪಾಡಲಿ ಎಂದ ಸುಷ್ಮಾ ಸ್ವರಾಜ್
ನವದೆಹಲಿ, ಏ.6: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮಾತಿನಲ್ಲಿ ಹಿಡಿತವಿಟ್ಟುಕೊಂಡು ಸಭ್ಯತೆ ಕಾಪಾಡಿದರೆ ಒಳ್ಳೆಯದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಗುಜರಾತ್ನ ಗಾಂಧಿನಗರದಿಂದ ಆರು ಬಾರಿ ಗೆದ್ದು ಸಂಸದರಾದ ಎಲ್.ಕೆ.ಆಡ್ವಾಣಿಯವರಿಗೆ ಈ ಬಾರಿ ಬಿಜೆಪಿ ಅವಮಾನ ಮಾಡಿದೆ.
ಅವರಿಗೆ ಟಿಕೆಟ್ ನೀಡದೆ ಅಮಿತ್ ಷಾ ಅವರಿಗೆ ನೀಡಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತದೆ. ಆದರೆ ಗುರುವಿಗೆ ಅತ್ಯುನ್ನತ ಸ್ಥಾನ ಕೊಡಬೇಕು ಎಂಬುದನ್ನು ಮರೆತಂತಿದೆ.
ಎಲ್.ಕೆ.ಆಡ್ವಾಣಿಯವರು ತಮ್ಮ ಗುರು ಎಂದು ಮೋದಿ ಕರೆಯುತ್ತಾರೆ. ಆದರೆ ಅವರನ್ನು ಪಕ್ಷದಿಂದಲೇ ಹೊರಹಾಕಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು.
ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ...
ಪ್ರಧಾನಿ ಮೋದಿಯವರು ಅವರ ಗುರು ಎಲ್.ಕೆ.ಅಡ್ವಾಣಿಯವರನ್ನು ಅನುಚಿತವಾಗಿ ಹೊರಹಾಕಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದ ಮಾತಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಅಡ್ವಾಣಿ ಅವರು ನಮ್ಮ ತಂದೆ ಸ್ಥಾನದಲ್ಲಿ ಇದ್ದಾರೆ.
ರಾಹುಲ್ ಗಾಂಧಿಯವರ ಮಾತು ನಮಗೆ ತುಂಬ ನೋವು ತಂದಿದೆ. ದಯವಿಟ್ಟು ಮಾತನಾಡುವಾಗ ಸಭ್ಯತೆಯಿಂದ ಶಬ್ದ ಬಳಸಿ ಎಂದಿದ್ದಾರೆ.