ಈ ಮೃಗಗಳು ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಬದುಕಲು ಅರ್ಹರಲ್ಲ!
ನವದೆಹಲಿ, ಮೇ 5: ಆ ಚಳಿಗಾಲದ ರಾತ್ರಿಯಲ್ಲಿ ಈ ಜಗತ್ತು ಆಕೆ ಪಾಲಿಗೆ ಇನ್ನೇನು ಕೊನೆಯಾಗುತ್ತದೆ ಎಂಬ ಸಣ್ಣ ಸುಳಿವಾದರೂ ಇತ್ತಾ? ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ನಾಲ್ಕು ಮಂದಿಗೆ ಮರಣದಂಡನೆ ಕಾಯಂ ಮಾಡುವ ಮುನ್ನ ಈ ಅಂಶವನ್ನು ಗಮನಿಸಿದ್ದು, ನಿರ್ಭಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನಾಲ್ವರನ್ನು ದೋಷಿಗಳೆಂದು ತೀರ್ಮಾನಿಸಿ, ಮರಣ ದಂಡನೆ ನೀಡುವಂತೆ ಆದೇಶಿಸಿದೆ.
ಶಿಕ್ಷೆ ಕಾಯಂ ಮಾಡುವ ಮುನ್ನ ಯಾವ್ಯಾವ ಅಂಶವನ್ನು ಸುಪ್ರೀಂ ಕೋರ್ಟ್ ಗಮನದಲ್ಲಿರಿಸಿದೆ ಎಂಬುದರ ವಿವರಗಳು ಇಲ್ಲಿವೆ
* ಆ ಚಳಿಗಾಲದ ರಾತ್ರಿಯಲ್ಲಿ ಆಕೆಯ ಜಗತ್ತು ಅಷ್ಟು ಭೀಕರವಾಗಿ ಕೊನೆಯಾಗುತ್ತದೆ ಎಂಬ ಸಣ್ಣ ಸುಳಿವಾದರೂ ಆಕೆಗಿತ್ತಾ?
* ಸಾಯೋ ಸ್ಥಿತಿಯಲ್ಲಿ ಸಂತ್ರಸ್ತೆಯನ್ನು ಮತ್ತು ಆಕೆ ಜತೆಗಿದ್ದವರನ್ನು ಅಪರಾಧಿಗಳು ಬಿಟ್ಟು ಹೋಗಿದ್ದಾರೆ. ಅಪರಾಧಿಗಳು ಅವರಿಂದ ದೋಚಿ, ಬೆಲೆ ಬಾಳುವ ವಸ್ತುಗಳನ್ನು ಹಂಚಿಕೊಂಡಿದ್ದಾರೆ
* ಅಪರಾಧಿಗಳ ವಿಕೃತ ವಾಂಛೆಗಾಗಿ ಆಕೆಯನ್ನು ವಸ್ತುವಿನ ರೀತಿ ಬಳಸಿದ್ದಾರೆ. ಆಕೆಯ ಮಾನ-ಗೌರವ ಜತೆ ಪೈಶಾಚಿಕ ರೀತಿಯಲ್ಲಿ ನಡೆದುಕೊಂಡಿದ್ದಾರೆ
* ಸಾಮಾಜಿಕ ನಂಬಿಕೆಯನ್ನೇ ಹಾಳು ಮಾಡುವಂಥ ಹೇಯಕರವಾದ ಅಪರಾಧ ಕೃತ್ಯವಿದು
* ಒಪ್ಪಲು ಸಾಧ್ಯವೇ ಇಲ್ಲದಷ್ಟು ಕ್ರೂರವಾದ ಅಪರಾಧ ಕೃತ್ಯವಿದು
* ಕಬ್ಬಿಣದ ರಾಡ್ ನಿಂದ ಆಕೆಯ ಕರುಳು ಚದುರಿ ಹೋಗುವಂತೆ ಮಾಡಿದ್ದಾರೆ. ಆಕೆಯ ಬಟ್ಟೆಯನ್ನು ಹರಿದಿದ್ದಾರೆ. ಆಕೆಯ ಮೇಲೆ ಮೃಗಗಳ ರೀತಿ ಲೈಂಗಿಕ ದೌರ್ಜನ್ಯ ಎಸಗಿರುವುದರಿಂದ ಇದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ
* ದೆಹಲಿ ಪೊಲೀಸರ ತನಿಖೆ ಸಮಗ್ರವಾಗಿದೆ.