ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ.ಲೋಯಾ ಪ್ರಕರಣ: ಅಮಿತ್ ಶಾ ಬಗ್ಗೆ ದೇಶಕ್ಕೇ ಗೊತ್ತು ಎಂದ ರಾಹುಲ್

|
Google Oneindia Kannada News

ನವದೆಹಲಿ, ಏಪ್ರಿಲ್ 20: ನ್ಯಾ.ಬಿ.ಎಚ್.ಲೋಯಾ ಸಾವು ಆಕಸ್ಮಿಕ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಅಮಿತ್ ಶಾ ಅವರ ಕುರಿತು ಸತ್ಯ ಏನು ಎಂಬುದು ಬಹುಪಾಲು ಭಾರತೀಯರಿಗೆ ಗೊತ್ತು' ಎಂದಿದ್ದಾರೆ.

2005 ರಲ್ಲಿ ಗುಜರಾತಿನಲ್ಲಿ ನಡೆದ ಸೋಹ್ರಾಬುದ್ದಿನ್ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ಕೋರ್ಟಿನ ನ್ಯಾಯಾಧೀಶ ಲೋಯಾ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ 2014 ರಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.ಅವರು ಹೃದಯಾಘಾತದಿಂದ ನಿಧನರಾಗಿದ್ದು ಎಂದು ವೈದ್ಯಕೀಯ ವರದಿಗಳು ಹೇಳಿದ್ದವಾದರೂ, ಅವರ ಸಾವು ಅಸಹಜವೆಂದು ಶಂಕಿಸಿ, ವಿಚಾರಣೆ ನಡೆಯಬೇಕೆಂದು ಒತ್ತಡಹೇರಲಾಗಿತ್ತು.

Justice Loya death case: Rahul Gandhi slams BJPs Amit Shah

ಲೋಯಾ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸುತ್ತಿದೆ: ಬಿಜೆಪಿಲೋಯಾ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸುತ್ತಿದೆ: ಬಿಜೆಪಿ

ಆದರೆ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಲೋಯಾ ಸಾವು ಆಕಸ್ಮಿಕ ಎಂದು ಹೇಳಿತ್ತು. ಸೋಹ್ರಾಬುದ್ದಿನ್ ಎನ್ ಕೌಂಟರ್ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕೈವಾಡವಿದೆ ಎಂಬ ಆರೋಪವಿದ್ದ ಹಿನ್ನೆಲೆಯಲ್ಲಿ ಲೋಯಾ ಸಾವಿಗೂ ಅಮಿತ್ ಶಾ ಅವರಿಗೂ ವಿಪಕ್ಷಗಳು ಸಂಬಂಧ ಕಲ್ಪಿಸಿದ್ದವು.

English summary
'Most Indians, including those in the BJP, understand the truth about Amit Shah', Congress president Rahul Gandhi said after BJP slammed him for raising questions over the Supreme Court verdict on Justice Loya death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X