ಯಾಕೂಬ್ಗೆ ಗಲ್ಲು, ಜಡ್ಜ್ಗೆ ಜೀವ ಬೆದರಿಕೆ
ನವದೆಹಲಿ, ಆಗಸ್ಟ್ 7 : ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆ ತೀರ್ಪು ನೀಡಿದ್ದ ನ್ಯಾ.ದೀಪಕ್ ಮಿಶ್ರಾ ಅವರಿಗೆ ಜೀವ ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಸುಪ್ರೀಂಕೋರ್ಟ್
ಮುಖ್ಯನ್ಯಾಯಮೂರ್ತಿ
ಎಚ್.ಎಲ್.ದತ್ತು
ಅವರು
ರಚನೆ
ಮಾಡಿದ್ದ
ತ್ರಿ
ಸದಸ್ಯ
ಪೀಠದಲ್ಲಿ
ನ್ಯಾಯಮೂರ್ತಿಗಳಾದ
ದೀಪಕ್
ಮಿಶ್ರಾ,
ಪ್ರಫುಲ್ಲಾ
ಸಿ
ಪಂತ್
ಹಾಗೂ
ಅಮಿತಾವ್
ರಾಯ್
ಅವರಿದ್ದರು.
ಯಾಕೂಬ್
ಗಲ್ಲು
ಶಿಕ್ಷೆಗೆ
ತಡೆ
ನೀಡುವ
ಅರ್ಜಿಯ
ವಿಚಾರಣೆಯನ್ನು
ತಡರಾತ್ರಿ
ಕೋರ್ಟ್ನಲ್ಲಿ
ನಡೆಸಿ,
ತಡೆಯಾಜ್ಞೆ
ನೀಡಲು
ಸಾಧ್ಯವಿಲ್ಲ
ಎಂದು
ಆದೇಶ
ನೀಡಲಾಗಿತ್ತು.
[ಯಾಕೂಬ್
ಗಲ್ಲಿ,
ಮಧ್ಯರಾತ್ರಿ
ಹೈಡ್ರಾಮ]
ಈ ತ್ರಿ ಸದಸ್ಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಅವರಿಗೆ ಬೆದರಿಕೆ ಪತ್ರ ಬಂದಿದ್ದು, ದೆಹಲಿ ಪೊಲೀಸರು ಅವರಿಗೆ ಹೆಚ್ಚಿನ ಭದ್ರತೆ ನೀಡಿದ್ದಾರೆ ಮತ್ತು ಬೆದರಿಕೆ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪತ್ರವನ್ನು ಯಾರು ಬರೆದಿರಬಹುದು? ಎಂದು ತನಿಖೆ ನಡೆಸಲಾಗುತ್ತಿದೆ. [ಮುಂಬೈ ಸ್ಫೋಟ Timeline]
ಎಲ್ಲರಿಗೂ ಭದ್ರತೆ ನೀಡಲಾಗಿದೆ : ಜುಲೈ 30ರಂದು ಸುಪ್ರೀಂಕೋರ್ಟ್ನ ಹಾಲ್ ನಂ 4ರಲ್ಲಿ ಮುಂಜಾನೆ 1.30ಕ್ಕೆ ಯಾಕೂಬ್ ಅರ್ಜಿಯ ವಿಚಾರಣೆ ನಡೆಸಿದ್ದ ತ್ರಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರಿಗೆ ಯಾಕೂಬ್ ಗಲ್ಲು ಶಿಕ್ಷೆಯ ಬಳಿಕ ಭದ್ರತೆ ಒದಗಿಸಲಾಗಿದೆ. [ಗಲ್ಲು ಶಿಕ್ಷೆಯ ಅರ್ಜಿ ರಾತ್ರಿ ವಿಚಾರಣೆ ನಡೆದಿದ್ದು ಮೊದಲಲ್ಲ]
ಟೈಗರ್ ಮೆಮನ್ ಕರೆ : ಯಾಕೂಬ್ ಗಲ್ಲು ಶಿಕ್ಷೆಯ ನಂತರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಮತ್ತು ಯಾಕೂಬ್ ಸಹೋದರ ಟೈಗರ್ ಮೆಮನ್ ಮುಂಬೈನಲ್ಲಿರುವ ಕುಟುಂಬದವರಿಗೆ ಕರೆ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಯಾಕೂಬ್ ಗಲ್ಲು ಶಿಕ್ಷೆಗೆ ಕೆಲವೇ ಗಂಟೆಗಳ ಹಿಂದೆ ಟೈಗರ್ ಮೆಮನ್ ಮುಂಬೈಗೆ ಕರೆ ಮಾಡಿದ್ದ ಎಂದು ಹೇಳಲಾಗುತ್ತಿದೆ. ಗಲ್ಲು ಶಿಕ್ಷೆಗೆ ಪ್ರತೀಕಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದ ಎಂದು ತಿಳಿದುಬಂದಿದೆ. ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.