ಕ್ರೀಡಾಕೂಟಕ್ಕೆಂದು ಗನ್ ಕೊಂಡೊಯ್ದಿದ್ದೇ ತಪ್ಪಾಯ್ತಾ?
ನವದೆಹಲಿ, ಮೇ 9: ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯಲಿರುವ ಐಎಸ್ಎಸ್ಎಫ್ ಶೂಟಿಂಗ್ ಚಾಂಪಿಯನ್ ಶಿಪ್ ಗೆ ತರಳಲು ಆಗಮಿಸಿದ್ದ ಭಾರತೀಯ ಶೂಟರ್ ಗಳ ತಂಡವನ್ನು ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗಳು ಅನುಮಾನಗೊಂಡು ವಿಚಾರಣೆಗೊಳಪಡಿಸಿರುವ ಘಟನೆ ಮಂಗಳವಾರ ನಡೆದಿದೆ.
ಭಾರತೀಯ ಶೂಟರ್ ಗಳೆಂದು, ಕ್ರೀಡಾಕೂಟಕ್ಕಾಗಿ ತೆರಳುತ್ತಿರುವುದಾಗಿ ಹೇಳಿದರೂ, ಅವರು ಕೊಂಡೊಯ್ಯಬೇಕಿದ್ದ ಬಂದೂಕುಗಳನ್ನು ಕ್ರೀಡಾಳುಗಳು ಕೊಂಡೊಯ್ಯಲು ಅಧಿಕಾರಿಗಳು ಅನುಮತಿ ನೀಡದೇ ಸತಾಯಿಸಿದ್ದಾರೆ.

ಈ ಘಟನೆ ಬಗ್ಗೆ ಒಲಿಂಪಿಕ್ಸ್ ಚಿನ್ನ ವಿಜೇತ ಹಾಗೂ ಮಾಜಿ ಶೂಟರ್ ಅಭಿನವ್ ಬಿಂದ್ರಾ ಅವರು ಬೇಸರ ವ್ಯಕ್ತಪಡಿಸಿದ್ದು, ಕ್ರಿಕೆಟ್ ಆಟಗಾರರೊಂದಿಗೆ ಯಾವತ್ತೂ ಇಂಥ ಘಟನೆಗಳು ಜರುಗುವುದಿಲ್ಲ. ಆದರೆ, ಇತರ ಕ್ರೀಡೆಗಳ ಆಟಗಾರರ ಜತೆ ಮಾತ್ರ ಇಂಥ ಘಟನೆಗಳು ನಡೆಯುತ್ತವೆ ಎಂದು ಬೇಸರಿಸಿದ್ದಾರೆ.












Click it and Unblock the Notifications