ಗಣರಾಜ್ಯೋತ್ಸವ: ಮೊದಲ ಬಾರಿಗೆ ಬಾಂಗ್ಲಾದೇಶ ಮಾರ್ಚಿಂಗ್ ತಂಡ ಭಾಗಿ
ನವದೆಹಲಿ, ಜನವರಿ 26: ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಬಾಂಗ್ಲಾದೇಶದ ಮಾರ್ಚಿಂಗ್ ತಂಡ ಭಾಗಿಯಾಗಿದೆ.
ಬಾಂಗ್ಲಾದೇಶದ ಸೇನಾ ಪಡೆ, ನೌಕಾಪಡೆ, ವಾಯುಪಡೆಗಳಿಂದ 122 ಸದಸ್ಯರನ್ನೊಳಗೊಂಡ ಪಡೆಯನ್ನು ಕಂಟಿಂಜೆಂಟ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಅಬು ಮೊಹಮ್ಮದ್ ಶಹನೂರ್ ಶಾವೊನ್, ಲೆಫ್ಟಿನೆಂಟ್ ಫರ್ಹಾನ್ ಇಶ್ರಕ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಸಿಬತ್ ರಹಮಾನ್ ಮುನ್ನಡೆಸಿದರು.
ಬಾಂಗ್ಲಾ ವಿಮೋಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪೂರ್ವ ಬಂಗಾಳ ರೆಜಿಮೆಂಟ್ ನ 1,2,3,4,8,9,10 ಹಾಗೂ 11 ನೇ ಬೆಟಾಲಿಯನ್ ಹಾಗೂ ಫೀಲ್ಡ್ ರೆಜಿಮೆಂಟ್ ಆರ್ಟಿಲರಿಯ 1,2 ಹಾಗೂ ಮೂರನೇ ಬೆಟಾಲಿಯನ್ ಇಂದಿನ ಪರೇಡ್ ನಲ್ಲಿ ಭಾಗಿಯಾಗಿತ್ತು.

ಬಾಂಗ್ಲಾ ದೇಶದ ವಿಮೋಚನೆಯ 50 ನೇ ವರ್ಷದ ನೆನಪಿಗಾಗಿ ಟ್ರೈ ಸರ್ವೀಸಸ್ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗಿಯಾಗಿದೆ. ರಫೇಲ್ ಯುದ್ಧವಿಮಾನ, ದೇಶದ ಮಹಿಳಾ ಫೈಟರ್ ಪೈಲಟ್, ಅಯೋಧ್ಯೆ ರಾಮಮಂದಿರ ಮೊದಲಾದವುಗಳು ಈ ಬಾರಿಯ ಪರೇಡ್ ಮತ್ತು ಸ್ತಬ್ದಚಿತ್ರ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ ಆಗಿದ್ದವು.
ಈ ಬಾರಿಯ 72ನೇ ಗಣರಾಜ್ಯೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಮೊದಲ ಬಾರಿಗೆ ಮುಖ್ಯ ಅತಿಥಿ ಇಲ್ಲದೆಯೇ ಗಣರಾಜ್ಯೋತ್ಸವ ನಡೆಯಿತು. ಆದರೆ, ಗಣರಾಜ್ಯೋತ್ಸವದ ಶಿಸ್ತು ಮತ್ತು ವೈಭವ ಎಂದಿನಂತೆ ಈ ವರ್ಷವೂ ಇತ್ತು.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಪೆರೇಡ್ನಲ್ಲಿ ಭಾಗಿಯಾದರು. ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ಗಳಲ್ಲಿ ಭಾವನಾ ಒಬ್ಬರು. ರಿಪಬ್ಲಿಕ್ ಪೆರೇಡ್ನಲ್ಲಿ ಮಹಿಳಾ ಫೈಟರ್ ಪೈಲಟ್ ಭಾಗಿಯಾಗಿದ್ದು ಇದೇ ಮೊದಲು. ವಿವಿಧ ಫೈಟರ್ ವಿಮಾನ, ಕಾಪ್ಟರ್ಗಳ ಪ್ರತಿಕೃತಿಗಳನ್ನ ತೋರಿಸುವ ಸ್ತಬ್ದಚಿತ್ರಗಳ ವ್ಯವಸ್ಥೆಯ ಭಾಗವಾಗಿ ಅವರು ಪಾಲ್ಗೊಂಡರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications