ಮಥುರಾದಲ್ಲಿ ಮಿರಾಜ್ 2000 ಸೂಪರ್ ಲ್ಯಾಂಡಿಂಗ್
ನವದೆಹಲಿ, ಮೇ.21: ಭಾರತೀಯ ವಾಯು ಸೇನೆ (IAF) ಗೆ ಸೇರಿರುವ ಮಿರಾಜ್ 2000 ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಲ್ಯಾಂಡ್ ಆಗಿದೆ. ತುರ್ತು ಭೂಸ್ಪರ್ಶ ಸಂದರ್ಭದಲ್ಲಿ ಈ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಲು ನಡೆದ ಪ್ರಾಯೋಗಿಕ ಪರೀಕ್ಷೆ ಗುರುವಾರ ಯಶಸ್ವಿಯಾಗಿದೆ.
ಇದೇ ಮೊದಲ ಬಾರಿಗೆ ರಸ್ತೆಯ ಮೇಲೆ ಮಿರಾಜ್ 200 ಲ್ಯಾಂಡ್ ಪರೀಕ್ಷಾರ್ಥ ಪ್ರಯತ್ನ ಯಶಸ್ವಿಯಾಗಿದೆ.ಆಗ್ರಾ ಹಾಗೂ ಲಕ್ನೋ ಎಕ್ಸ್ ಪ್ರೆಸ್ ವೇ ನಲ್ಲಿ ಇದೇ ಮೊದಲ ಬಾರಿಗೆ ಮಿಲಿಟರಿ ವಿಮಾನವೊಂದು ರಸ್ತೆ ಪಥವನ್ನು ರನ್ ವೇ ಮಾದರಿಯಲ್ಲಿ ಬಳಸಿಕೊಂಡಿದೆ.

ಟ್ರಾಫಿಕ್ ಜಾಮ್ : ಹೆದ್ದಾರಿ ಮೇಲೆ ಮಿರಾಜ್ ಇಳಿಯುವುದನ್ನು ನೋಡಲು ಟ್ರಾಫಿಕ್ ನಿಲ್ಲಿಸಲಾಗಿತ್ತು. ಮೇ.25 ರಂದು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ಈ ಪ್ರಯೋಗಾರ್ಥ ಹಾರಾಟ ನಡೆಸಲಾಗಿದೆ.
ಯಮುನಾ ಎಕ್ಸ್ ಪ್ರೆಸ್ ವೇನ 3 ಕಿ.ಮೀ ವಿಸ್ತ್ರೀರ್ಣವನ್ನು ರನ್ ವೇ ರೀತಿ ಬಳಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಸಂಪೂರ್ಣ ವೆಚ್ಚವನ್ನು ಭಾರತೀಯ ವಾಯುಸೇನೆ ಭರಿಸಲಿದೆ.
The IAF has been considering the use of national highways for emergency landing by fighter aircraft: IAF
— ANI (@ANI_news) May 21, 2015 ಚೀನಾ, ಪಾಕಿಸ್ತಾನ, ಸ್ವೀಡನ್, ಜರ್ಮನಿ ಹಾಗೂ ಸಿಂಗಪುರದಲ್ಲಿ ಇದೇ ರೀತಿ ಎಕ್ಸ್ ಪ್ರೆಸ್ ವೇಗಳನ್ನು ಮಿಲಿಟರಿ ವಿಮಾನ ಲ್ಯಾಂಡಿಂಗ್ ಮಾಡಲು ಬಳಸಿಕೊಳ್ಳಲಾಗುತ್ತಿದೆ.
ಕಳೆದ ತಿಂಗಳಷ್ಟೇ ಸುಧಾರಿತ ಮಿರಾಜ್ 200 ಏರ್ ಕ್ರಾಫ್ಟ್ ಗಳನ್ನು ಫ್ರಾನ್ಸ್ ನಿಂದ ಪಡೆದುಕೊಳ್ಳಲಾಯಿತು. 10,000 ಕೋಟಿ ಡೀಲ್ ಇದಾಗಿದೆ. 1980ರಲ್ಲಿ ಸುಮಾರು 49 ಮೀರಜ್ ಏರ್ ಕ್ರಾಫ್ಟ್ ಭಾರತೀಯ ವಾಯುಸೇನೆ ಸೇರಿದೆ.
(ಒನ್ ಇಂಡಿಯಾ ಸುದ್ದಿ)
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications