ನೀರಾವರಿ ಯೋಜನೆ ಪೂರೈಸಿ.. ದೆಹಲಿಯಲ್ಲಿ ಗುಡುಗಿದ ಗೌಡ್ರು
ನವದೆಹಲಿ, ಮಾರ್ಚ್ 04 : 'ಎತ್ತಿನಹೊಳೆ, ಮೇಕೆದಾಟು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಹಾಸನ ಸಂಸದ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದರು.
ಕೋಲಾರ,
ಚಿಕ್ಕಬಳ್ಳಾಪುರ
ಜಿಲ್ಲೆಗಳಿಗೆ
ಶಾಶ್ವತ
ನೀರಾವರಿ
ಯೋಜನೆ
ರೂಪಿಸಿ
ಎಂದು
ರೈತರು
ಹೋರಾಟ
ನಡೆಸುತ್ತಿರುವ
ಹಿನ್ನಲೆಯಲ್ಲಿ,
ನವದೆಹಲಿಯ
ತಮ್ಮ
ನಿವಾಸದಲ್ಲಿ
ಶುಕ್ರವಾರ
ಪತ್ರಿಕಾಗೋಷ್ಠಿ
ನಡೆಸಿದ
ದೇವೇಗೌಡರು,
'ನೀರಾವರಿ
ಯೋಜನೆಗಳನ್ನು
ತ್ವರಿತವಾಗಿ
ಪೂರ್ಣಗೊಳಿಸಿ'
ಎಂದು
ಆಗ್ರಹಿಸಿದರು.
[ರೈತರಿಗೆ
ಲಾಠಿ
ರುಚಿ
ತೋರಿಸಿದ
ಸರ್ಕಾರ]
ಗುರುವಾರ ಪತ್ರಿಭಟನೆ ಬೆಂಗಳೂರಿನಲ್ಲಿ ಪತ್ರಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಸರ್ಕಾರದ ಕ್ರಮವನ್ನು ಖಂಡಿಸಿದ ದೇವೇಗೌಡರು, 'ನೀರು ಕೇಳಲು ಬಂದ ರೈತರಿಗೆ ಸಮಾಧಾನದಿಂದ ಉತ್ತರಿಸಬೇಕಿತ್ತು. ಅದನ್ನು ಬಿಟ್ಟು ಲಾಠಿ ಹಿಡಿದಿದ್ದು ನೋವಿನ ಸಂಗತಿ' ಎಂದರು. [ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]
'ಕೋಲಾರ
ಮತ್ತು
ಚಿಕ್ಕಬಳ್ಳಾಪುರ
ಜಿಲ್ಲೆಗಳಿಗೆ
ನೀರು
ತರುವ
ಪ್ರಯತ್ನ
ಬಹಳ
ಹಿಂದಿನಿಂದಲೂ
ನಡೆದಿದೆ.
ರೈತರು
ಪ್ರತಿಭಟನೆ
ನಡೆಸಲು
ಬಂದಾಗ
ಮುಂದೇನು
ಎಂಬ
ವಾಸ್ತವವನ್ನು
ಅವರಿಗೆ
ತಿಳಿಸಬೇಕಿತ್ತು.
ರೈತರ
ಮೇಲೆ
ಲಾಠಿ
ಪ್ರಹಾರ
ಮಾಡಿದ್ದು
ಹೇಯ
ಕೃತ್ಯ'
ಎಂದು
ಹೇಳಿದರು.
[ಏನಿದು
ಕಳಸಾ-ಬಂಡೂರಿ
ಯೋಜನೆ?]
'ಎತ್ತಿನಹೊಳೆ, ಮೇಕೆದಾಟು, ಕಳಸಾ-ಬಂಡೂರಿ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳು ವಿವಿಧ ಹಂತಗಳಲ್ಲಿವೆ. ರಾಜ್ಯ ಸರ್ಕಾರ ಆದ್ಯತೆಯ ಮೇಲೆ ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.