ಮೋದಿ ಜೊತೆ ದೇವೇಗೌಡರ ಚಾಯ್ ಪೇ ಚರ್ಚಾ
ಬೆಂಗಳೂರು, ಜೂ. 04 : ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬುಧವಾರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೃಷಿಕರನ್ನು ಕಡೆಗಣಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಭರವಸೆ ನೀಡಿದ್ದಾರೆ.
ಬುಧವಾರ
ಸಂಜೆ
ನವದೆಹಲಿಯ
7
ರೇಸ್ಕೋರ್ಸ್
ರಸ್ತೆಯ
ನರೇಂದ್ರ
ಮೋದಿ
ಅವರ
ನಿವಾಸಕ್ಕೆ
ತೆರಳಿದ
ದೇವೇಗೌಡರು
ಮೋದಿ
ಅವರನ್ನು
ಭೇಟಿ
ಮಾಡಿದರು.
ಕೆಲವು
ದಿನಗಳ
ಹಿಂದೆ
ಮಾಜಿ
ಪ್ರಧಾನಿ
ಮನಮೋಹನ್
ಸಿಂಗ್
ಅವರನ್ನು
ಭೇಟಿಗೆ
ಆಹ್ವಾನಿಸಿದ್ದ
ಮೋದಿ,
ದೇವೇಗೌಡರನ್ನು
ಆಹ್ವಾನಿಸಿದ್ದರು.
[ದೇವೇಗೌಡರನ್ನು
ಮಾತುಕತೆಗೆ
ಆಹ್ವಾನಿಸಿದ
ಮೋದಿ]
ಭೇಟಿಯ ಸಂದರ್ಭದಲ್ಲಿ 'ಕೃಷಿ ಕ್ಷೇತ್ರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಪ್ರಸ್ತಾಪಿಸಿದ್ದೇನೆ. ರೈತರ ಬಗ್ಗೆ ಕಾಳಜಿಯಿರುವುದಾಗಿ ಕೃಷಿಕರನ್ನು ಕಡೆಗಣಿಸುವುದಿಲ್ಲ ಎಂದು ಮೋದಿ ಭರವಸೆ ನೀಡಿದ್ದಾರೆ' ಎಂದು ಭೇಟಿಯ ನಂತರ ದೇವೇಗೌಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಮೋದಿ ಮೋಡಿ: ದೊಡ್ಡಗೌಡ್ರ ಹೃದಯ ಗೆದ್ದ ಮೋದಿ]
ಮೋದಿ ಅವರ ಜೊತೆ ದೇವೇಗೌಡರು ಭೂಸ್ವಾಧೀನ ಕಾಯ್ದೆಯ ಬಗ್ಗೆ, ಕರ್ನಾಟಕದಲ್ಲಿ ನೈಸ್ ರಸ್ತೆ ನಿರ್ಮಾಣಕ್ಕೆ ರೈತರ ಭೂಮಿ ಕಬಳಿಕೆ ಮಾಡಿದ ಹಗರಣದ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. [ಮೋದಿಗೆ ದೇವೇಗೌಡರು ಪತ್ರ ಬರೆದಿದ್ದೇಕೆ?]
ಭೂಸ್ವಾಧೀನ ಕಾಯ್ದೆ ಬಗ್ಗೆ ಸದ್ಯಕ್ಕೆ ಜೆಡಿಎಸ್ ಪಕ್ಷ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಸಂಸತ್ ಜಂಟಿ ಸದನದ ತಿರ್ಮಾನದ ನಂತರ ಜೆಡಿಎಸ್ ಪಕ್ಷದ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿ ತೃಪಿಕರವಾಗಿತ್ತು ಎಂದು ದೇವೇಗೌಡರು ತಿಳಿಸಿದ್ದಾರೆ.