ಕೊನೆಗೂ ಹುಬ್ಬಳ್ಳಿ ಹುಡುಗನ ಸೇರಿದ ಪಾಕಿಸ್ತಾನಿ ಹುಡುಗಿ
ಎರಡು ಶತ್ರು ರಾಷ್ಟ್ರದ ನಡುವಿನ ರಾಜತಾಂತ್ರಿಕ ವೈಮನಸ್ಯಗಳನ್ನೆಲ್ಲ ಮರೆಸುವ ಪಾಕಿಸ್ತಾನದ ಸಿಲ್ವಿಯಾ ನೊರೀನ್ ಮತ್ತು ಹುಬ್ಬಳ್ಳಿ ಡೇನಿಯಲ್ ದೇವನೂರ್ ಎಂಬ ಮುಗ್ಧಪ್ರೇಮಿಗಳ ಪ್ರೇಮಕತೆಯಿದು.
ನವದೆಹಲಿ, ಏಪ್ರಿಲ್ 24: ಪ್ರೀತಿಗೆ ಕಣ್ಣಿಲ್ಲ, ಮಾತ್ರವಲ್ಲ ಅದಕ್ಕೆ ಜಾತಿ, ಮತ, ದೇಶವೆಂಬ ಎಲ್ಲೆಯೂ ಇಲ್ಲ! ಹೌದು ಪ್ರೇಮಕ್ಕೆ ಗಡಿಯಿಲ್ಲ ಎಂಬುದನ್ನು ಸಾಬೀತುಪಡಿಸಲು ಗಡಿ ದಾಟಿ ಬಂದ ಪಾಕಿಸ್ತಾನದ ಸಿಲ್ವಿಯಾ ನೊರೀನ್ ಕತೆ ಇದು. ಎರಡು ಶತ್ರು ರಾಷ್ಟ್ರದ ನಡುವಿನ ರಾಜತಾಂತ್ರಿಕ ವೈಮನಸ್ಯಗಳನ್ನೆಲ್ಲ ಮರೆಸುವ ಮುಗ್ಧ ಪ್ರೇಮಕತೆಯಿದು.
ಪಾಕಿಸ್ತಾನದ ಪ್ರಜೆಯಾಗಿದ್ದ ಸಿಲ್ವಿಯಾ ನೊರೀನ್ ರನ್ನು ಡೇನಿಯಲ್ ದೇವನೂರ್ ಎಂಬ ಹುಬ್ಬಳ್ಳಿಯ ಹುಡುಗ ಗಹನವಾಗಿ ಪ್ರೀತಿಸುತ್ತಿದ್ದರು. ಇಬ್ಬರೂ ದೂರ ಸಂಬಂಧಿಗಳೂ ಆಗಿದ್ದರಿಂದ ಎರಡು ಕುಟುಂಬದಿಂದಲೂ ಇಬ್ಬರ ಮದುವೆಗೆ ಸಮ್ಮತಿಯಿತ್ತು. ಆದರೆ ಸಿಲ್ವಿಯಾ ಇದ್ದಿದ್ದು ಪಾಕಿಸ್ಥಾನದಲ್ಲಿ. ಡೇನಿಯಲ್ ಇದ್ದಿದ್ದು ಕರ್ನಾಟಕದ ಹುಬ್ಬಳ್ಳಿಯಲ್ಲಿ![ಬೆಂಗಳೂರಿನ ಆಸ್ಪತ್ರೆಯಲ್ಲಿ ಪಾಕ್ ಪುಟಾಣಿಗೆ ಮರುಜನ್ಮ]

ಉಭಯ ಕುಟುಂಬಗಳ ಸಮ್ಮುಖದಲ್ಲಿ ಇವರಿಬ್ಬರ ವಿವಾಹ 2016ರ ಜೂನ್ 25 ರಂದೇ ನಡೆದಿದ್ದರೂ, ಆಕೆ ಪತಿಯ ಮನೆಗೆ ಬರುವುದಕ್ಕೆ ಹಲವು ಅಡೆತಡೆಗಳಿದ್ದವು. ಆಕೆ ಭಾರತಕ್ಕೆ ವಾಪಸಾಗಲು ಅಗತ್ಯವಿದ್ದ ಸ್ಪಾನ್ಸರ್ಶಿಪ್ ಸರ್ಟಿಫಿಕೇಟ್ ಗಾಗಿ ಡೇನಿಯಲ್ ಸಾಕಷ್ಟು ಅಧಿಕಾರಿಗಳ ಬಳಿ ಓಡಾಡಿದ್ದರು. ಆಕೆಯ ಭಾರತ ಪ್ರಯಾಣಕ್ಕೆ ಅಗತ್ಯವಿದ್ದ ಗೆಜೆಟೆಡ್ ಆಫೀಸರ್ ವೊಬ್ಬರ ಸಹಿ ಸಿಗದೆ ಡೇನಿಯಲ್ ಪರಿತಪಿಸುತ್ತಿದ್ದರು.[ಸ್ನೇಹ ರೂಪಕದ ಹೃದಯದೊಂದಿಗೆ ನೂರ್ಫಾತಿಮಾ ಪಾಕ್ನತ್ತ]
ಈ ಸಂದಿಗ್ಧದಲ್ಲಿ ಅವರಿಗೆ ನೆನಪಾಗಿದ್ದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ . ಏನಾದರಾಗಲಿ ಎಂದು ಅವರಿಗೆ ಈ ಬಗ್ಗೆ ಟ್ವೀಟ್ ಸಹ ಮಾಡಿದ್ದರು. ಸಚಿವರಿಗೆ ಟ್ವೀಟ್ ಮಾಡುತ್ತಿದ್ದಂತೆಯೇ ಅವರಿಗೆ ಅತ್ಯವಿದ್ದ ಸಹಿಯೂ ಸಿಕ್ಕಿತ್ತು! ಡೇನಿಯಲ್ ಅವರ ಸತತ ಪರಿಶ್ರಮಕ್ಕೆ ಫಲ ದೊರೆತಿದ್ದು, ಇದೀಗ ಸಿಲ್ವಿಯಾ ದೆಹಲಿಗೆ ಬಂದಿಳಿದಿದ್ದಾರೆ!
ಈ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ನೆರವು ನೀಡುವಂತೆ ಸಂಸದ ಪ್ರಹ್ಲಾದ್ ಜೋಷಿ ಮತ್ತು ಜಗದೀಶ್ ಶೆಟ್ಟರ್ ಅವರನ್ನೂ ಡೇನಿಯಲ್ ಕೇಳಿದ್ದರು. ಅವರಿಂದಲೂ ಧನಾತ್ಮಕ ಪ್ರತಿಕ್ರಿಯೆ ಬಂದಿತ್ತು.
ಸದ್ಯಕ್ಕೆ ಮೆಚ್ಚಿನ ಸೊಸೆಯನ್ನು ಮನೆ ತುಂಬಿಸಿಕೊಳ್ಳಲು ಹುಬ್ಬಳ್ಳಿಯಲ್ಲಿ ಡೇನಿಯಲ್ ಕುಟುಂಬ ಕಾತರದಿಂದ ಕಾಯುತ್ತಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications