ಸಚಿವ ಸ್ಥಾನಕ್ಕಾಗಿ ದೆಹಲಿಗೆ ಡಿಕೆಶಿ, ವಿಸ್ತರಣೆ ಇಲ್ಲ ಸಿಎಂ!
ನವದೆಹಲಿ, ಡಿ. 20 : ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಕನಕಪುರ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಲೋಕಸಭೆ ಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆಗೆ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ.
ಗುರುವಾರ
ಡಿ.ಕೆ.ಶಿವಕುಮಾರ್
ಕೇಂದ್ರ
ರೈಲ್ವೆ
ಸಚಿವ
ಮಲ್ಲಿಕಾರ್ಜುನ
ಖರ್ಗೆ,
ಭೂಸಾರಿಗೆ
ಸಚಿವ
ಅಸ್ಕರ್
ಫರ್ನಾಂಡಿಸ್,
ಸಣ್ಣ
ಮತ್ತು
ಮಧ್ಯಮ
ಕೈಗಾರಿಕೆ
ಸಚಿವ
ಕೆ.ಎಚ್.ಮುನಿಯಪ್ಪ
ಅವರನ್ನು
ಭೇಟಿಯಾಗಿ
ರಾಜ್ಯದ
ರಾಜಕೀಯ
ಬೆಳವಣಿಗೆಗಳ
ಮಾಹಿತಿ
ನೀಡಿದರು.
ಹೈಕಮಾಂಡ್
ನಾಯಕರು
ಸಂಪುಟ
ವಿಸ್ತರಣೆಗೆ
ಅನುಮತಿ
ನೀಡಿದ್ದರೂ,
ಸಿಎಂ
ಸಿದ್ದರಾಮಯ್ಯ
ವಿಳಂಬ
ಮಾಡುತ್ತಿದ್ದಾರೆ
ಎಂದು
ಮಾಹಿತಿ
ನೀಡಿದ್ದಾರೆ
ಎಂದು
ತಿಳಿದು
ಬಂದಿದೆ.
ಶಿವಕುಮಾರ್ ಅವರ ಜೊತೆಗಿನ ಮಾತುಕತೆ ವೇಳೆ ಆಸ್ಕರ್ ಫರ್ನಾಂಡೀಸ್, ಸಚಿವ ಸ್ಥಾನ ನೀಡುವ ಭರವಸೆ ನೀಡಲಿಲ್ಲ ಬದಲಾಗಿ, ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದು, ಸರ್ಕಾರ ಸುಗಮವಾಗಿ ಕಾರ್ಯನಿರ್ವಹಿಸಲು ಸಹಕಾರ ನೀಡಬೇಕು ಎಂದು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. [ಡಿಕೆಶಿಗೆ ಸಚಿವ ಸ್ಥಾನ?]
ಕಾಂಗ್ರೆಸ್ ನಾಯಕರು ಸದ್ಯ ಲೋಕಸಭೆ ಚುನಾವಣೆ ಬಗ್ಗೆ ಗಮನಹರಿಸುತ್ತಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಸಂಪುವ ವಿಸ್ತರಣೆ ನಿರ್ಧಾರವನ್ನು ಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಲು ಸಹಾಯಕವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಸಂಪುಟ ವಿಸ್ತರಣೆ ಬಿಕ್ಕಟ್ಟು ಕಾವು ಕಳೆದುಕೊಳ್ಳುತ್ತಿದೆ. [ಡಿಕೆಶಿ ಮೇಲಿನ ಆರೋಪಗಳಿಗೆ ಸಿಬಲ್ ಕ್ಲೀನ್ ಚಿಟ್]
ಹೈಕಮಾಂಡ್ ಹೇಳಿದರೆ ಸಂಪುಟ ವಿಸ್ತರಣೆ : ಗುರುವಾರ ಬೆಂಗಳೂರಿನಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಸೂಚನೆ ಕೊಟ್ಟಾಗ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಸಂಪುಟ ವಿಸ್ತರಿಸುವಂತೆ ನನ್ನ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಿರುವುದು ಸಹಜ. ಎಲ್ಲಾ ಪಕ್ಷಗಳಲ್ಲೂ ಇದು ಸಾಮಾನ್ಯವಾದ ವಿಷಯ. ಆದ್ದರಿಂದ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವ ಪರೋಕ್ಷ ಸುಳಿವನ್ನು ನೀಡಿದ್ದಾರೆ.